ಕತ್ತಲೊಳಗೊಂದು ದಿನ..!.

ಕತ್ತಲೊಳಗೊಂದು ದಿನ..!.

ಆ ಹೊತ್ತು

ಬೆಳಕು ಮೂಡಿರಲಿಲ್ಲ

ಕರಿಹೊತ್ತಿನ ಕೆನ್ನಾಲಿಗೆಗೆ

ಆಹುತಿಯಾಗಿದ್ದೆ.

 

ಕಾಣದ ಕೈಗಳು ನನ್ನನ್ನು

ಮಧುಮಂಚಕ್ಕೆ ಕರೆದೊಯ್ಯುತ್ತಿದ್ದವು.

ಅರಿಯದ ಆವೇದನೆ

ಅಡ್ಡಗಟ್ಟಿ ನಿಲ್ಲಿಸಿತ್ತು.

 

ಅರ್ಥಸಿಗದ ಅಕ್ಕರೆ

ಬರಸೆಳೆಯಲೆತ್ನಿಸುತ್ತಿತ್ತು.

ನಕ್ಷತ್ರಗಳೆಲ್ಲ ಇಣುಕಿ

ನನ್ನೆಡೆ ನೋಡುತ್ತಿದ್ದವು.

ಸೋಲಲೊಪ್ಪದೆ

ಗೆಲ್ಲಲಾಗದೆ

ಹೆಜ್ಜೆಗಳು ಮಾತ್ರ ಸವೆಯುತ್ತಿದ್ದವು.

 

ತುಟಿಗಳು ಕಂಪಿಸುತ್ತಿದ್ದವು

ತಣ್ಣನೆಯ ಗಾಳಿಗೆ

ಉಟ್ಟ ಸೀರೆಯು ನಿಲ್ಲದೆ

ಜಾರಿ ಬೀಳುತ್ತಿತ್ತು.

 

ಯೌವನ ಯಮರಾಯ

ಕ್ಷಣಿಕ ಸುಖಕ್ಕೆ ಮುಡಿಪಾಗದೆ

ಅರಿವಿಗೆ ಎಣ್ಣೆ ಹಚ್ಚಿ

ಸೂರ್ಯನನ್ನು ಬರಮಾಡಿಕೊಂಡೆ.

 

                                               ವಸಂತ್

 

 

Rating
No votes yet

Comments