ಪುಸ್ತಕ ಪರಿಚಯ

ಲೇಖಕರು: Ashwin Rao K P
January 05, 2023
ಒಬ್ಬ ಲೇಖಕಿಯ ಹಲವು ಬರಹಗಳ ಹಾಸುಹೊಕ್ಕಿನಲ್ಲಿಯೇ ಆಕೆಯ ಜೀವನದರ್ಶನ ಮಾಗುತ್ತದೆ, ಸಂಕೀರ್ಣವಾಗುತ್ತದೆ. ಇವರ ‘ಅ ಟೆರಿಬಲ್ ಮೇಟ್ರಿಯಾರ್ಕಿ’, ‘ಬಿಟರ್ ವುಮನಹುಡ್’ ಮುಂತಾದ ಕಾದಂಬರಿಗಳೂ ಕನ್ನಡಕ್ಕೆ ಬಂದರೆ ಹಲಬಗೆಯ, ಭಿನ್ನ, ಸಂಕೀರ್ಣ ಕಥನವಿನ್ಯಾಸವೊಂದು ಕನ್ನಡಕ್ಕೆ ದಕ್ಕುತ್ತದೆ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ಲೇಖಕಿ ಜ.ನಾ. ತೇಜಶ್ರೀ. ಅವರು ರವಿ ಹಂಪಿ ಅವರ ನದಿಯೊಂದು ನಿದ್ರಿಸಿದಾಗ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ... “ಕನ್ನಡ ನೆಲದಲ್ಲಿ ಕಣ್ಣುಬಿಡುತ್ತಿರುವ ನಾಗಾಲ್ಯಾಂಡಿನ…
ಲೇಖಕರು: addoor
January 05, 2023
ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿದ 30 ಕತೆಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ನಿಕ್ ಗ್ರೀವ್ಸ್. ಇಂಗ್ಲೆಂಡಿನಲ್ಲಿ ಜನಿಸಿದ ಅವರು ಕಾಲೇಜು ಶಿಕ್ಷಣ ಪಡೆದದ್ದು ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದಕ್ಷಿಣ ಆಫ್ರಿಕಾದ ದೊಡ್ಡ ಗಣಿಪ್ರದೇಶದಲ್ಲಿ ದುಡಿಯಲು ಹೋದರು. ತಮ್ಮ ಉದ್ಯೋಗದ ಸಲುವಾಗಿ ಅವರು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಬೊಟ್ಸ್-ವಾನಾ ಹಾಗೂ ನೈಋತ್ಯ ಆಫ್ರಿಕಾದ ಕುಗ್ರಾಮಗಳಿಗೆ ಹೋಗಬೇಕಾಯಿತು. ಈ ಅವಧಿಯಲ್ಲಿ ಅವರು ವನ್ಯಜೀವಿಗಳ ವೈವಿಧ್ಯತೆ ಮತ್ತು…
ಲೇಖಕರು: Ashwin Rao K P
January 03, 2023
ಉದಯೋನ್ಮುಖ ಲೇಖಕಿ ರಜನಿ ಭಟ್ ಕಲ್ಮಡ್ಕ ಇವರ ಮೊದಲ ಪ್ರಕಟಿತ ಕಾದಂಬರಿಯೇ ಸಂಧ್ಯಾದೀಪ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿ ಓದಿಸಿಕೊಂಡು ಹೋಗುವ ಈ ಕಾದಂಬರಿ ಮುಗಿದದ್ದೇ ಗೊತ್ತಾಗುವುದಿಲ್ಲ. ಲೇಖಕರೇ ತಮ್ಮ ಮುನ್ನುಡಿಯಲ್ಲಿ ಹೇಳಿದಂತೆ “ ನನಗೆ ಬಹಳಷ್ಟು ಕಾಡಿದ ಮನೆಯೆಂದರೆ ಉಪ್ಪರಿಗೆ ಮನೆ. ಚಿಕ್ಕಂದಿನಲ್ಲಿ ನನ್ನ ಅಜ್ಜನ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಡುವಾಗ ನಾವು ಅಡಗುತ್ತಿದ್ದುದು ಇದೇ ಉಪ್ಪರಿಗೆಯಲ್ಲಿ. ಅಲ್ಲಿ ಅಡಿಕೆ ಮಿಶ್ರಿತ ವಾತಾವರಣದ ಪರಿಮಳ, ತುಂಬಿದ ಭತ್ತದ ಚೀಲಗಳ ಪರಿಮಳ. ಮಳೆ ಬಂದರೆ…
