ಹೀಗೊಂದು ದುರಾಲೋಚನೆ!

ಹೀಗೊಂದು ದುರಾಲೋಚನೆ!

ದೇವರು ಸದ್ಗುಣಿಗಳನ್ನು
ಸನ್ನಡತೆಯುಳ್ಳವರನ್ನು
ಬೇಗನೇ ತನ್ನೆಡೆಗೆ
ಕರೆದುಕೊಳ್ಳುತ್ತಾನೆಂಬರು


ಅಂತೆಯೇ ದುರ್ಗುಣಿಗಳನ್ನು
ಈ ಲೋಕದಲ್ಲೇ ಹೆಚ್ಚು
ಕಾಲ ನರಳುತ್ತಿರಲು
ಬಿಟ್ಟುಬಿಡುತ್ತಾನೆಂಬರು


ಅದಕ್ಕೇ ನನ್ನ ಮನಸ್ಸು
ಯೋಚಿಸುತ್ತದೆ ಇಂದು
ಸದ್ಗುಣ ಸನ್ನಡತೆಗಳ
ಬೆಳೆಸಿಕೊಂಡು ನಾ ಬೇಗ ಮರಳಲೇ?


ಅಥವಾ


ನನ್ನ ಆಯುಷ್ಯವನ್ನು ಇನ್ನೂ
ಹೆಚ್ಚಿಸಿಕೊಳ್ಳುವತ್ತ ನಾನು
ದೃಢಚಿತ್ತದಿಂದ ಇಂದಿನಿಂದಲೇ
ಕಾರ್ಯೋನ್ಮುಖನಾಗಲೇ?
**************


ಆತ್ರಾಡಿ ಸುರೇಶ ಹೆಗ್ಡೆ


 


 


 

Rating
No votes yet

Comments