ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ....

ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ....

ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ಬಗ್ಗೆ...ನಾನು ಬರೆದು ಹಾಕಬೇಕಿದೆ ..
ಆಲೂರು ವೆಂಕಟರಾಯರು ಅವರು ಕುಲ ಪುರೋಹಿತ ಆದದ್ದು ಹೇಗೆ? ಏಕೆ ?
ಅವರ 'ನನ್ನ ಜೀವನ ಸ್ಮೃತಿಗಳು' ಕನ್ನಡಿಗರೆಲ್ಲರೂ ಓದಬೇಕಾದ ಪುಸ್ತಕ . ಆದರೆ ಅದು ಮಾರುಕಟ್ಟೆಯಲ್ಲಿ ಇಲ್ಲ . ಪ್ರಕಾಶಕರು - ಮನೋಹರ ಗ್ರಂಥಮಾಲೆ , ಧಾರವಾಡ .ಅವರ ಹತ್ತಿರವೂ ಪ್ರತಿಗಳು ಇಲ್ಲ .
ಅವರು ಏನು ಮಾಡಿದರು ? ಅನ್ನುವದು ಬೇರೆಡೇ ಸಿಕ್ಕೀತು . ಆದರೆ ಏಕೆ ಮಾಡಿದರು?
ನಿಮಗೆ ಗೊತ್ತೆ? ಕನ್ನಡ/ ಕರ್ನಾಟಕದ ಬಗ್ಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.
ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ. ನನ್ನ ಗುರಿ -
ಕನ್ನಡ / ಕರ್ನಾಟಕ ದ ಮೂಲಕವೇ ನನ್ನ ಸಮಾಜ ಸೇವೆ / ದೇಶಸೇವೆ/ ದೇವರ ಸೇವೆ.
ಅಂತ ಯೋಚಿಸಿ ಆ ಪ್ರಕಾರ ಕರ್ನಾಟಕ/ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರು . ತಮ್ಮ ಉದ್ದೇಶ ಈಡೇರಿದ ಮೇಲೆ ನಂತರ ಸಮಾಜ್ಕ ಜೀವನದಿಂದ ಹಿಂದೆ ಸರಿದು ಆಧ್ಯಾತ್ಮಕ್ಕೆ ಹೋದರು. ಈ ಬದಲಾವಣೆ ಅವರ ಜೀವನದಲ್ಲಿ ಹೇಗೆ ಬಂತು ಎಂಬುದು ಕುತೂಹಲಕರ.

'ನಾನು ಜಾಣನಲ್ಲ ; ಜನಬಲ ಧನಬಲ ಬುದ್ಧಿಬಲ ಏನೂ ಇಲ್ಲ ...
ಜನರನ್ನು ಹುರಿದುಂಬಿಸುವ ಭಾಷಣ ಕಲೆಯೂ ನನ್ನಲ್ಲಿಲ್ಲ ....
ಆದರೆ ಈ ಕಣಸು (vision) - ಕನ್ನಡ ಎಂಬುದು ನನ್ನಂಥ ಸಾಮಾನ್ಯನಿಗೆ ಈ ಶಕ್ತಿ ಕೊಟ್ಟಿತು.' ಎಂದರು.

ಸ್ವಲ್ಪ ಸಮಯ ಸಿಗಬೇಕಿದೆ . ಬರೆಯುವೆ.
ನಿರೀಕ್ಷಿಸಿ.

Rating
No votes yet

Comments