ಲೇಖಕರು: Ashwin Rao K P
December 31, 2022
ಮುಂಬಯಿ ಬದುಕಿನ ಒಳಜಗತ್ತನ್ನು ಮಾರ್ಮಿಕವಾಗಿ ಚಿತ್ರಿಸುವ "ವಡಪಾವ್ ಕಟಿಂಗ್ ಚಾಯ್", "ಅನಾಥನಾಥ" ಹಾಗೂ "ಮುಂಬಯಿ ನಮ್ದೇ" ಕಥೆಗಳಿಗೆ ಮುಖಾಮುಖಿಯಾಗುವ ಊರಿನ "ಸೌದಾಮಿನಿ ಪ್ರಸಂಗ", "ಬದುಕು ಜಟಕಾ ಬಂಡಿ", "ಅವಲಂಬ", "ಭ್ರಾಂತ", "ಅಪರಾಧಿ" ಮೊದಲಾದ ಕಥೆಗಳು ಒಟ್ಟೂ ಬದುಕಿನ ಕಠೋರ ಸತ್ಯಗಳನ್ನು ಅನಾವರಣಗೊಳಿಸುವ ರೀತಿ ಅನನ್ಯವಾಗಿದೆ ಎನ್ನುತ್ತಾರೆ ಕವಿ ಸುಬ್ರಾಯ ಚೊಕ್ಕಾಡಿ. ಲೇಖಕ ಕುಮಾರಸ್ವಾಮಿ ತೆಕ್ಕುಂಜಯವರ ‘ವಡಾಪಾವ್ ಕಟಿಂಗ್ ಚಾಯ್’ ಕೃತಿಯಲ್ಲಿ ಅವರು ಬರೆದ ಬೆನ್ನುಡಿ ನಿಮ್ಮ ಓದಿಗಾಗಿ.. “…
December 30, 2022
ನಾಡಿನ ಖ್ಯಾತ ವಿಮರ್ಶಕರಾದ ನಟರಾಜ್ ಹುಳಿಯಾರ್ ಬರೆದ ಕಾಮನ ಹುಣ್ಣಿಮೆ ಎನ್ನುವ ಕಾದಂಬರಿ ಓದಿ ಮುಗಿಸಿದೆ. ಕಾದಂಬರಿ ಒಳ್ಳೆಯ ರೀತಿಯಿಂದ ಅದ್ಭುತವಾಗಿ ಹೊರಬಂದಿದೆ. ಓದುತ್ತಾ ಹೋದಂತೆ ಇನ್ನೂ ಮುಂದೆ ಏನಿದೆ ಎಂಬ ಕುತೂಹಲ ಹುಟ್ಟುತ್ತದೆ. ಕಾದಂಬರಿ ಸೂತ್ರಧಾರಿಯಾದ ಚಂದ್ರಣ್ಣ ಮಿಂಟ್ರಿಯವನ ಮಗ. ಆದರೆ ಮಿಂಟ್ರಿಗೆ ಹೋದ ತಂದೆ ಮರಳಿ ಊರಿಗೆ ಬರದಿದ್ದದ್ದು ಒಂದು ಆಘಾತಕಾರಿಯ ಸುದ್ದಿ. ಆದರೂ ತಾಯಿ ಶಾಂತಮ್ಮ ತನ್ನ ಮಗ ಚಂದ್ರಣ್ಣನನ್ನು ಕಣ್ಣು ರೆಪ್ಪೆಯಂತೆ ನೋಡಿಕೊಂಡು ಮಗನಿಗೆ ಸರಿಯಾಗಿ ಓದಿಸುತ್ತಾಳೆ…
ಲೇಖಕರು: Ashwin Rao K P
December 29, 2022
“ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು ಹೂವಾಗಿ ಅರಳುತ್ತವೆ” ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು ಎಂದು ಅನುವಾದಕಿ ಜ್ಯೋತಿ. ಎ ಅವರು ‘ಅತಂತ್ರ ಸ್ವಾತಂತ್ಯ್ರ’ ಕೃತಿಗೆ ಬರೆದ ಅನುವಾದಕರ ನುಡಿ ನಿಮ್ಮ ಓದಿಗಾಗಿ ನೀಡಲಾಗಿದೆ. “ಕೆಲವು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ…