ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
ವಿಶ್ವಾವಸೋಸ್ತು ಬೃಹತೀ
ತುಂಬುರೋಸ್ತು ಕಲಾವತೀ
ಮಹತೀ ನಾರದಸ್ಯ ಸ್ಯಾತ್
ಸರಸ್ವತ್ಯಾಸ್ತು ಕಚ್ಛಪೀ
ಜಗತ್ತಿನಲ್ಲಿ ನಾಲ್ಕು ಜನ ಪ್ರಸಿದ್ಧ ವೈಣಿಕರಂತೆ.ಅದರಲ್ಲಿ ಮೊದಲನೆಯವನು
ವಿಶ್ವಾವಸು-ಅವನ ವೀಣೆಯ ಹೆಸರು ಬೃಹತೀ
ತುಂಬುರ-ಕಲಾವತೀ
ನಾರದ-ಮಹತೀ
ಸರಸ್ವತಿ-ಕಚ್ಛಪೀ
ಮಹತೀ ಎಂಬ ವೀಣೆಯಿಂದ ಭಗವಂತನ ಗುಣಗಣಗಳನ್ನು ವರ್ಣಿಸುವ ನಾರದರು ಭಕ್ತವರೇಣ್ಯರು.
ಎಷ್ಟೋ ಸಲ ನಾವು ನಮ್ಮ ಅಕ್ಕಪಕ್ಕದ ಮನೆಯ ಜಗಳ ಹಚ್ಚಿಹಾಕುವ ವ್ಯಕ್ತಿಯನ್ನು ನಾರದನೆಂಬುದಾಗಿ ಕರೆದು ಬಿಡುತ್ತೇವೆ.
ನಾರದರಿಗೆ ಕಲಹ ಪ್ರಿಯ ಎಂಬ ಹೆಸರಿದೆ-ನಾವು ಬಹಳ ಸುಲಭವಾಗಿ ಅರ್ಥೈಸಿದ್ದೇವೆ
ಕಲಹ-ಜಗಳ,ಪ್ರಿಯ ಎಂದರೆ ಇಷ್ಟ ಪಡುವವನು
ಆದ್ದರಿಂದ ಜಗಳಪ್ರಿಯ ಎಂಬುದಾಗಿ ನಿರ್ಧರಿಸಿ ಬಿಟ್ಟಿದ್ದೇವೆ.
ಪ್ರಾಜ್ಞರು ಹೇಳುವಂತೆ ಕಲಹ ಪ್ರಿಯ ಎಂಬುದರ ಅರ್ಥ ಬೇರೆಯೇ
ಕ ಎಂದರೆ ಕಮಲ ಸಂಭವ
ಲ ಎಂದರೆ ಲಕ್ಷ್ಮೀರಮಣ
ಹ ಎಂದರೆ ಹರ
ಈ ಮೂರು ಜನರಿಗೂ ಪ್ರಿಯನಾದವನು ಕಲಹಪ್ರಿಯ
ತ್ರಿಮೂರ್ತಿಗಳಿಗೆ ಪ್ರಿಯರಾದವರು ನಾರದರು.ಲೋಕಕಲ್ಯಾಣಕ್ಕಾಗಿ ದುಡಿದ ಮಹಾನುಭಾವರು.ತಮ್ಮ ಚಿತ್ತದ ಭಿತ್ತಿಯಲ್ಲಿ ನಾರಾಯಾಣನ ಮಂಗಳ ಮಯವಾದ ಮೂರ್ತಿಯನ್ನು ಚಿತ್ರಿಸಿಕೊಂಡು ಅನವರತವೂ ಹರಿನಾಮಸ್ಮರಣೆಯಲ್ಲಿ ನಿರತರಾಗಿ ಲೋಕದ ಒಳಿತಿಗೋಸ್ಕರ ಕಲಹಗಳನ್ನು ತಂದೊಡ್ಡುತ್ತಿದ್ದ ಋಷಿ ವರೇಣ್ಯರು.
ನಾರದರ ಬಗ್ಗೆ ಕುಮಾರವ್ಯಾಸ ಹೇಳುತ್ತಾನೆ.
ದಣಿಯದಾತನ ಬೆರಳು ನಾರಾ
ಯಣರವದ ವೀಣೆಯಲಿ ಹೃದಯಾಂ
ಗಣದ ಸೀಮೆಗೆ ಬಿಡಯವಾಗದು ಕೃಷ್ಣ ಪದಕೇಳಿ
ನಾರಾಯಣನ ನಾಮಾವಲಿಗಳನ್ನು ತನ್ನ ವೀಣೆಯಲ್ಲಿ ಎಷ್ಟು ನುಡಿಸಿದರೂ ನಾರದರ ಬೆರಳುಗಳಿಗೆ ಆಯಾಸ ವಾಗುತ್ತಿರಲಿಲ್ಲ.ಅವರ ಹೃದಯವೆಂಬುದು ಆ ಭಗವಂತನ ನಾಮಸ್ಮರಣೆಯ ಆವಾಸ ಸ್ಥಾನವಾಗಿತ್ತು.
ಮಾಘ ಕವಿ ಹೇಳುತ್ತಾನೆ-
ಅಜಸ್ರಮಾಸ್ಫಾಲಿತ ವಲ್ಲಕೀಗುಣಾತ್
ಕ್ಷತೋಜ್ವಲಾಂಗುಷ್ಠ ನಖಾಂಶು ಭಿನ್ನಯಾ
ಪುರ ಪ್ರವಾಲೈರಿವ ಪೂರಿತಾರ್ಧಯಾ
ಬಿಭ್ರಾಂತಮಚ್ಚ ಸ್ಫಟಿಕಾಕ್ಷ ಮಾಲಯಾ
ಸದಾಕಾಲವೂ ಸಹ ವೀಣೆಯಲ್ಲಿ ವಾಸುದೇವನ ಮಹಿಮೆಯನ್ನು ನುಡಿಸುತ್ತಿದ್ದ ನಾರದರ ಹೆಬ್ಬೆರಳಲ್ಲಿ ಸತತ ವೀಣೆಯ ತಂತಿಯನ್ನು ಮೀಟಿದ್ದರಿಂದ ಉಗುರು ಹಾಗೂ ಬೆರಳಿನ ಮಧ್ಯೆ ಗಾಯವಾಗಿತ್ತು.ಆ ನಾರದರಾದರೋ ಶುದ್ಧವಾದಂತಹ ಅಚ್ಚ ಬಿಳಿಯ ಸ್ಫಟಿಕ ಮಾಲೆಯನ್ನು ಧರಿಸಿದ್ದರು. ಅವರು ವೀಣೆಯನ್ನು ಸದಾಕಾಲವೂ ಮೀಟುತ್ತಿದ್ದುದರಿಂದ ಅವರ ಹೆಬ್ಬೆರೆಳಿನ ಗಾಯದ ಕೆಂಪು, ಸ್ಫಟಿಕ ಮಣಿಯ ಹಾರದ ಪ್ರತಿಯೊಂದು ಮಣಿಯ ಅರ್ಧ ಭಾಗದಲ್ಲಿ ತುಂಬಿಕೊಂಡು ಅರ್ಧ ಭಾಗದಲ್ಲಿ ಹವಳವೂ ಇನ್ನರ್ಧ ಭಾಗದಲ್ಲಿ ಸ್ಫಟಿಕವಾಗಿಯೂ ಕಂಡು ನೋಡುವ ಜನರಲ್ಲಿ ಇದು ಹವಳವೋ ಸ್ಫಟಿಕವೋ ಎಂದು ವಿಭ್ರಾಂತಿಯನ್ನು ಉಂಟು ಮಾಡುತ್ತಿತ್ತು.
