ಜೀವನವೆಂಬ ವನ
ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು?
ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು?
ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ
ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು
ಸಂಸ್ಕೃತ ಮೂಲ - (ಸ್ವಪ್ನವಾಸವದತ್ತ ನಾಟಕದ ಆರನೇ ಅಂಕದಿಂದ)
ಕಃ ಕಂ ಶಕ್ತೋ ರಕ್ಷಿತುಂ ಮೃತ್ಯುಕಾಲೇ
ರಜ್ಜುಚ್ಛೇದೇ ಕೇ ಘಟಂ ಧಾರಯಂತಿ |
ಏವಂ ಲೋಕಸ್ತುಲ್ಯಧರ್ಮೋ ವನಾನಾಂ
ಕಾಲೇ ಕಾಲೇ ಛಿದ್ಯತೇ ರುಹ್ಯತೇ ಚ ||
-ಹಂಸಾನಂದಿ
(ಇದೇ ತಾನೇ ಶ್ರೀ ಹರಿಹರೇಶ್ವರ ಅವರ ಸಾವಿನ ಸುದ್ದಿ ಕೇಳಿ ಬಹಳ ಬೇಸರವಾಯಿತು. ಕ್ಯಾಲಿಫೋರ್ನಿಯಾದಲ್ಲಿ ಹಲವಾರು ವರ್ಷಗಳಿದ್ದು, ಈಚೆಗೆ ಮೈಸೂರು ವಾಸಿಯಾಗಿದ್ದ ಹರಿ ಅವರು ಒಳ್ಳೇ ವಿದ್ವಾಂಸ, ಮಾತುಗಾರ, ಬರಹಗಾರ, ಅನುವಾದಕ ಇವೆಲ್ಲಕ್ಕೂ ಹೆಚ್ಚಾಗಿ ಒಬ್ಬ ಸಹೃದಯಿಯಾಗಿದ್ದವರು.
ಹರಿಯವರ ಆತ್ಮಕ್ಕೆ ಶಾಂತಿ ಇರಲಿ, ಮತ್ತೆ ಅವರ ಹತ್ತಿರದವರಿಗೆ ಈ ನೋವನ್ನು ತಡೆವ ಶಕ್ತಿ ದೇವರು ಕೊಡಲೆಂಬುದೊಂದೇ ನನ್ನ ಕೋರಿಕೆ.
http://thatskannada.oneindia.in/news/2010/07/22/shikaripura-harihareshwara-is-no-more.html )
Comments
ಉ: ಜೀವನವೆಂಬ ವನ
In reply to ಉ: ಜೀವನವೆಂಬ ವನ by gvmt
ಉ: ಜೀವನವೆಂಬ ವನ
In reply to ಉ: ಜೀವನವೆಂಬ ವನ by hamsanandi
ಉ: ಜೀವನವೆಂಬ ವನ