ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು

ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು

ಪುರಂದರದಾಸರು ಮತ್ತು ಜಗನ್ನಾಥದಾಸರ  ಬಹುತೇಕ ಕೃತಿಗಳನ್ನು    ಹರಿದಾಸಸಂಪದ ( http://haridasa.sampada.net )ಕ್ಕಾಗಿ    ಕುಟ್ಟಿ    ಮುಗಿಸಿದ್ದನ್ನು   ಈ ಹಿಂದೆ  ಹೇಳಿಕೊಂಡಿದ್ದೇನೆ .

ಈಗ  ಮಹಿಪತಿದಾಸರ  ಬಹುತೇಕ ಕೃತಿಗಳೂ  ಅಲ್ಲಿ ಈಗ ಸಿಗುತ್ತವೆ.
ಈ ಮಹೀಪತಿದಾಸರ ರಚನೆಗಳಲ್ಲಿ    ಪ್ರಾದೇಶಿಕತೆಯನ್ನು ಸ್ವಲ್ಪ ಮಟ್ಟಿಗೆ ಗಮನಿಸಬಹುದು. 'ಪಲ್ಲವಿ'  ಬದಲಾಗಿ  ಅನೇಕ ಕಡೆ  'ಧ್ರುವ' ಎಂದು ಬಳಸಿದ್ದನ್ನು  ನೋಡಿದೆ. 'ಧ್ರುವ'  ನನಗೆ ಹೊಸತು. ಅದನ್ನು  ಪಲ್ಲವಿ  ಅಂತ  ಬದಲಿಸಲೇ ಅಂತ ಶ್ರೀ ಹಂಸಾನಂದಿ ಅವರನ್ನು  ಕೇಳಿದಾಗ  ಎರಡೂ ಒಂದೇ  ಅಲ್ಲ , ಅವೆರಡಕ್ಕೂ  ಸೂಕ್ಷ್ಮ ವ್ಯತ್ಯಾಸ ಇದೆ  , ಮೂಲವನ್ನು   ಬದಲಿಸಬೇಡಿ ಅಂತ  ದಾರಿತೋರಿದರು. ಆ ನಂತರ ಮೂಲದಲ್ಲಿದ್ದಂತೆಯೇ  ಕೀಲಿಸಿದ್ದೇನೆ.  

ಈ ಮಹಿಪತಿದಾಸರು ಯಾರು?
ಮಹಿಪತಿದಾಸರು   ಬಾಗಲಕೋಟೆಯವರು . ೧೬ ನೇ ಶತಮಾನದವರು. ಶ್ರೇಷ್ಠಹರಿದಾಸರಷ್ಟೇ ಅಲ್ಲ, ಒಳ್ಳೇ  ಅನುಭಾವಿಗಳು ,  ಪರಮಯೋಗಿಗಳು , ನಿಸ್ಸೀಮತ್ಯಾಗಿಗಳು. ಹಿರಿಯ ಪಾರಮಾರ್ಥಿಕಕವಿಗಳಲ್ಲಿ ಒಬ್ಬರಾಗಿ ಅವರನ್ನು  ಪರಿಗಣಿಸಲಾಗಿದೆ. ಗುರುದೇವ  ಡಾ||ರಾನಡೆಯವರು    "Shri Mahipati is one of the greatest mystics of Karnatak, nay of the world' ಎಂದು ಉದ್ಗರಿಸಿದ್ದಾರಂತೆ.

Rating
No votes yet

Comments