ನಮ್ಮ ಎಲ್ಲಾ ಕೆಲಸಗಳ ಉದ್ದೇಶವೂ ಅಂತಿಮವಾಗಿ ಸಾರ್ಥಕತೆ, ಸಂತಸ, ಉಲ್ಲಾಸವೇ ಆಗಿದ್ದರೂ ಆ ಉದ್ದೇಶ ಈಡೇರಿದೆಯೋ ಇಲ್ಲವೋ ಎಂಬುದನ್ನು ನೋಡಲು ನಮಗೆ ಬಿಡುವಿಲ್ಲ. ಅಂದರೆ ನಿಜ ಜೀವನದ ಹಲವಾರು ಒತ್ತಡಗಳಲ್ಲಿ ನಮ್ಮ ಬಗ್ಗೆ ಒಂದೈದು ನಿಮಿಷ ಚಿಂತಿಸಲು ಸಮಯ ಇಲ್ಲದಾಗುತ್ತದೆ. ಮನೋವಿಜ್ಞಾನದ ಪ್ರಕಾರ ವ್ಯಕ್ತಿ ಅದೆಷ್ಟೇ ಶ್ರೀಮಂತನಾಗಿದ್ದರೂ ತನಗಿಂತ ಶ್ರೀಮಂತರನ್ನು ಕಂಡಾಗ ಆತನದಲ್ಲಿದ್ದ ಉತ್ಸಾಹ, ತೃಪ್ತಿ, ಸಂತೋಷ ಕಡಿಮೆಯಾಗುತ್ತದೆ. ಲೇಖಕ ನಾಗೇಶ ಹೆಗಡೆಯವರ "ಮತ್ತೆ ಮತ್ತೆ ಕೂಗು ಮಾರಿ" ಪುಸ್ತಕದ 'ಹೊಸವರ್ಷಕ್ಕೆ ಹರ್ಷದ ಹೊಸಮಂತ್ರ' ಲೇಖನದ ಕೆಲವು ಸಾಲುಗಳಿವು. ಹೌದು ದೀರ್ಘವಾಗಿ ಈ ಸಾಲುಗಳ ಬಗ್ಗೆ ಚಿಂತಿಸುತ್ತಾ ಹೋದರೆ ನಾವು ವೈಯಕ್ತಿಕವಾಗಿ ದಿನದ ಎಷ್ಟು ಸಮಯವನ್ನು ಬಳಸಿಕೊಳ್ಳುತ್ತೇವೆ ಎಂಬದನ್ನು ಲೆಕ್ಕಹಾಕಿಕೊಳ್ಳಬೇಕು. ಆಗ ಮಾತ್ರ…
ಪುಸ್ತಕ ಸಂಪದ
ಆಟ, ದಶಾವತಾರ, ಬಯಲಾಟ ಎಂದೇ ನೂರಾರು ವರ್ಷಗಳಿಂದ ಪ್ರಸಿದ್ಧವಾಗಿದ್ದ ಕನ್ನಡದ ಕಲೆಯ ಇತ್ತೀಚಿನ ಹೆಸರೇ ಯಕ್ಷಗಾನ. ಜಾನಪದ ಕಲೆ ಎಂದು ಯಾವುದೇ ಪ್ರೊತ್ಸಾಹವಿಲ್ಲದೇ ತಿರಸ್ಕಾರಕ್ಕೆ ಒಳಗಾದ ಬಯಲಾಟದ ಅನೇಕ ವಿಧಗಳಲ್ಲಿ ಇದೂ ಒಂದು. ದೊಡ್ಡಾಟ, ಘಟ್ಟದಕೋರೆ, ಶ್ರೀ ಕೃಷ್ಣ ಪಾರಿಜಾತ ಹೀಗೆ ಅನೇಕ ರಂಗ ಕಲೆಗಳು ಮೂಲೆ ಗುಂಪಾಗಿ ನಶಿಸಿ ಹೋಗಿವೆ ಹೋಗುತ್ತಿವೆ. ಯಕ್ಷಗಾನವೆಂದು ಕರಾವಳಿ ಮತ್ತು ಮಲೆನಾಡಿನ ಬಡಗು ಮತ್ತು ತೆಂಕು ಶೈಲಿಯ ಆಟ ಇತ್ತೀಚೆಗೆ ಪ್ರಸಿದ್ಧಿಗೆ ಬಂದರೂ ಸಿನೆಮಾ, ಸುಗಮ ಸಂಗೀತ, ಟಿವಿ ಮತ್ತು ಶಾಸ್ತ್ರೀಯ ಎನಿಸಿಕೊಂಡ ಕಲೆಗಳ ಹಾವಳಿಗೆ ಸಿಕ್ಕು ಸಂಪೋರ್ಣ ವಿಕಾರಗೊಂಡು ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಯಾವುದು ಯಕ್ಷಗಾನ ಯಾವುದು ಅಲ್ಲ ಎಂದು ದಿಟ್ಟವಾಗಿ ಪರಿಷ್ಕರಿಸಿ, ಯಕ್ಷಗಾನದ ಹಿಂದಿರುವ ತತ್ವಗಳು ಏನು, ಅದರ…
