ಕುಂಬ್ಳೆ ಅರ್ಧ ಶತಕ : ಹೊಸ ದಾಖಲೆ!

ಕುಂಬ್ಳೆ ಅರ್ಧ ಶತಕ : ಹೊಸ ದಾಖಲೆ!

ಐವತ್ತರ ಸಂಭ್ರಮ

ಮೊದಲಿಗೆ ಹರಿಪ್ರಸಾದ್ ನಾಡಿಗ್ ರಿಗೆ ನನಗೆ ಈ ಮಾಧ್ಯಮ ಒದಗಿಸಿದಕ್ಕಾಗಿ ಧನ್ಯವಾದಗಳನ್ನು ಹೇಳುತಿದ್ದೇನೆ, ಜೊತೆಗೆ ಹಿರಿಯರಾದ ಹೆಗ್ಡೆ ಸರ್, ಗೋಪಿನಾಥ್, ನಾಗರಾಜ್ ಸರ್ ಗೂ, ಮಂಜಣ್ಣ , ಕೋಮಲ್ ,ಪ್ರಸನ್ನ, ಮಾಲತಿ, ವಾಣಿ , ತೇಜಸ್ವಿ ,ಸಂತೋಷ್ .... ಅರರೆ ಹೆಸರು ಸೇರಿಸುತ್ತಾ ಹೋದರೆ ಉದ್ದವಾಗುತ್ತ ಸಾಗುತ್ತದೆ, ನನ್ನ ಲೇಖನಗಳನ್ನು ಓದಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು

ಇದು ನನ್ನ ೫೨  ನೇ ಲೇಖನ(ಎರಡು ಲೇಖನಗಳು ೨ ಬಾರಿ ಪ್ರಕಟಗೊಂಡಿವೆ),ಬರೇ ೭೬ ದಿನಗಳಲ್ಲಿ ನಾನೂ ೫೦ ಲೇಖನ ಬರೆಯುತೇನೆ ಅಂದು ಕೊಂಡಿರಲಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳಿಗೆ ನನ್ನನ್ನು ಇನ್ನೂ ಇನ್ನೂ ಬರೆಯುವಂತೆ ಮಾಡಿತು.ಮೊದಲು ಪ್ರತಿಕ್ರಿಯೆ ರಘು ಅವರು ಕಳುಹಿಸಿದಾಗ ತುಂಬಾ ಸಂತೋಷ ಪಟ್ಟಿದ್ದೆ, ನನ್ನ ಲೇಖನಕ್ಕೂ ಪ್ರಸಂಸಿಸುವವರು ಇದ್ದಾರೆ ಎಂಬ ನಂಬಿಕೆ ಬಂತು. ಮೊದಲಿಗೆ ಗೂಗಲ್ ನಲ್ಲಿ ಟೈಪ್ ಮಾಡಬೇಕಾದರೆ ತುಂಬಾ ತಪ್ಪುಗಳಿರುತಿದ್ದವು, ವ್ಯಾಕರಣದ ಬಗ್ಗೆಯೂ ತಲೆ ಕೆಡಿಸಿಕೊಳ್ಳುತಿರಲಿಲ್ಲ, ಹೆಗ್ಡೆ ಸರ್ ನನ್ನ ತಪ್ಪನ್ನು ತಿದ್ದಲು ಸೂಚಿಸುತಿದ್ದರು.ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತು ಇನ್ನೂ ಉತ್ತಮ ರೀತಿಯಲ್ಲಿ ಬರೆಯಲು ನನ್ನ ಲೇಖನ ಓದುತಿದ್ದ ಕೆಲವರು ಕೊಟ್ಟ ಎಲ್ಲ ಸಲಹೆಗಳನ್ನು ಸ್ವಿಕರಿಸುತ್ತ ಹೋದೆ.

ಮೊದಲಿಗೆ ಹಿಂದೆ ಬರೆದಿದ್ದ ಕೆಲ ಕವನ ಅಪ್ಲೋಡ್ ಮಾಡಿದಾಗ ಎಷ್ಟು ಹಿಟ್ ಆಯಿತು ಎಂದು ನೋಡುತಲೇ ಇರುತಿದ್ದೆ, ಕೆಲವೊಂದಕ್ಕೆ ಪ್ರತಿಕ್ರಿಯೆ ಬಂದಾಗ ಖುಷಿ ಆಗುತಿತ್ತು, ಆ ದಿನದಲ್ಲಿ ಹೊಳೆದದ್ದೇ ನನ್ನ ನೆನಪಿನ ಸರಣಿ "ನೆನಪಿನ ಬುತ್ತಿ", ಇಲ್ಲಿ ಕೆಲ ನೆನಪುಗಳನ್ನು ಬಿಚ್ಚುತ್ತಾ ಹೋದೆ. ನಡುವಿನಲ್ಲಿ ಕೆಲವು ನನಗೆ ನಗು ತಂದ ಮಿಂಚಂಚೆಗಳನ್ನು ಅನುವಾದಿಸಿ ಪ್ರಕಟಿಸಿದೆ, ಇಲ್ಲಿ ನಾನೂ ಗೌಡಪ್ಪನ ಮಸಾಲೆ ಉಳ್ಳ ಒಂದು ಅನುವಾದ ಮಾಡಿದ ಲೇಖನ ನನಗೆ ನನ್ನಲ್ಲಿನ ಕಲ್ಪನಾ ಲೋಕದ ಅರಿವು ಮೂಡುವಂತೆ ಮಾಡಿತು. ಕೊಂಕಣಿ ಭಾಷಾ ಮಾಲಿಕೆ ಶುರು ಮಾಡಿದಾಗ ಇದ್ದ ಹುರುಪು ಎರಡೇ ದಿನದಲ್ಲಿ ಕುಂಟಿತ ವಾಯಿತು, ಅದಕ್ಕೆ ಅದನ್ನು ಅಲ್ಲೇ ಬಿಟ್ಟು ಬಿಟ್ಟೆ.

ಕವನ  "ಮರೆಯ ಬೇಕಿದೆ ನಾನಿಂದು ","ನಾ ನಡೆವದಾರಿಯಲಿ ...","ನಿರಂತರ " ನಾನೂ ತುಂಬಾ ಇಷ್ಟಪಟ್ಟು ಬರೆದ ಕವನ ಅದಕ್ಕೆ ನಾನೂ ನಿರೀಕ್ಷಿಸಿದ ಮಟ್ಟಿನ ಪ್ರತಿಕ್ರಿಯೆ ಬಾರದಾಗ ನಿರಾಶೆ ಆದದುಂಟು, ನನ್ನ ಮನಸ್ಸಿನ ತುಮುಲ ಹೇಳುವಲ್ಲಿ ನಾನೂ ವಿಫಲನಾದೇನೆ...ಎಂದು ನನ್ನಲ್ಲಿಯೇ ನಾನೂ ಕೆಳಿದುಂಟು.ನಿರೀಕ್ಷೆ ಇಡದೆ ಬರೆಯುವ ಪಾಠ ಕಲಿತುಕೊಂಡೆ.

ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ,ನನ್ನಲ್ಲಿನ ಮೌನ ದನಿ ನಿಮಗೆ ನಿರಂತರ ವಾಗಿ ಕೆಳುತಿರಲಿ  ಎಂದು ಆಶಿಸುವ
ನಿಮ್ಮ ಕಾಮತ್ ಕುಂಬ್ಳೆ

Rating
No votes yet

Comments