ಪ್ರಜ್ಞಾವಂತ ಮತದಾರರದೇನೂ ತಪ್ಪಿಲ್ಲ!

ಪ್ರಜ್ಞಾವಂತ ಮತದಾರರದೇನೂ ತಪ್ಪಿಲ್ಲ!

ಇಂದಿನಾ ರಾಜಕೀಯ ಸ್ಥಿತಿಗೆ ಪ್ರಜ್ಞಾವಂತ ಮತದಾರರಷ್ಟೇ
ಕಾರಣವೆಂದು ದೂಷಿಸುವುದು ನಿಜವಾಗಿ ಎಷ್ಟು ಸರಿ ಹೇಳಿ

ಆಯ್ಕೆಯಾಗಿ ಹೋದವರು ಪ್ರಜ್ಞಾವಂತರಾಗಿ ಉಳಿಯದೇ
ಮತದಾರರನ್ನೇ ಮರೆಯುವುದು ಯಾಕೆಂದು ಅವರ ಕೇಳಿ

ನಮ್ಮ ನಾಡಿನ ಚುನಾವಣೆಗಳಲ್ಲಿ ಯಾವೊಬ್ಬ ಅಭ್ಯರ್ಥಿಯನ್ನೂ
ಆಯ್ಕೆಮಾಡದೇ ಸುಮ್ಮನಿರುವ ಅವಕಾಶ ಇರುವುದು ಸುಳ್ಳಲ್ಲ

ಆದರೆ ಯಾವುದೇ ಚುನಾವಣೆಯಲ್ಲಿಯೂ ಈ ಅವಕಾಶವನ್ನು
ಮತದಾರನಿಗೆ ಕೊಡಮಾಡದೇ ವಂಚನೆ ಮಾಡುತಿಹರಲ್ಲಾ?

ಮತದಾರರಿಂದ ತಿರಸ್ಕೃತನಾದ ಅಭ್ಯರ್ಥಿಗಳಿಗೆ ಮರು ಅವಕಾಶ
ನೀಡದೇ ಹೊಸ ಅಭ್ಯರ್ಥಿಗಳನಾರಿಸಿದರೆ ಬರುವುದು ಬದಲಾವಣೆ

ಒಮ್ಮೆ ಆರಿಸಿಹೋದವ ತನ್ನ ಪಕ್ಷನಿಷ್ಟೆ ಬದಲಿಸದಂತೆ ಅವಧಿ ಪೂರ್ತಿ
ಒಂದೇ ಕಡೆ ಇದ್ದರೆ ಆಗ ಮಾತ್ರ ತಪ್ಪಿಸಬಹುದು ಮರು ಚುನಾವಣೆ
********
ಆತ್ರಾಡಿ ಸುರ‍ೇಶ ಹೆಗ್ಡೆ

Rating
No votes yet

Comments