ಒಟ್ಟು ಏಳು ಕಥೆಗಳ ಈ ಸಂಕಲನದಲ್ಲಿ ಚೇಳು-ಕಥೆ ಬಹಳ ಪ್ರಧಾನವಾದುದು. ಹಿಡಿ ಗಾತ್ರದ ಚೇಳಿನಿಂದಾಗಿ ಬಳ್ಳಾರಿ ಜಿಲ್ಲೆಯ ಒಂದು ಪುಟ್ಟ ಊರಿನಲ್ಲಿನ ಜನರು ಪಟ್ಟ ಪಾಡು, ಅದರಿಂದಾಗುತ್ತಿದ್ದ ಫಜೀತಿಗಳನ್ನು ಈ ಕಥೆಯಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಆ ಹಳ್ಳಿಯ ಜನಸಂಖ್ಯೆಗಿಂತ ಹೆಚ್ಚೇ ಚೇಳುಗಳಿದ್ದರಿಂದ ನೆಲದ ಮೇಲೆ ಕಾಲು ಇಡಲೂ ಕಷ್ಟಕರವಾದ್ದಂತಹ ಪರಿಸ್ಥಿತಿ. ತಾರಸಿಯ ಒಳಗೆ, ಮಡಿಸಿಟ್ಟ ಅರಿವೆಗಳಲ್ಲಿ, ಬೀಸುಕಲ್ಲಿನ ಕುಣಿಯಲ್ಲಿ, ಅಕ್ಕಿ ಡಬ್ಬಿಯ ಒಳಗೆ ಹೀಗೆ ನಾನಿಲ್ಲದೆಡೆಯಿಲ್ಲ ಎನ್ನುವ ಭಗವಂತನ ಮತ್ತೊಂದು ಅವತಾರವೇನೋ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತಿತ್ತು. ಹರಿದಾಡುವ ಚೇಳನ್ನು ತೆವಲುವ ಮಕ್ಕಳು ಆಟದ ವಸ್ತುವೆಂದು ಕೈಯಲ್ಲಿ ಹಿಡಿಯದಂತೆ ಕಣ್ಗಾವಲಿರಬೇಕಿತ್ತು. ಹೊಸದಾಗಿ ಮದುವೆಯಾಗಿ ಬಂದಿರುವ ಪರಊರಿನ ಹೆಣ್ಣುಮಕ್ಕಳಿಗೆ ಇಕ್ಕಟ್ಟಿನ…
'ನಾನು ದೊಡ್ಡವನಾದ ಮೇಲೆ ಪೋಷ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು. ಆ ಕನಸಿಗೆ ಇರುವ ಪ್ರಾಮುಖ್ಯತೆ ಅರ್ಥವಾಗಿಯೊ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೆ ಕೆಲಸವು ದೊರಕುತ್ತದೆ. ಬಹುಷಃ ಅಲ್ಲಿಯೆ ಮುಂದುವರೆಯುತ್ತಿದ್ದಲ್ಲಿ , ಪ್ರಾಮಾಣಿಕವಾಗಿ ದುಡಿಯುತ್ತ ತನ್ನ ಕೆಲಸದಲ್ಲಿಯೆ ತೃಪ್ತಿ ಕಾಣುತ್ತ ಒಬ್ಬ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತನಾಗಿ ಶಾಂತ ಜೀವನ ನಡೆಸುತ್ತ ಇದ್ದನೇನೊ ಅವನು.
ಆದರೆ ವಿದಿ ಬಿಡಬೇಕಲ್ಲ, ಆ ಯುವಕನ ಮುಂದೆ ದೊಡ್ಡದೊಂದು 'ಆಸೆ' ಯ ಬೆಟ್ಟವನ್ನು ಕಣ್ಣಾಮುಂದೆ ನಿಲ್ಲಿಸುತ್ತದೆ, ವಿದಿಯ ಆ ಆಟಕ್ಕೆ ಯುವಕ ಖಂಡೀತ ಮರುಳಾಗುತ್ತಾನೆ, ದೈವ ತನ್ನ ಚಿಕ್ಕವಯಸ್ಸಿನಲ್ಲಿ ಕೇಳಿ ಕೊಟ್ಟಿದ್ದ 'ವರ' ಪೋಸ್ಟಾಫೀಸಿನ ಕೆಲಸವನ್ನು ಬಿಟ್ಟು, ರಾಜ್ಯ ಸರ್ಕಾರದ ಅತಿ…
ಕನ್ನಡ ಸಾಹಿತ್ಯರ೦ಗದಲ್ಲಿ ಡಾ|| ಬಿ.ಜಿ.ಎಲ್. ಸ್ವಾಮಿ ಎ೦ಬ ಹೆಸರಿಗೆ ವಿಶೇಷ ಸ್ಥಾನವಿದೆ. ವಿಜ್ಞಾನವನ್ನು ತಮ್ಮದೇ ಆದ ಶೈಲಿಯಲ್ಲಿ ಬರೆದು ಸಾಮಾನ್ಯರೂ ಅವರ ಬರಹಗಳಿಗೆ ಮುಗಿಬೀಳುವ೦ತೆ ಮಾಡಿದ್ದರು. ಹಾಸ್ಯ ಅವರ ಬರಹಗಳಲ್ಲಿನ ವೈಶಿಷ್ಟ್ಯತೆ. ಪ್ರತಿಯೊಬ್ಬರೂ ಓದಲೇಬೇಕಾದ೦ಥ ಸ್ವಾಮಿಯವರ ಪುಸ್ತಕಗಳಲ್ಲಿ "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ" ಮುಖ್ಯವಾದದ್ದು. ಪುಸ್ತಕದ ಹೆಸರೇ ತು೦ಬಾ ಕುತೂಹಲಕಾರಿಯಾಗಿದೆ.
ವಿದೇಶಿಯರು ನಮ್ಮ ದೇಶಕ್ಕೆ ಬ೦ದಿದುರ ಫಲವಾಗಿ ನಮ್ಮ ಸಾಮಾಜಿಕ, ಸಾ೦ಸ್ಕೃತಿಕ, ಆರ್ಥಿಕ, ರಾಜಕೀಯಗಳಲ್ಲದೆ ನಾವು ತಿನ್ನುವ ಆಹಾರದಲ್ಲೂ ಕ್ರಾ೦ತಿಯು೦ಟಾಯಿತು. ಇದಕ್ಕೆ ಮುನ್ನಡಿ ಬರೆದೆದ್ದು ೧೪೯೮ರಲ್ಲಿ ವಾಸ್ಕೊಡ ಗಾಮ ಭಾರತಕ್ಕೆ ಜಲ ಮಾರ್ಗ ಕ೦ಡು ಹಿಡಿದಿದ್ದು. ಇದರಿ೦ದ ಉತ್ತೇಜನಗೊ೦ಡ ಪೋರ್ಚುಗೀಸರು ಭಾರತಕ್ಕೆ ಯಾನ ಶುರು…
ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಲ್.ಸಿ.ಸುಮಿತ್ರಾರವರು ವಿಮರ್ಶಾ ಕೃತಿಗಳು ಕವಿತೆ, ಅನುವಾದ, ಕಥಾಸಂಕಲನ ಪ್ರಕಟಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ ಇತ್ತೀಚಿನ ಪುಸ್ತಕ “ಹೂ ಹಸಿರಿನ ಮಾತು”. ಇದು ದೇಶೀಯವಾದ ಹೂ ಬಿಡುವ ಗಿಡಮರಗಳನ್ನು ಅತ್ಯಂತ ಆಪ್ತವಾಗಿ ಪರಿಚಯಿಸುತ್ತದೆ. ಈ ಪುಸ್ತಕದ ಓದು ಹೂ ಗಿಡಮರಗಳೊಂದಿಗಿನ ಆಪ್ತಸಂವಾದ ಒಡನಾಟದ ಮುದವನ್ನು ನಮಗೆ ನೀಡುತ್ತದೆ. ಲೇಖಕಿ ಸ್ವತಃ ಗಿಡಗಳನ್ನು ನೆಟ್ಟು ಬೆಳೆಸುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವವರು. ಕಾಡಿನ ದಾರಿಯಲ್ಲಿ ವಾಕಿಂಗ್ ಹೋಗುವಾಗ ಅವರ ಕಣ್ಣುಗಳು ಆರ್ಕಿಡ್ಗಳನ್ನು ಅರಸುತ್ತವೆ. ಹೂ ಗಿಡಗಳಿಗಾಗಿ ಆಪ್ತರ ಮನೆಗಳಿಗೆ ಹೋಗುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಕುರಿಂಬೆ ಹೂ ನೋಡಲು ಬಾಬಾಬುಡನ್…
ಕತೆ ಹೇಳಿದಂತೆ ಕಾನೂನಿನ ವಿಷಯಗಳನ್ನು ತಿಳಿಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ, ಶ್ರೀ ಎಸ್.ಆರ್. ಗೌತಮ್, “ನಿತ್ಯಜೀವನದಲ್ಲಿ ಕಾನೂನು” ಪುಸ್ತಕದ ಮೂಲಕ. ಉದಾಹರಣೆಗೆ ಪವರ ಪಟಾಲಂ – ಪವರ್ ಆಫ್ ಅಟಾರ್ನಿ – ಮುಖ್ತಾರ್ನಾಮವನ್ನು ಅವರು ವಿವರಿಸುವ ಪರಿ ಗಮನಿಸಿ: “ರಾಮಣ್ಣನಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮನೆ ನಿವೇಶನ ಮಂಜೂರಾತಿಯಾಗಿ ಸ್ವಾಧೀನ ಪತ್ರವನ್ನು ಪಡೆದುಕೊಂಡಿದ್ದಾನೆ. ಮಂಜೂರಾತಿಯ ಶರತ್ತಿನಂತೆ ರಾಮಣ್ಣ ಸ್ವಾಧೀನ ಪತ್ರವನ್ನು ಪಡೆದುಕೊಂಡ ತಾರೀಖಿನಿಂದ ಹತ್ತು ವರ್ಷಗಳ ಪರ್ಯಂತ ನಿವೇಶನವನ್ನು ಯಾವುದೇ ರೀತಿಯಲ್ಲಿ ಪರಭಾರೆ ಮಾಡುವಂತಿಲ್ಲ. ರಾಮಣ್ಣನಿಗೆ ಈಗ ಮನೆ ಕಟ್ಟಲು ಹಣವಿಲ್ಲ. ಆದರೆ, ತುರ್ತಾಗಿ ಮಗಳ ಮದುವೆ ಮಾಡಬೇಕು. ನಿವೇಶನವನ್ನು ಮಾರುವುದು ಒಂದೇ ದಾರಿ. ಆದರೆ, ಮಾರುವ ಹಾಗಿಲ್ಲ. ಮಾರಬೇಕಾದರೆ ಇನ್ನೂ…
ಕೆಲವು ಸಣ್ಣ ಕತೆಗಳು, ನಾಟಕಗಳು ಒಮ್ಮೆ ಓದಿದರು ಜೀವನ ಪೂರ್ತಿ ನೆನಪಿರುತ್ತವೆ ! . ಅಂತಹ ಒಂದು ನಾಟಕ, ಕತೆ , ಮಂಕೀಸ್ ಪಾ.
