ಕವಿಯು-ಚೆಲುವು
ಕವನ
ವನಸಿರಿಯ ಚೆಲುವ ಸವಿದು,
ಮಲೆಯ ಅಲೆಯ ಸ್ಪರ್ಶ ಪಡೆದು,
ಕಾಡುಕಣಿವೆ ತಂಪು ಕುಡಿದು
ಕವಿಯು ಬರೆದ ಕವಿತೆಯ.
ಮಧುವ ಹೀರೋ ದುಂಬಿ ಕಂಡು,
ಜೇನಸವಿಯ ಸಿಹಿಯ ಉಂಡು,
ಹೊಂಗೆ ಮರಕ್ಕೆ ಒರಗಿ ಕೊಂಡು,
ಕವಿಯು ಬರೆದ ಕವಿತೆಯ.
ಕವಿತೆ ಎನಗೆ ಕೊಟ್ಟ ಕವಿಯು,
ಓದಿ ಜಗವ ಸವಿಯೋ ಎನುತ್ತ
ಹೆಸರ ಹೇಳದೇನೇ ಹೊರಟುಹೋದನು.
ಕವಿತೆಯನ್ನ ತೊದಲಿ ಓದಿ,
ಮತ್ತೆಮತ್ತೆ ಹಾಡಿಪಾಡಿ,
ಅರ್ಥ ಅರಿಯೇ ಕವಿತೆ ಕಾಡಿ,
ಎಂಥ ಅದ್ಬುತ!.
ಹೊರಟುಹೋದ ಕವಿಯು ಬಂದ.
ಹೃದಯದೊಳಗೆ ಬಂದು ನಿಂತ.
ಸುಮದೊಳೀಗ ಎಷ್ಟು ಬಣ್ಣ.
ಹೊಂಗೆ ನೆರಳು ಎನಿತು ಚೆನ್ನ.
ಕವಿಯು ತಾನು ಜಗವ ಕಂಡು ಕವಿತೆ ಗೀಚಿದ.
ನಾನು ಕವಿತೆ ಓದಿಕೊಂಡು ಜಗವ ಕಂಡೆನು.
Comments
ಉ: ಕವಿಯು-ಚೆಲುವು
In reply to ಉ: ಕವಿಯು-ಚೆಲುವು by Saranga
ಉ: ಕವಿಯು-ಚೆಲುವು