ಜೀ ಕನ್ನಡದ ಸಾವಿತ್ರಿ - ಗೌತಮಿ ಯಶೋಗಾಥೆ

ಜೀ ಕನ್ನಡದ ಸಾವಿತ್ರಿ - ಗೌತಮಿ ಯಶೋಗಾಥೆ

 

 

ಹೊಳೆನರಸೀಪುರ ಮಂಜಣ್ಣ ಅಲಿಯಾಸ್ ದುಬೈ ಮಂಜಣ್ಣನವರ ಮಗಳು ಗೌತಮಿ, ಜೀ ಕನ್ನಡದ ಸಾವಿತ್ರಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ಇದೀಗ ರಾಜ್ಯಾದ್ಯಂತ ಆ ಧಾರವಾಹಿಗೆ ಎಲ್ಲರೂ ಕಾಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಶೃತಿ ನಾಯ್ಡು ಈ ಮುಂಚೆ ಅನೇಕ ಧಾರವಾಹಿಗಳಲ್ಲಿ ನಟಿಸಿ ಹೆಸರು ಮಾಡಿದಂತವರು ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಪತಿ ಸತ್ಯವಾನನ್ನು ಯಮಧರ್ಮರಾಯ ಕರೆದೊಯ್ದು ಮೇಲೂ ಅವನ ಬೆನ್ನಿಗೆ ಬಿದ್ದು ಗಂಡನ ಪ್ರಾಣವನ್ನು ಹಿಂದಕ್ಕೆ ಪಡೆಯುವ ಪತ್ನಿ ಸಾವಿತ್ರಿ ನಮ್ಮ ಮುಂದೆ ಬರುತ್ತಾಳೆ. ಈ ಸಾವಿತ್ರಿಯೂ ಅಂತವಳೇ ಆಗಿರಬಹುದಾ? ಇಲ್ಲಾ ಎನ್ನುತ್ತಾರೆ ಧಾರವಾಹಿ ವಿಭಾಗದ ಪರಮೇಶ್ ಗುಂಡ್ಕಲ್. ಇದು ಮೇಲ್ನೋಟಕ್ಕೆ ಸಂಪ್ರದಾಯವನ್ನು ಎತ್ತಿ ಹಿಡಿಯುವ ಕತೆಯೇ ಆದರೂ ಆಳದಲ್ಲಿ ಮಹಿಳೆಯರ ಆತ್ಮ ಗೌರವ ಹೆಚ್ಚಿಸುವ ಕತೆಯಾಗಿದೆ. ಇಲ್ಲಿಯ ಸಾವಿತ್ರಿ ಮನೆಯ ಕೆಲಸದವಳಾಗಿ ಹೋಗಿ ಮನೆಯ ಒಡತಿಯಾಗಿ ಬದಲಾಗುವುದರ ಕತೆ ಇದು. ರಾಜಕಾರಣಿಯ ಖಾಸಗಿ ಬದುಕಿನ ಕತೆಯೂ ಆಗಿದ್ದು. ನಿರ್ದೇಶಿಸುವಾಗ ಪಾತ್ರಗಳನ್ನು ಎಂಜಾಯ್ ಮಾಡುತ್ತಿದ್ದೇನೆ. ಅಂದ ಮೇಲೆ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎನ್ನುವುದು ಶೃತಿ ನಾಯ್ಡುರವರ ಅನಿಸಿಕೆ. ನಟ ಜೈ ಜಗದೀಶ್ ಪಾತ್ರ ಮೆಚ್ಚಿ ಈ ಧಾರವಾಹಿಯಲ್ಲಿ ನಟಿಸುತ್ತಿದ್ದಾರಂತೆ.

ಸಾವಿತ್ರಿಯ ಪ್ರಧಾನ ಪಾತ್ರದಲ್ಲಿ ನಟಿ ಗೌತಮಿ. ಇಲ್ಲೇ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಹುಡುಗಿ. ಇದು ಒಳ್ಳೆಯ ಅವಕಾಶ ಎಂದು ಬಂದಿದ್ದು, ತಿಂಗಳಿನಿಂದ ನಡೆಯುತ್ತಿರುವ ಚಿತ್ರೀಕರಣದಲ್ಲಿ ಕಿರುತೆರೆ ಕ್ಷೇತ್ರ ತುಂಬಾನೇ ಇಷ್ಟವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾಳೆ.

ಗೌತಮಿಗೆ ಶುಭವಾಗಲಿ. ಮತ್ತಷ್ಟು ಮೇಲೇರಲಿ ಎನ್ನುವುದೇ ನಮ್ಮೆಲ್ಲರ ಆಶಯ. ಕಿರುತೆರೆಗೆ ಮತ್ತೊಬ್ಬ ಪ್ರತಿಭಾನ್ವಿತ ನಟಿಯ ಆಗಮನ. ಮುಂದುವರೆದು ಬೆಳ್ಳಿತೆರೆಯಲ್ಲೂ ಯಶೋಗಾಥೆ ಕಾಣಲಿ ಎನ್ನುವುದು ನನ್ನ ಹಾರೈಕೆ.

 

ಪೋಟೋ  ಮತ್ತು ಲೇಖನದ ಕೆಲ ಭಾಗ : ಹೊಸ ದಿಗಂತ

Rating
No votes yet

Comments