ಅನ್ಯಾಯ ಅಸಂವಿಧಾನಿಕ ಎಲ್ಲಾ ಮಣ್ಣಾಂಗಟ್ಟಿ!

ಅನ್ಯಾಯ ಅಸಂವಿಧಾನಿಕ ಎಲ್ಲಾ ಮಣ್ಣಾಂಗಟ್ಟಿ!

 

ರಾಜ್ಯಪಾಲರು ತರಾತುರಿಯ ನಡವಳಿಕೆಯಿಂದ
ಈ ರೀತಿ ನಿಜದಿ ನಗೆಪಾಟಲಿಗೆ ಈಡಾಗಬಾರದಿತ್ತು

ಕಾನೂನು ತಜ್ಞನೆನಿಸಿ ರಾಷ್ಟ್ರಪತಿ ಆಳ್ವಿಕೆಗೆ
ಶಿಫಾರಸ್ಸು ಮಾಡಿ, ಈಗ ಮಾತು ಬದಲಿಸಬಾರದಿತ್ತು

ನಿನ್ನೆಯ ತನಕ ನಮ್ಮ ಮಾನ್ಯ ರಾಜ್ಯಪಾಲರು
ಕಾಂಗ್ರೇಸ್-ದಳದವರ ಪಾಲಿಗೆ ಆಗಿದ್ದರಲ್ಲಾ ದೇವರು

ಇಂದು ನೋಡಿದರೆ ಅದೇ ಹಂಸರಾಜರು
ಅವರೆಲ್ಲರ ಪಾಲಿಗೆ ಆಗಿಬಿಟ್ಟಿದ್ದಾರೆ ಕ್ರೂರ ಕಂಸರಾಜರು

ಮೊನ್ನೆ ಮೊನ್ನೆ, ಆತನಿಗಿರುವ ದೀರ್ಘ ಕಾನೂನು
ಅನುಭವವನ್ನು ಕೊಂಡಾಡಿ ಏರಿಸಿದ್ದರು ಆತನನು ಅಟ್ಟಕ್ಕೆ

ಈಗ ನೋಡಿದರೆ ಬೀದಿ ಬೀದಿಯಲ್ಲೆಲ್ಲಾ
ಜರೆದು ಏರಿಸುತ್ತಿದ್ದಾರೆ ಆತನನಿನ್ನೇನು ಜೀವಂತ ಚಟ್ಟಕ್ಕೆ

ಆತನ ಕಷ್ಟ, ಅಲ್ಲಿನ ಒಳಗುಟ್ಟು ಆತನಿಗೇ ಗೊತ್ತು
ಕೈ-ಕಮಾಂಡಿನ ಮಾತ ಪಾಲಿಸದೇ ಆತನಿಂದ ಇರಲಾಗದು

ಉತ್ತರ ಭಾರತದಲಿ ಚುನಾವಣೆಗಳಿವೆ ಹಾಗಾಗಿ
ಕಾಂಗ್ರೇಸಿಗೆ ಭಾಜಪ ಸರಕಾರವನ್ನು ಉರುಳಿಸಲೂ ಆಗದು

ಅನ್ಯಾಯ ಅಸಂವಿಧಾನಿಕ ಎಲ್ಲಾ ಬರಿ ಮಣ್ಣಾಂಗಟ್ಟಿ,
ಆ ಚುನಾವಣೆಗಳಷ್ಟೇ ಇವೆ ಈಗ ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ

ಹಾಗಾಗಿ ಭಾಜಪಕ್ಕೆ ಕೊಟ್ಟು ಈ ಮರು ಅವಕಾಶ
ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ತಾರೆ ಚುನಾವಣಾ ಪ್ರಚಾರದಲ್ಲಿ

*****
ಆತ್ರಾಡಿ ಸುರ‍ೇಶ ಹೆಗ್ಡೆ









Rating
No votes yet

Comments