ನಮ್ಮ ದೇಶದಲ್ಲಿ ಬರೀ ವ್ಯಕ್ತಿ ಮುಖ್ಯ ಆತನ ಆದರ್ಶಗಳಲ್ಲ!

ನಮ್ಮ ದೇಶದಲ್ಲಿ ಬರೀ ವ್ಯಕ್ತಿ ಮುಖ್ಯ ಆತನ ಆದರ್ಶಗಳಲ್ಲ!

ಮದ್ಯದ ಅಂಗಡಿಗಳನು ಮುಚ್ಚದೇ ಸದಾಕಾಲ ತೆರೆದು ಇಟ್ಟಿರಲಿ
ಕುಡುಕರವರು ರಾತ್ರಿ ಮನೆಗೆ ಹಿಂದಿರುಗಿಬಾರದೇ ಅಲ್ಲೇ ಇರಲಿ


ರಾತ್ರಿ ಪಾನಮತ್ತರಾದವರು ವಾಹನ ಚಲಾಯಿಸಿದರೆ ಅಪಘಾತ
ಕುಡುಕರು ಮನೆಗೆ ಮರಳಿದರೆ ಮನೆಯವರ ನಿದ್ದೆಗೂ ಖೋತಾ


ಸರ್ಕಾರ ಮದ್ಯದಂಗಡಿಗಳನ್ನೇ ಮುಚ್ಚುವ ಯೋಚನೆ ಮಾಡದೇ
ಸಮಯದ ಮಾತನ್ನಾಡಿ ಬರೀ ಮುಸುಕಿನೊಳಗಿನ ಗುದ್ದು ನೀಡಿದೆ


ಸಾರಾಯಿ ನಿಷೇಧಿಸಿ ಬಡವರಿಗೆ ದುಬಾರಿ ಮದ್ಯಗಳನ್ನೇ ಕುಡಿಸಿ
ಗಾಂಧೀನಾಡಿನಲ್ಲಿ ಬಡವರನ್ನು ಉಳಿಸಿದೆ ಇನ್ನೂ ಬಡವರನ್ನಾಗಿಸಿ


ಮಹಾತ್ಮ ಗಾಂಧಿ ನಮಗೆ ರಾಷ್ಟ್ರಪಿತ ಆತ ವಿಶ್ವಕ್ಕೇ ಆದರ್ಶ ವ್ಯಕ್ತಿ
ಆತನ ಆದರ್ಶಗಳನು ಮರೆತು ಮೆರೆಸುತ್ತಿದ್ದಾರೆ ರಾಜಕೀಯ ಯುಕ್ತಿ


ನಮ್ಮ ದೇಶದಲ್ಲಿ ಹಿಂದಿನಿಂದಲೂ ವ್ಯಕ್ತಿ ಮುಖ್ಯ ಆತನ ಆದರ್ಶಗಳಲ್ಲ
ರಾಮನನ್ನು ಪೂಜಿಸುವವನ ತಾಯಿಗೆ ಇಲ್ಲಿ ಹೊತ್ತಿನೂಟದ ಗತಿಯಿಲ್ಲ


***********


ಆತ್ರಾಡಿ ಸುರೇಶ ಹೆಗ್ಡೆ


 

Rating
No votes yet

Comments