ಮತ್ತೆ ಬರುವನೇ ದ್ರಾವಿಡ್ ತಂಡಕ್ಕೆ???

ಮತ್ತೆ ಬರುವನೇ ದ್ರಾವಿಡ್ ತಂಡಕ್ಕೆ???

Comments

ಬರಹ

ಸಧ್ಯಕ್ಕೆ ಕರ್ನಾಟಕದಿಂದ ಭಾರತ ತಂಡದಲ್ಲಿ ಉಳಿದಿರುವ(ಖಾಯಂ ಆಗಿ) ಹಿರಿಯ ಆಟಗಾರನೆಂದರೇ,ದ್ರಾವಿಡ್.  ಇನ್ನೇನು ಭಾರತ ತನ್ನ ನೆಲದಲ್ಲೇ
ನಡೆಯಲಿರುವ ವಿಶ್ವಕಪ್ ಗೆ ಸಿದ್ದ್ದವಾಗಬೇಕಿದೆ. ನಮ್ಮ ಹಿರಿಯ ಆಟಗಾರರಿಗೆ ಇದು ಬಹುಶಃ ಕೊನೆಯ ವಿಶ್ವಕಪ್. ಹೀಗಿನ ದ್ರಾವಿಡ್ ಫ಼ಾರ್ಮ್
ಅಷ್ಟಾಗಿ ಸರಿಯಿಲ್ಲ. ಬಿಸಿಸಿಐ ತನ್ನ ಕಿರಿಯ ಅಟಗಾರರ ಮೇಲೆ ನಂಬಿಕೆ ಇಟ್ಟು ಕೂರುವಂತಿಲ್ಲ!! ಇದಕ್ಕೆ ICC ಯ ಪಂದ್ಯಗಳಲ್ಲಿ ಅವರ ಪ್ರದರ್ಶನದ
ಮಟ್ಟ ತೀರ ಕಳಪೆಯದುದೆಂಬುದನ್ನು ಅವರು ಬಲ್ಲರು.
    ಇತೀಚಿನ ಪಂದ್ಯಗಳಲ್ಲಿ, ಅದರಲ್ಲೂ ಟೆಸ್ಟ್ ಪಂದ್ಯಗಳಲ್ಲಿ ಹಿರಿಯರ ಮೇಲೆ ತಂಡ ಅತಿ ಹೆಚ್ಚು ಅವಲಂಬಿತರಾಗಿರುವುದು ನಮಗೆಲ್ಲ
ತಿಳಿದಿದ್ದೆ. ಇಂತ ಸಮಯದಲ್ಲಿ ಮುಂದಿನ ವರ್ಷ ನಮ್ಮಲ್ಲಿಯೇ ನಡೆಯಲಿರುವ ವಿಶ್ವಕಪ್ ನಲ್ಲಿ ನಾವೇ ಗೆಲ್ಲಬೇಕೆಂಬ ಒತ್ತಡ ಸಹಜವಾದುದೆ.
ನಮ್ಮ ದ್ರಾವಿಡ್ ಏಕದಿನ ಪಂದ್ಯಗಳಲ್ಲಿ ತಂಡ ಸೇರುವುದು ಅತಿಮುಖ್ಯವೆನ್ನಿಸುತ್ತದೆ. ಇದರ ಬಗ್ಗೆ ಆಯ್ಕೆ ಮಂಡಳಿ ಗಮನ ಹರಿಸಬೇಕು.
ಬರೀ ತಮಿಳುನಾಡು ಆಟಗಾರರಿಗೆ ಮಣೆಯಾಕುತಿರುವ ಶ್ರೀಕಾತ್ ನಮ್ಮ ದ್ರಾವಿಡ್ಗೆ ವಿಶ್ವಕಪ್ನ ತಂಡದಲ್ಲಿ ಸ್ಥಾನ ಕೊಡುಬೇಕು. ಇದನ್ನ ಬಿಟ್ಟು ಅನ್ಯಮಾರ್ಗ
ಅವರತ್ರ ಇಲ್ಲ ಅಂತ ನಾ ಭಾವಿಸುತ್ತೇನೆ. ನೀವೇನು ಹೇಳುತ್ತೀರಿ ಕ್ರಿಕೆಟ್ ಅಭಿಮಾನಿಗಳೇ???

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet