ವಾಕ್ಪಥ ೨ನೆಯ ಹೆಜ್ಜೆ
ಇಂದು ಬೆಳಿಗ್ಗೆ ಎದ್ದು ಪ್ರಾತಃ ವಿಧಿಗಳನ್ನು ಬೇಗನೆ ಮುಗಿಸಿ ಸೃಷ್ಟಿ ವೆಂಚರ್ಸ್ ಬಳಿ ಹೋಗುವ ಹೊತ್ತಿಗೆ ಹತ್ತು ಐದಾಗಿತ್ತು. ಅಂದರೆ ಸರಿಯಾದ ಸಮಯಕ್ಕೆ ಐದು ನಿಮಿಷ ತಡವಾಗಿ ಹೋಗಿದ್ದೆ. ಅಲ್ಲಿ ಹೋಗುವ ಹೊತ್ತಿಗೆ ಸಂಪದಿಗರಾದ ಗೋಪಿನಾಥ್ ರಾಯರು, ಹರೀಶ್ ಆತ್ರೇಯ, ರಘು.ಎಸ್.ಪಿ,ಸುನೀಲ, ಆತ್ರೇಯರ ಸ್ನೇಹಿತೆ ಮಿಥಿಲ ಇಷ್ಟು ಜನ ಉಪಸ್ಥಿತರಿದ್ದರು. ನಂತರ ಪ್ರಸನ್ನ ಕುಲಕರ್ಣಿ ಅವರ ಆಗಮನದಿಂದ ವಾಕ್ಪಥ ಎರಡನೇ ಗೋಷ್ಟಿಗೆ ಚಾಲನೆ ದೊರೆಯಿತು. ವಾಕ್ಪಥ ದ ಸ್ಥಾಪಕರಾದ ಪ್ರಭು ಮೂರ್ತಿ ಅವರು ವಿದೇಶಕ್ಕೆ ತೆರಳಿದ್ದರಿಂದ ಅವರು ಆಗಮಿಸಿರಲಿಲ್ಲ. ಅದೇ ರೀತಿ ಕಡೆ ಗಳಿಗೆಯಲ್ಲಿ ಅನಿವಾರ್ಯ ಕಾರಣಗಳಿಂದ ಹೊಳೆನರಸಿಪುರ ಮುಂಜುನಾಥ್ ಹಾಗೂ ಮಧ್ವೇಶ್ ಅವರು ಆಗಮಿಸಿರಲಿಲ್ಲ.
ಎರಡನೇ ಗೋಷ್ಟಿಯ ಸಂಚಾಲಕರಾದ ಗೋಪಿನಾಥ್ ಅವರು ತಮ್ಮ ಕಿರುಪರಿಚಯದೊಂದಿಗೆ ಇಂದಿನ ಗೋಷ್ಠಿ ಶುರು ಮಾಡಿದರು. ನಂತರ ಮತ್ತೊಬ್ಬ ಸಂಪದಿಗರಾದ ರಾಮ್ ಮೋಹನ್ ಹಾಗೂ ಪಾರ್ಥಸಾರಥಿ ಅವರ ಆಗಮನವಾಯಿತು. ರಘು ಎಸ್.ಪಿ. ಅವರು ಜಾನಪದ ಕುರಿತಾಗಿ ಮಾಡಿದ ಭಾಷಣ ಅದ್ಭುತವಾಗಿತ್ತು. ಲೆಕ್ಕಕ್ಕೆ ಆರರಿಂದ ಎಂಟು ನಿಮಿಷ ಕಾಲಾವಕಾಶದಲ್ಲಿ ತಮ್ಮ ಭಾಷಣ ಮುಗಿಸಬೇಕಿದ್ದ ರಘು ಅವರು ಹತ್ತು ನಿಮಿಷ ತೆಗೆದುಕೊಂಡರೂ ಅವರ ಭಾಷಣ ಇಷ್ಟು ಬೇಗ ಮುಗಿದುಹೋಯಿತಲ್ಲ ಎಂದು ಬೇಸರವಾಯಿತು. ಏಕೆಂದರೆ ಅಷ್ಟು ಚೆನ್ನಾಗಿ ಜಾನಪದದ ಬಗ್ಗೆ ವಿವರಿಸಿದರು. ಹಾಗೆ ಕಡೆಯಲ್ಲಿ ಬುಡುಬುಡಿಕೆಯವರ ಶೈಲಿಯಲ್ಲಿ ಅದ್ಭುತವಾಗಿ ಮಾತಾಡಿ ತಮ್ಮ ಭಾಷಣ ಮುಗಿಸಿದರು. ನಂತರ ಬಂದ ಹರೀಶ್ ಆತ್ರೇಯರು ಹೆಚ್ಚುಕಮ್ಮಿ ಅದೇ ಜನಪದದ ಕುರಿತಾಗಿ ಮಾತಾಡಿ ತಮಗೆ ನಿಗದಿಯಾದ ಆರರಿಂದ ಎಂಟು ನಿಮಿಷದಲ್ಲೇ ಭಾಷಣ ಮುಗಿಸಿದರು.
ನಂತರ ನಡೆದ ಆಶುಭಾಷಣದಲ್ಲಿ "ನಾ ಕಂಡ ಚಮತ್ಕಾರಿಕ ವಿಷಯ" ದ ಕುರಿತಾಗಿ ಮೊದಲು ಶುರು ಮಾಡಿದ ರಘು ಅವರು ಕುತೂಹಲಕಾರಿಯಾಗಿ ತಮ್ಮ ಅನುಭವವನ್ನು ಹಂಚಿಕೊಂಡರು. ಅವರು ಊರಿನಲ್ಲಿ ಎರಡನೇ ಆಟಕ್ಕೆ ಸತ್ಯ ಹರಿಶ್ಚಂದ್ರ ಸಿನಿಮಾ ನೋಡಿ ಬರುತ್ತಿದ್ದಾಗ ರೈಲ್ವೆ ಹಳಿ ಮೇಲೆ ಅಪಘಾತವಾಗಿ ಬಿದ್ದಿದ್ದ ಹೆಣವೊಂದು, ಅದನ್ನು ದಾಟಿ ಮುಂದೆ ಬರುತ್ತಿದ್ದ ಹಾಗಿ ಮರದ ಕೊಂಬೆಯೊಂದು ಕತ್ತಲಲ್ಲಿ "ಬಾ ಬಾ" ಎಂದು ಕರೆದಂತಾಯಿತೆಂದು ತಮ್ಮ ಭ್ರಮೆ ಯನ್ನು ತಿಳಿಸಿದರು
ನಂತರ ಬಂದ ಪಾರ್ಥಸಾರಥಿಯವರು ಯಾವ ವಿಷಯ ಹೇಳಿದರೆಂದು ಮರೆತು ಬಿಟ್ಟೆ ಕ್ಷಮಿಸಿ. ನಂತರ ರಾಮ್ ಮೋಹನರು ಬಂದು ತಮಗಾದ ಅನುಭವವನ್ನು ಟೆಲಿಪತಿ, sixth sense ಕುರಿತಾಗಿ ಹೇಳಿದರು. ನಂತರ ನನ್ನ ಸರದಿ. ನಾ ಆರಿಸಿಕೊಂಡ ವಿಷಯ ಮಾತು, ನಾನು ಅಲ್ಲಿ ನಿಂತು ಮಾತಿನ ಬಗ್ಗೆ ಮಾತನಾಡುತ್ತಿದ್ದಾರೆ ಕಂಪಿಸುತ್ತಿದ್ದೆ. ಏಕೆಂದರೆ ನನಗೆ ಸಭಾ ಕಂಪನ. ಹಾಗಾಗಿ ಏನೇನೋ ಮಾತಾಡಿ ಮುಗಿಸಿಬಿಟ್ಟೆ. ನನ್ನ ನಂತರ ಬಂದ ಸುನೀಲ್ ಅವರು ಆರಿಸಿಕೊಂಡ ವಿಷಯ ಉಪವಾಸ ಸತ್ಯಾಗ್ರಹ. ಇತ್ತೀಚಿಗೆ ಗಾಂಧಿಜಿ ಅವರನ್ನು ಹೆಚ್ಚಾಗಿ ಓದಿಕೊಂಡಿದ್ದರ ಪರಿಣಾಮ ಅವರನ್ನು ಈ ವಿಷಯ ಆರಿಸಿಕೊಳ್ಳಲು ಪ್ರೇರೇಪಿಸಿದ್ದಾಗಿ ತಿಳಿಸಿದರು. ಅವರ ನಂತರ ಬಂದ ಪ್ರಸನ್ನ ಕುಲಕರ್ಣಿ ಅವರು ತಮಗೆ ಹತ್ತು ತಿಂಗಳ ಹಿಂದೆ ಹುಟ್ಟಿದ ಮಗಳ ಬಗ್ಗೆ ವಿವರಿಸುತ್ತ ಭಾವಪರವಶರಾದರು. ಆ ನಂತರ ಬಂದ ಹರೀಶ್ ಆತ್ರೇಯ ಅವರು ಆರಿಸಿಕೊಂಡ ವಿಷಯ ಮಾಧ್ಯಮ ಹಾಗೂ ಅಂತರ್ಜಾಲ. ಆ ನಂತರ ಬಂದ ಮಿಥಿಲ ಅವರು ಅಮ್ಮನ ಪ್ರೀತಿ ಯ ವಿಷಯ ಆರಿಸಿಕೊಂಡು ಮಾತನಾಡಿದರು.
ಎಲ್ಲರ ಆಶುಭಾಷಣ ಮುಗಿದ ನಂತರ ಗೋಪಿನಾಥ್ ಅವರು ವಂದನಾರ್ಪಣೆ ಮಾಡಿ ಮುಂದಿನ ಗೋಷ್ಟಿಯ ನಿರ್ವಹಣೆಯನ್ನು ಹರೀಶ್ ಆತ್ರೇಯ ಅವರಿಗೆ ಹಸ್ತಾಂತರಿಸಿದರು. ನಂತರ ಎಲ್ಲರೂ ಕೆಳಗಿಳಿದು ಬಂದು ಕಾಫಿ ಸೇವನೆ ಮಾಡಿ ತೆರಳಿದೆವು. ಈ ತೆರನಾಗಿ ವಾಕ್ಪಥದ ಎರಡನೇ ಗೋಷ್ಠಿ ಯಶಸ್ವಿಯಾಗಿ ಮುಗಿಯಿತು.
Comments
ಉ: ವಾಕ್ಪಥ ೨ನೆಯ ಹೆಜ್ಜೆ
In reply to ಉ: ವಾಕ್ಪಥ ೨ನೆಯ ಹೆಜ್ಜೆ by manju787
ಉ: ವಾಕ್ಪಥ ೨ನೆಯ ಹೆಜ್ಜೆ
ಉ: ವಾಕ್ಪಥ ೨ನೆಯ ಹೆಜ್ಜೆ
In reply to ಉ: ವಾಕ್ಪಥ ೨ನೆಯ ಹೆಜ್ಜೆ by prasannakulkarni
ಉ: ವಾಕ್ಪಥ ೨ನೆಯ ಹೆಜ್ಜೆ
ಉ: ವಾಕ್ಪಥ ೨ನೆಯ ಹೆಜ್ಜೆ
In reply to ಉ: ವಾಕ್ಪಥ ೨ನೆಯ ಹೆಜ್ಜೆ by Prabhu Murthy
ಉ: ವಾಕ್ಪಥ ೨ನೆಯ ಹೆಜ್ಜೆ