ಒಲವಿನ ಆಮಂತ್ರಣ

ಒಲವಿನ ಆಮಂತ್ರಣ

ಆತ್ಮೀಯ,

 

ನನ್ನ ಮದುವೆಯ ಮಂಗಳ ಕಾರ್ಯವು ಬರುವ ನವೆಂಬರ್ ತಿಂಗಳಿನ ೧೧ನೇ ತಾರೀಖು ಬೆಂಗಳೂರಿನ ಬಸವನ ಗುಡಿಯಲ್ಲಿರುವ ಬುಲ್ ಟೆಂಪಲ್ ರಸ್ತೆಯ "ಶ್ರೀ ಗುರುನರಸಿಂಹ ಕಲ್ಯಾಣಮಂದಿರ" ದಲ್ಲಿ ನೆರವೇರಲಿದೆ.  ಈ ಮಂಗಳಕಾರ್ಯಕ್ಕೆ ತಾವು ತಮ್ಮ ಕುಟುಂಬ ಹಾಗು ಮಿತ್ರರೊಂದಿಗೆ ಬಂದು ಯಥೋಚಿತ ಸತ್ಕಾರ ಸ್ವೀಕರಿಸಿ ವಧು-ವರ ರಿಗೆ ಹಾರೈಸಬೇಕಾಗಿ ಕೋರಿಕೆ.

 


ಭಾವಾಂತರಂಗದ ಅಲೆಗಳ ನಡುವೆ


ಬಾಳಿನ ಪಯಣದಿ ಒಂಟಿ ಸಾಗುತ್ತಿದ್ದೆ


ಮನದ ಭಾವನಗಳನರಿತು ಜೊತೆಗೂಡಿ


ನಡೆಯಲು "ಪ್ರಭಾ" ಎನ್ನೊಡನೆ ಬರಲಿದ್ದಾಳೆ


ಗುರು ಹಿರಿಯರ ಆಶೀರ್ವಾದದೊಂದಿಗೆ


ಮಂಗಳಕಾರ್ಯ ನೆರವೇರಲಿದೆ


ಕಷ್ಟವೋ, ಸುಖವೋ ಎಲ್ಲವೂ ಜೊತೆ ಜೊತೆಯಲಿ


ಪರಸ್ಪರ ಅರಿತು ಬಾಳನೌಕೆಯನೇರಿ ಸಾಗಲಿದ್ದೇವೆ 


ಸಿಹಿ ಕಹಿಗಳ ಬುತ್ತಿಯ ಹೊತ್ತು


ನನಗೊಂದುತುತ್ತು, ಅವಳಿಗೊಂದು ತುತ್ತು 


ಜೀವನದಿ ಸಮಪಾಲು ಅಕ್ಕರೆಯ ಸಿರಿಬಾಳು 


ಬಾಳನೌಕೆಯಿದು ತೇಲಿಸಾಗಲಿ


ನಿಮ್ಮೆಲ್ಲರ ಹಾರೈಕೆ ನಮ್ಮದಾಗಲಿ


 


ಸಮಯದ ಅಭಾವದಿಂದ ಖುದ್ದಾಗಿ ಆಮಂತ್ರಣ ತಲುಪಿಸಲಾಗಲಿಲ್ಲ.  ಕ್ಷಮೆ ಇರಲಿ :)


ಧಾರಾ ಮಹೂರ್ತ ಮಧ್ಯಾಹ್ನ 12.10 ಕ್ಕೆ

ಸ್ಥಳ: ಶ್ರೀ ಗುರುನರಸಿಂಹ ಕಲ್ಯಾಣಮಂದಿರ, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮದ ಎದುರು, ಬಸವನಗುಡಿ, ಬೆಂಗಳೂರು.


ಆರತಕ್ಷತೆ:  14-11-2010 ರಂದು ಭಾನುವಾರ


ಸ್ಥಳ: ಶ್ರೀ ಸುಧಾಮ ಭವನ, ಕೃಷ್ಣಧಾಮ, ಸರಸ್ವತೀಪುರಂ, ಮೈಸೂರು.


ವಂದನೆಗಳೊಂದಿಗೆ,

ಪ್ರಶಾಂತ ಜಿ ಉರಾಳ
Rating
No votes yet

Comments