ನಮಗೀ ವೆಂಕಯ್ಯ ಯಾಕೆ ಬೇಕಯ್ಯಾ?

ನಮಗೀ ವೆಂಕಯ್ಯ ಯಾಕೆ ಬೇಕಯ್ಯಾ?

ಶ್ರೀ ವೆಂಕಯ್ಯ ನಾಯ್ಡುರವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಮಾಡಿ ಕಳುಹಿಸಿರುವುದರಿಂದ ನಮ್ಮ ರಾಜ್ಯಕ್ಕೆ ಆಗಿರುವ ಲಾಭವಾದರೂ ಏನು? ಅವರನ್ನು ಮತ್ತೊಮ್ಮೆ ಆಯ್ಕೆಮಾಡಿ ಕಳುಹಿಸುವ ಅಗತ್ಯವಾದರೂ ಏನಿದೆ?


 


ಕಡಿಮೆ ಪಕ್ಷ ಕನ್ನಡದಲ್ಲಿ ಮಾತನಾಡುವುದನ್ನೂ ಕಲಿಯಲಿಲ್ಲ ಇವರು. ಚುನಾವಣಾ ಪ್ರಚಾರಕ್ಕೆ ಬಂದಾಗ ತೆಲುಗು ಮತದಾರ ಬಂಧುಗಳನ್ನು ಒಟ್ಟುಹಾಕಿಕೊಂಡು ತೆಲುಗಿನಲ್ಲೇ ಭಾಷಣ ಬಿಗಿದವರು ಈ ವೆಂಕಯ್ಯ ನಾಯ್ಡುರವರು. ಆಗ ಕನ್ನಡಪರ ಸಂಘಟನೆಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದುದನ್ನು ಇಲ್ಲಿ ನೆನೆಯಬಹುದು.


 


ಈಗ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿರುವಾಗಲೇ, ಅವರನ್ನು ಕಣಕ್ಕೆ ಇಳಿಸಬಾರದೆಂದು ಎಲ್ಲಾ ಸಂಘಟನೆಗಳೂ ಒಕ್ಕೊರಲಿನಿಂದ ಒತ್ತಾಯಿಸಿ, ರಾಜಕೀಯ ಪಕ್ಷಗಳ ಮೇಲೆ ಒತ್ತಡಹೇರಿದರೆ, ಮುಂದೊಂದು ದಿನ ಅವರ ಅರ್ಥವಾಗದ, ತೆಲುಗು ಭಾಷಣಕ್ಕೆ ವಿರೋಧ ವ್ಯಕ್ತಪಡಿಸುವ ಅವಶ್ಯಕತೆಯೇ ಇರದು.


 


ಕನ್ನಡ ನಾಡನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಲು ಕನ್ನಡ ಭಾಷೆಯ ಪರಿಜ್ಞಾನವಿಲ್ಲದ ವೆಂಕಯ್ಯ ನಾಯ್ಡುರಂತಹ ಕನ್ನಡೇತರರ ಅಗತ್ಯವೇ ಇಲ್ಲ.


 


ನಾನಂತೀನಿ, ನಮಗೀ ವೆಂಕಯ್ಯ ಯಾಕೆ ಬೇಕಯ್ಯಾ?


 


ನೀವೇನಂತೀರಿ?


 


- ಆತ್ರಾಡಿ ಸುರೇಶ ಹೆಗ್ಡೆ.

Rating
No votes yet

Comments