ಅದು ಸುಮಾರು ೧೯೭೬-೭೭ ನಾನಾಗ ತುಮಕೂರಿನಲ್ಲಿ ಪದವಿಪೂರ್ವವನ್ನು ಸಿದ್ದಗಂಗ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂಗ್ಲ ಬಾಷೆ ಓದಿಗಾಗಿ 'ಮಾಡ್ರನ್ ಒನ್ ಆಕ್ಟ್ ಪ್ಲೇ ಶೀರ್ಷಿಕೆಯಲ್ಲಿ ಇದ್ದ ಪ್ರಸಿದ್ದ ನಾಟಕ ಮಂಕೀಸ್ ಪಾ. ಕಾಲೇಜಿನಲ್ಲಿ ಆಗ ಧ್ರುವಕುಮಾರ್ ಎಂಬ ಅಂಗ್ಲ ಉಪನ್ಯಾಸಕರಿದ್ದರು. ವಿಶಿಷ್ಟ ವ್ಯಕ್ತಿತ್ವ ಅವರದು, ಅವರ ಮಾತು, ನಡೆ ನುಡು ಎಲ್ಲ ನಮಗೊಂದು ಕುತೂಹಲ. ಹುಡುಗಿಯರು ಅವರನ್ನು ಧರ್ಮೇಂದ್ರ ಎಂದೆ ಕರೆಯುತ್ತಿದ್ದರು. ಪಾಠ ಮಾಡಲು ನಿಂತರೆ ಕಣ್ಣೆದುರು ಪಾತ್ರಗಳು ಕುಣಿಯುವಂತೆ ವರ್ಣಿಸುತ್ತಿದ್ದರು. ಆಗ ಅವರು ತೆಗೆದುಕೊಂಡ ನಾಟಕ ಪಠ್ಯ ಈ ಮಂಕೀಸ್ ಪಾ
ನಾಟಕದ ವಿವರ:
…
ಡಾ| ಕೆ. ಶಿವರಾಮ ಕಾರಂತರ ಮೂಕಜ್ಜಿಯ ಕನಸು ನಾನು ಹೈಸ್ಕೂಲಿನ ದಿನಗಳಿಂದ ಇಲ್ಲಿಯವರೆಗು ಹಲವು ಸಾರಿ ಓದಿರಬಹುದೇನೊ.ಪ್ರತಿಬಾರಿ ಓದುವಾಗಲು ಜೀವನದ ಹಲವು ಮಜಲುಗಳ, ದರ್ಶನವನ್ನು ಮಾಡಿಸುವ ಕಾದಂಬರಿ ಇದು. ಇಲ್ಲಿ ಕನಸು ಅನ್ನುವದಕ್ಕಿಂತ ದರ್ಶನ ಅನ್ನುವುದು ಹೆಚ್ಚು ಸೂಕ್ತವೇನೊ ಅನ್ನಿಸುತ್ತೆ.
