ಸುದ್ದಿ ಚುಟುಕಗಳು!

ಸುದ್ದಿ ಚುಟುಕಗಳು!

ಅಯೋಧ್ಯೆ ತೀರ್ಪು ಬಂದರೆ ತೊಂದರೆಯಂತೆ ಕಾನೂನು ವ್ಯವಸ್ಥೆಗೆ
ಸಂಪುಟ ವಿಸ್ತರಣೆಯಿಂದ ಇಲ್ಲಿ ಕಷ್ಟ ರಾಜ್ಯ ರಾಜಕೀಯ ಸುವ್ಯವಸ್ಥೆಗೆ


***


ಹುಬ್ಬಳ್ಳಿಯಲ್ಲಿ ಶೋಕಾಚರಣೆಯ ನಡುವೆ ವೈದ್ಯರುಗಳ ಕುಡಿತ ನರ್ತನ
ಮಧ್ಯಪ್ರದೇಶದಲ್ಲಿ ರೈಲ್ವೇ ಅಧಿಕಾರಿಗಳ ಕುಡಿತದಿಂದಾಗಿ ಸಾವಿನ ನರ್ತನ


ಲಾಲೂಪ್ರಸಾದನ ಅವಧಿಯಲ್ಲಿ ರೈಲ್ವೇ ಇಲಾಖೆ ಗಳಿಸಿದ್ದ ಲಾಭವನ್ನೆಲ್ಲಾ
ಪರಿಹಾರ ನೀಡುವುದರಲ್ಲೇ ಮಮತಾ ಖಾಲಿ ಮಾಡಬೇಕಾಗಿದೆಯಲ್ಲಾ


***


ಶೋಭಾ ಕರಂದ್ಲಾಜೆ ನಡೆಸಿದ್ದಾಳಂತೆ ಪ್ರಮಾಣವಚನದ ತಯಾರಿ
ಬೇಳೂರು ಗೋಪಾಲಕೃಷ್ಣನಿಗೆ ಈಶ್ವರಪ್ಪನಿಂದ ನೋಟೀಸು ಜಾರಿ


***


ಬಳ್ಳಾರಿ ರೆಡ್ಡಿ ಬಣ ಈಗ ಮತ್ತೆ ತಮ್ಮ ಕಪಿಮುಷ್ಟಿ ಬಿಗಿಮಾಡುತಿದೆಯಂತೆ
ಲಿಂಬಾವಳಿ, ಗೌಡ, ಗೂಳಿ ತ್ರಯರಿಗೆ ಅಭಯ ನೀಡಿ ಸಂತೈಸಿದೆಯಂತೆ


***


"ಲಿಂಬಾವಳಿಯನ್ನು ಕಿತ್ತೊಗೆ(ವು)ದೂ ನಿಮಗೆ ನಿಜದಿ ಶೋಭೆಯೇ"
ರೆಡ್ಡಿಗಳ ಈ ಪ್ರಶ್ನೆ ಸಿಕ್ಕಿಕೊಂಡಿದೆ ಯಡ್ಡಿ ಗಂಟಲಿಂದ ಇಳಿಯದೆಯೇ


***


ಅನಂತ ದಿಲ್ಲಿಯಲ್ಲಿಂದು ಒಪ್ಪಿಗೆಪಡೆದು ರವಾನಿಸುವ ಪಟ್ಟಿಯೇ ಕೊನೆಯಂತೆ
ಹಾಗಿದ್ದಲ್ಲಿ ಯಡ್ಡಿ ಬಣ ನಿನ್ನೆ ಸುಮ್ಮನೆ ದಿಲ್ಲಿಗೆ ಹೋಗಿ ಬಂದಿದ್ದು ಯಾಕಂತೆ?


***


ಆತ್ರಾಡಿ ಸುರೇಶ ಹೆಗ್ಡೆ
 

Rating
No votes yet

Comments