ಅವರ ಹೆಬ್ಬೆರೆಳಿನ ಗಾಯದ ಕೆಂಪು ಸ್ಫಟಿಕದ ಸರದಲ್ಲಿನ ಸ್ಫಟಿಕಗಳ ಅರ್ಧ ಭಾಗದಲ್ಲಿ ಪ್ರತಿಫಲಿಸಿ ಹವಳದಂತೆ ಭಾಸವಾಗುತ್ತಿತ್ತು.
ನಾರದರ ಬೆರಳಿಗೆ ಗಾಯವಾಗಿದ್ದರೂ ಸಹ ಅವರು ವೀಣಾವಾದನವನ್ನು ನಿಲಿಸದ ಕಾರಣ ಅವರ ಬೆರಳಿನ ಕೆಂಪಿನ ಪ್ರತಿಬಿಂಬ ಅವರ ಕೊರಳಲ್ಲಿ ಧರಿಸಿದ ಸ್ಫಟಿಕಮಾಲೆಯಲ್ಲಿ ಕಂಡುಬರುತ್ತಿತ್ತು.
ನಾರದರನ್ನು "ವಿಪಂಚೀ ರವ ಸಾರಜ್ಞಃ","ಚೀರವಸಾಂ ವರಃ" ಎನ್ನುತ್ತಾರೆ
ವಿಪಂಚೀ ಎಂದರೆ ವೀಣೆ,ಅದರ ಧ್ವನಿ ಯ ಸಾರ ವೆಂದರೆ ಓಂಕಾರ, ಓಂಕಾರದ ಸಾರವನ್ನು ತಿಳಿದವರು
ಓಂಕಾರದಲ್ಲಿ ಇಡೀ ಜಗತ್ತಿನ ರಹಸ್ಯವೇ ಅಡಗಿದೆಯೆಂದು ಪ್ರಾಜ್ಞರು ಹೇಳಿದ್ದನ್ನು ನಾವು ಕೇಳಿದ್ದೇವೆ.
ಹಾಗೇ "ಚೀರವಸಾಂ ವರಃ -ನಾರುಡಿಗೆಯನ್ನುಡುವವರಲ್ಲಿ ಶ್ರೇಷ್ಠರು ಅರ್ಥಾತ್ ಮುನಿಗಳಲ್ಲಿ ಶ್ರೇಷ್ಠರು ಎಂಬುದಾಗಿ ನಾರದರನ್ನು ಕೊಂಡಾಡಿದ್ದಾರೆ.
ರಾಮಾಯಣವನ್ನು ರಚಿಸಿದಂತಹ ವಾಲ್ಮೀಕಿ ಋಷಿಗಳು
"ತಪಸ್ವಾಧ್ಯಾಯ ನಿರತಃ (ತಪಸ್ಸು ಹಾಗೂ ಸ್ವಾಧ್ಯಾಯದಲ್ಲಿ ಸದಾಕಾಲ ನಿರತರಾದವರೂ),ವಾಗ್ವಿದಾಮ್ ವರಃ(ವಾಗ್ಮಿಗೆಳಲ್ಲಿ ಶ್ರೇಷ್ಠರೂ )ಎಂಬುದಾಗಿ ನಾರದರನ್ನು ಪ್ರಶಂಸಿಸಿದ್ದಾರೆ.
ಇಂತಹ ದೇವಋಷಿಯಾದಂತಹ, ಲೋಕಕಲ್ಯಾಣಕಾರಕರಾದಂತಹ,ಶ್ರೇಷ್ಠವಾಗ್ಮಿಯೂ ನಾರಾಯಣನ ಪರಮ ಭಕ್ತರೂ ಆದ ನಾರದರಿಗೆ ಭಕುತಿಯ ನಮನ ಪುಷ್ಪಗಳು.
Comments
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
In reply to ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ by gopinatha
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
In reply to ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ by nagarathnavina…
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
In reply to ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ by bhalle
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
In reply to ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ by nagarathnavina…
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
In reply to ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ by hamsanandi
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
In reply to ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ by keshavmysore
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
ಉ: ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