ಭರತನ ಸ್ಥಿತಿಯೇ ಭಾರತದ ದುಸ್ಥಿತಿ!

ಭರತನ ಸ್ಥಿತಿಯೇ ಭಾರತದ ದುಸ್ಥಿತಿ!

ಭಾರತದ
ಸ್ವಾತಂತ್ರ್ಯ,
ಈ ರಾಜಕೀಯ
ನೇತಾರರ
ಕೈಯಲ್ಲಿ ಸೋತು
ಬಳಲುತ್ತಿದೆ,
ಅಂದ್ರೆ
ಸಾಕ್ಷಿ ಕೇಳ್ತೀರಲ್ಲಾ?

ಮೊನ್ನೆ
ಸ್ವಾತಂತ್ರ್ಯೋತ್ಸವದ
ದಿನದಂದು,
ಆ ಮಂತ್ರಿ
ಬಚ್ಚೇಗೌಡರ
ಕೈಯಲ್ಲಿ,
ಸಿಲುಕಿದ
ನಮ್ಮ
ಭರತನ,
ವ್ಯಕ್ತಿ ಸ್ವಾತಂತ್ರ್ಯ
ಇನ್ನೂ
ಬಳಲುತ್ತಿದೆಯಲ್ಲಾ?!

ಮಂತ್ರಿಯ
ಕಾರನ್ನು
ಬಳಸಿ
ಮುಂದೆ ಹೋದುದೇ
ಮಹಾಪರಾಧವಾಯ್ತೇ?

ಮಂತ್ರಿಗಳು
ಜನಸೇವಕರೆಂಬ
ಮಾತು,
ಬರಿಯ
ಮಾತಾಯ್ತೇ?


ನಮಗೆ
ಇದಕ್ಕಿಂತ
ಹೆಚ್ಚಿಗೆ
ಸಾಕ್ಷಿ
ಬೇರೇನು
ಬೇಕು?

ನಮ್ಮ ಭಾರತ
ಮಾತೆಯನ್ನು
ಗೋಳು
ಹೊಯ್ದುಕೊಳ್ಳುತ್ತಿರುವವರು
ಯಾರೆಂಬ
ಪ್ರಶ್ನೆಗೆ
ಉತ್ತರ
ಬೇರೆಲ್ಲಿ
ಹುಡುಕಬೇಕು?

ಆ ಭರತನ
ನಾಡೇ
ಭಾರತವಾಯ್ತು,
ಈ ಭರತನ
ಸ್ಥಿತಿಯೇ
ಭಾರತದ
ದುಸ್ಥಿತಿ ಎಂಬ
ಅರಿವಾಯ್ತು!
******
ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments