ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಅನೇಕ ದಿನಗಳಿಂದ ನಿರೀಕ್ಷಿಸಿದ್ದ ಗಳಿಗೆ ಕಡೆಗೂ ಕೂಡಿ ಬಂದಿತು!


ಚಾತಕ ಪಕ್ಷಿಯಂತೆ ಬಾಯಾರಿದ್ದ ಓದುಗರಿಗೆ ಸ್ವಾತಿ ಮಳೆ ಹನಿಯಲಿದೆ!


ಪತ್ರಿಕಾ ಲೋಕದಲ್ಲಿ ಸುನಾಮಿ ಏಳಲಿದೆ!!


ಹೀಗಂದವರು ನಮ್ಮ ಬೀದಿಯ ದರ್ಶಿನಿ ಹೋಟಲಿನ ಸುಬ್ರಾಯ ಭಟ್ಟರು. ಅವರ ಸಂಪಾದಕತ್ವದಲ್ಲಿ ಮುಂದಿನ ಯುಗಾದಿ ಸಮಯಕ್ಕೆ "ಅಡುಗೆ" ವಿಷಯಕ್ಕೆ ಸಂಬಂಧಿಸಿದ ದಿನ ಪತ್ರಿಕೆ ಬರುವುದಂತೆ!


ಮುಂದಿನ ಪುಟದಲ್ಲೇ ಬಾಯಲ್ಲಿ ನೀರೂರಿಸುವಂತಹ ಹೊಸ ಹೊಸ ಅಡುಗೆಯ ಚಿತ್ರ-ಲೇಖನಗಳು, ಉಚಿತ ಸ್ಯಾಂಪ್‌ಲ್‌ನೊಂದಿಗೆ! ಒಳಪುಟಗಳಲ್ಲಿ ಹೋಟಲ್‌ಗಳು ಹಾಗೂ ಅಲ್ಲಿನ ವಿಶೇಷ ತಿನಿಸುಗಳ ವಿವರ, ಕನ್ಷೆಷನ್ ಕೂಪನ್‌ಗಳ ಜತೆ! ಕೊನೆಯ ಅರ್ಧ ಪುಟದಲ್ಲಿ ಮಾತ್ರ ಆ ದಿನದ ರಾಜಕೀಯ+ಸಿನೆಮಾ+ಕ್ರೀಡಾ ಸುದ್ದಿಗಳು ಇರುವುದಂತೆ.


ಎಕ್ಸ್ಟ್ರಾ ಹತ್ತು ರೂ ಕೊಟ್ಟರೆ ಪತ್ರಿಕೆ ಜತೆ "ರೆಡಿ ಟು ಈಟ್" ತಿನಿಸು ಸಹ ಬೆಳಗ್ಗೆ ಬೆಳಗ್ಗೆ ನಿಮ್ಮ ಮನೆಬಾಗಿಲಿಗೆ ಬರಲಿದೆ.


ಅಡುಗೆ ಮಾಡಲು ಉದಾಸೀನ ಕ್ಷಮಿಸಿ ಸಮಯವಿಲ್ಲದ ನಾರಿಯರೇ, ತಮ್ಮ ಮನೆಯವರನ್ನು ಕೂಡಲೇ ನಿಮ್ಮ ಏರಿಯಾದ ಪತ್ರಿಕಾ ವಿತರಕರ ಬಳಿಗೆ ಅಟ್ಟಿ..


 ಅಥವಾ ಬೆಳ್ಳಂಬೆಳಗ್ಗೆ ಪತ್ರಿಕೆ ಓದುತ್ತಾ ಗೋಬೀ ಮಂಚೂರಿ ತಿನ್ನುತ್ತಿರುವ ಪಕ್ಕದ ಮನೆ ಪಂಕಜಮ್ಮನವರನ್ನು ನೋಡಿ ಹೊಟ್ಟೆ ಉರಿಸಿಕೊಳ್ಳಿ..


-ಗಣೇಶ.

Rating
No votes yet

Comments