ಮಲೆನಾಡಿನ ಕೊಲ್ಲೂರಿನ ಸಮೀಪದ ಮೂಡೂರು ಎಂಬ ಹಳ್ಳಿಯಲ್ಲಿ ನೆಲೆಸಿರುವ ಸಾದಾ ಸೀದ ಜೀವನ ಪ್ರವೃತ್ತಿಯ ವ್ಯಕ್ತಿ ಸುಬ್ಬರಾಯರದು. ಇವರ ಅಜ್ಜಿಯೆ ಮೂಕಜ್ಜಿ, ಅಜ್ಜಿ ಎಂದರೆ ತಾತನ ಅಂದರೆ ತಂದೆಯ ತಂದೆಯ ಚಿಕ್ಕಮ್ಮ. ಹುಟ್ಟಿನಿಂದಲು ಅದೆ ಮನೆಯಲ್ಲಿ ಬೆಳೆದಾಕೆ ಅವರು. ಹತ್ತನೆ ವರ್ಷಕ್ಕೆ ಮದುವೆಯ ಶಾಸ್ತ್ರದ ನಂತರ ಗಂಡನನ್ನು ಕಳೆದುಕೊಂಡ ಆಕೆ ಈಗ ತನ್ನ ಎಂಬತ್ತು ತೊಂಬತ್ತರ ವಯಸಿನಲ್ಲಿ ತಮ್ಮ ಮರಿಮಗ ಸುಬ್ಬರಾಯ ಹಾಗು ಅವನ ಪತ್ನಿ ಸೀತೆಯ ಜೊತೆ…ಕನ್ನಡ ಸಾಹಿತ್ಯದಲ್ಲಿ ಒಂದು ಜನಪ್ರಿಯ ಪ್ರಕಾರ ಹರಟೆ. ಕನ್ನಡ ಸಾಹಿತ್ಯ-ಲೋಕದ ಅನೇಕ ಉದ್ಧಾಮ ಸಾಹಿತಿಗಳು ಈ ಸಾಹಿತ್ಯ ಪ್ರಕಾರವನ್ನು ತುಂಬಾ ಸೊಗಸಾಗಿ ದುಡಿಸಿಕೊಂಡಿದ್ದಾರೆ. ಕಲೆತರಂತೂ ಹರೆಟೆಗೊಂದು ವಿಭಿನ್ನ, ವಿಶಿಷ್ಟ ಆಯಾಮವನ್ನು ದೊರಕಿಸಿಕೊಟ್ಟಿದ್ದಾರೆ. ಹರಟೆ ಹಾಲು ಹರೆತೆಯಗದಂತೆ ಜಾಗ್ರತಿ ಮೂಡಿಸಿದ್ದಾರೆ ....ಎಂಬ ಹಿನ್ನುಡಿ ಇರುವ ಒಂದು ಒಳ್ಳೆಯ ಪುಸ್ತಕ. ಸಕತ್ ನಗೆಗಡಲಿನಲ್ಲಿ ತೇಲಿಸುವ ಹನ್ನೆರಡು ಹರಟೆಗಳ ಸಂಗ್ರಹ. ಅವರ ಒಂದು ಲೇಖನದ ಲಿಂಕ್ ಕೆಳಗೆ ಇದೆ.
ನಗುವುದು ಅಷ್ಟೇ ಅಲ್ಲದೆ ಅಳುವುದು ಒಂದು ಕಲೆ ನಗನಗಿಸುತ್ತಲೇ ಹೇಳುವ ರೀತಿ ತುಂಬಾ ವಿಭಿನ್ನವಾದದು.
http://www.udayavani.com/news/196948L15-%E0%B2%B8-%E0%B2%B2-%E0%B2%AF-%E0%B2%A4%E0%B2%B8-%E0%B2%AE-%E0%B2%A8%E0%B2%AE.html…