'ದಿಲ್ಲಿ'ಯ ಬೇತಾಳ 'ಬೆಂಗಳೂರ' ಬೆನ್ನೇರಬೇಕೆ!?

'ದಿಲ್ಲಿ'ಯ ಬೇತಾಳ 'ಬೆಂಗಳೂರ' ಬೆನ್ನೇರಬೇಕೆ!?

ವಿವಾದಗಳಿಲ್ಲದೇ ಆಡಳಿತ ನಡೆಸುವ ಮನಸು ನಮ್ಮ ರಾಜ್ಯ ಸರ್ಕಾರಕ್ಕಿಲ್ಲವೋ? ತಿಳಿಯುತ್ತಿಲ್ಲ. ಅದೇನು ಅಂತ ಈ ರೀತಿ ಯೋಜನೆಗಳನ್ನ ಹಾಕ್ತಾರೋ?ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಕನಿಷ್ಠ ಯೋಚನೆಯನ್ನಾದರೂ ಮಾಡಿರುತ್ತಾರ? ಬಹುಷಃ ಆ ರೀತಿ ಯೋಚನೆಯನ್ನೆನಾದರು ಮಾಡಿದ್ದರೆ ಮೊನ್ನೆ ನಗರಾಭಿವೃದ್ಧಿ ಮಂತ್ರಿಗಳಾದ ಶ್ರೀ ಸುರೇಶ್ ಕುಮಾರ್ ಅವ್ರು " ಶೀಘ್ರದಲ್ಲೇ ಕರ್ನಾಟಕದ ಎಲ್ಲಾ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಸಗಿಯೋರ ಜೊತೆ ಸೇರ್ಕೊಂಡು ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಮಾಡ್ತೀವಿ" ಅಂತಿದ್ರಾ?

ಅವರೇನು ಹೇಳಿದ್ರು ಅನ್ನೋದು ಈ ಕೊಂಡಿಯಲ್ಲಿದೆ ನೋಡಿ.ಅದರ ಪರಿಣಾಮವನ್ನ 'ಏನ್ಗುರು' ಇಲ್ಲಿ ಸರಿಯಾಗೇ ಬರೆದಿದ್ದಾರೆ.ಇವತ್ತಿನ ವಿಜಯ ಕರ್ನಾಟಕದಲ್ಲೂ ಈ ಬಗ್ಗೆ ವರದಿಯೊಂದು ಬಂದಿದೆ.

 

ಈಗಾಗಲೇ 'ರಾಷ್ಟ್ರ ಭಾಷೆಯ' ಎಂಬ ಶುದ್ಧ ಸುಳ್ಳನ್ನು ನಮ್ಮ ಮೇಲೇರಿ,ಸತ್ಯ ಏನು ಅಂತ ಹೇಳ ಹೋದ್ರೆ 'ನಮ್ಮ್ ಜನ ನಮ್ಮನ್ನೇ ಅನುಮಾನದಿಂದ ನೋಡುವಂತೆ' ಮಾಡಿಯಾಗಿದೆ. ಈಗ ನಮ್ಮ ರಾಜ್ಯ ಸರ್ಕಾರದ ಶಿಕ್ಷಣ ಗುಣಮಟ್ಟ ಸರಿಯಿಲ್ಲ ಅನ್ನೋ ನೆಪ ಹೇಳಿ  ಬುಡಕ್ಕೆ ಕೊಡಲಿಪೆಟ್ಟು ನೀಡಲೇನೋ ಎಂಬಂತೆ ಈ 'ಸಿ.ಬಿ.ಎಸ್.ಇ'  ಅನ್ನು ನಮ್ಮ ಮಕ್ಕಳ ಮೇಲೆ ಹೇರ ಹೊರಟಿದೆ!ಇದು ನಮಗೆ ಬೇಕಾ? ಗುಣ ಮಟ್ಟ ಸರಿ ಮಾಡಲಿಕ್ಕಾಗಿ ತಾನೇ ಇಲ್ಲೊಂದು ಸರ್ಕಾರ,ಶಿಕ್ಷಣಕ್ಕೆ ಅಂತಾನೆ ಒಬ್ಬ ಮಂತ್ರಿ,ಇಲಾಖೆಗಳು,ಶಿಕ್ಷಣ ತಜ್ಞರು ಇರೋದು? ಇವರೆಲ್ಲ ಇದ್ಕೊಂಡು ಮಾಡೋಕೆ ಸಾಧ್ಯ ಆಗದೆ 'ಕೇಂದ್ರ'ದ ತುತ್ತೂರಿಯನ್ನೇ ಊದುತ್ತಿವಿ ಅನ್ನೋದಾದರೆ ಇಂತ ಸರ್ಕಾರ,ಇಲಾಖೆ ಅದಕ್ಕೆ ನಮ್ಮ ತೆರಿಗೆಯ ಹಣವನ್ನೇಕೆ ಸುರಿಯಬೇಕು? ಹೇಗಿದ್ರು 'ಕೇಂದ್ರ'ದವರಿದ್ದಾರಲ್ಲ ಅವ್ರೆ ನೋಡ್ಕೋತಾರೆ.ಇವ್ರು ಮನೆಗೆಹೋಗ್ಬಹುದು ಅಲ್ವಾ?

ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಮಾತುಗಳು ಎಲ್ಲಿ ಮರೆಯಾಗಿವೆ? ಒಂದು ಬಲಿಷ್ಠ ನಾಡು ಕಟ್ಟಲು ಅಷ್ಟೇ ಬಲಿಷ್ಟವಾದ ಗುಣ ಮಟ್ಟದ ಶಿಕ್ಷಣದ ಅಗತ್ಯವಿದೆ.ಭವ್ಯ ಕನ್ನಡನಾಡ ಕಟ್ಟಲು ಈ ನೆಲದ ಆಚಾರ,ವಿಚಾರ,ಭಾಷೆ,ಸಂಸ್ಕೃತಿ,ಇತಿಹಾಸ ಇವೆಲ್ಲದರ ಅರಿವು ಇರಲೇಬೇಕು.ಕನ್ನಡ ಮಾತಾಡಿದ್ರೆ ಏನ್ ಅನ್ಕೊತಾರೋ ಅನ್ನೋ ಕೀಳರಿಮೆಯನ್ನ ನಮ್ಮ ಈ ಶಿಕ್ಷಣ ವ್ಯವಸ್ಥೆ  ಈಗಾಗಲೇ ತುಂಬಿಯಾಗಿದೆ, ಇನ್ನ ಇದೆಲ್ಲ ಸಂಪೂರ್ಣ 'ಸಿ.ಬಿ.ಎಸ್.ಇ' ಮಯವಾದರೆ  ನಮ್ಮತನ ಅನ್ನುವುದನ್ನೇ ನಮ್ಮ ಮಕ್ಕಳು ಕಲಿಯುವುದಿಲ್ಲ.

ಸರ್ಕಾರದ ಇಂತ ತಲೆ-ಬುಡ ನಿರ್ಧಾರಗಳನ್ನ ಎಲ್ಲರು ಖಂಡಿಸೋಣ.ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆ ಸಿ.ಬಿ.ಎಸ್.ಇ ಅನ್ನೋ ಹಿಂದಿ ಸಮುದ್ರದಲ್ಲಿ ಮುಳುಗಿ 'ಕನ್ನಡ' ಕ್ಕೆ ತಿಲಾಂಜಲಿ ಇಡುತ್ತಾರೆ.ಎಚ್ಚರ!!    



Rating
No votes yet

Comments