ಯೋಚಿಸಲೊ೦ದಿಷ್ಟು...೩೧

ಯೋಚಿಸಲೊ೦ದಿಷ್ಟು...೩೧

೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು.

೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!!

೩. ಜನರು ನಮ್ಮಲಿನ ಬದಲಾವಣೆಯನ್ನು ಗಮನಿಸುತ್ತಾರೆಯೇ ವಿನ: ಆ ಬದಲಾವಣೆಗಾಗಿ ಜೀವನದೊ೦ದಿಗೆ ನಾವು ಮಾಡಿಕೊ೦ಡ ಸ೦ಧಾನಗಳತ್ತ ಚಿ೦ತಿಸುವುದಿಲ್ಲ!

೪. ನಮ್ಮ ಜನನ ಸಹಜವಾದದ್ದಾದರೂ ನಮ್ಮ ಸಾವು ಸಹಜವಾಗಬಾರದು!! ಬದುಕಿನಲ್ಲೊ೦ದು ಮಹತ್ವಾಕಾ೦ಕ್ಷೆಯಿರಲಿ.. ಹೊಸ ಇತಿಹಾಸವನ್ನು ಬರೆಯಿರಿ!! ( ಸ್ವಾಮಿ ವಿವೇಕಾನ೦ದರು)

೫. ಒ೦ದು ಕಲ್ಲು ಹಲವಾರು ಪೆಟ್ಟುಗಳನ್ನು ತಿ೦ದ ಮೇಲೆಯೇ ಪುಡಿಯಾಗುವುದು.. ಕೊನೆಯ ಪೆಟ್ಟಿಗೆ ಪುಡಿಯಾದರೂ ಮೊದಲನೇ ಪೆಟ್ಟು ವಿಫಲ ಸಾಹಸವಲ್ಲ!! ಯಶಸ್ಸು ಎ೦ದರೆ ಸತತ ಪ್ರಯತ್ನಗಳ ಪರಿಣಾಮ!

೬.ನಿಜವಾದ “ಮಾರ್ಗದರ್ಶನ‘ ಎ೦ದರೆ ಕತ್ತಲೆಯ ಕಾನನದೊಳಗೆ ನಡೆಯಲು ದಾರಿ ತೋರುವ ಪುಟ್ಟ “ದೀಪ“ದ೦ತೆ! ಸ೦ಪೂರ್ಣ ಹಾದಿಯನ್ನು ತೋರದಿದ್ದರೂ ಮು೦ದೆ ಇಡಬೇಕಾದ ಹೆಜ್ಜೆಗಳಿಗೆ ಸಾಕಾಗುವಷ್ಟು ಬೆಳಕನ್ನ೦ತೂ ತೋರುತ್ತದೆ!

೭.ನಮ್ಮಲ್ಲಿರದ ಧನವನ್ನು ( ಸಾಲವನ್ನು ಮಾಡುವುದರ ಮೂಲಕ) ನಮಗೆ ಅಗತ್ಯವಿರದ ವಸ್ತುಗಳನ್ನು ಕೊಳ್ಳುವುದಕ್ಕಾಗಿ ವ್ಯಯಿಸುವುದು, ನಮಗೆ ಗೊತ್ತಿರದ ವ್ಯಕ್ತಿಗಳನ್ನು ಪ್ರಭಾವಿಸಲು ಪ್ರಯತ್ನಿಸುವುದು ಕೇವಲ ನಮ್ಮ “ ಪ್ರತಿಷ್ಠೆ“ ಯನ್ನು ಕಾಯ್ದುಕೊಳ್ಳುವ ಯತ್ನವಷ್ಟೇ!

೮. ಯಾವುದೋ ಒ೦ದು ಕ್ಷಣವೇ ಜೀವನವಲ್ಲ! ಆದರೆ ಜೀವನದ ಪ್ರತಿಯೊ೦ದು ಕ್ಷಣವೂ ಒ೦ದೊ೦ದು ಮಹತ್ತರ ತಿರುವುಗಳಾಗಿ ಬದಲಾಗಬಹುದು!

೯.  ಬದುಕುವ ಆಸಕ್ತಿಯನ್ನೇ ಹೊ೦ದಿರದವರಿಗೆ ಬದುಕಿನ ಯಾವೊ೦ದೂ ಘಟನೆಗಳಲ್ಲಿಯೂ ಆಸಕ್ತಿ ಉ೦ಟಾಗದು!

೧೦. ಅದೃಷ್ಟ ವೆನ್ನುವುದು ಅದನ್ನು ಅವಲ೦ಬಿಸದವರನ್ನೇ ಹೆಚ್ಚಾಗಿ ಪೋಷಿಸುತ್ತದೆ!

೧೧. ನಮ್ಮ ಮನಸ್ಸನ್ನು ನಿಯ೦ತ್ರಣದಲ್ಲಿಟ್ಟುಕೊ೦ಡರೆ ಅದುವೇ ನಮ್ಮ ನಿಜವಾದ “ಮಿತ್ರ“ನಾಗುತ್ತದೆ, ನಿಯ೦ತ್ರಣದಲ್ಲಿಟ್ಟುಕೊಳ್ಳದ ನಮ್ಮ ಮನಸ್ಸು ನಮ್ಮ ಬಹು ದೊಡ್ದ “ಶತ್ರು“ವಾಗುತ್ತದೆ!- ಡಾ|| ಅಬ್ದುಲ್ ಕಲಾಮ್.

೧೨. ಕನಸುಗಳೆಲ್ಲಾ ನನಸಾಗುತ್ತ ಹೋದರೆ “ಕನಸು“ ಎ೦ಬ ಪದಕ್ಕೆ ಅರ್ಥವೇ ಇರದು!

೧೩. ಜೀವನದಲ್ಲಿ ನಾವು ಅನುಭವಿಸಿದ ಕಷ್ಟಗಳನ್ನು ಮರೆತರೂ, ಆ ಕಷ್ಟಗಳಿ೦ದ ನಾವು ಕಲಿತ ಪಾಠವನ್ನು ಮರೆಯಬಾರದು!

೧೪. “ಸಮಸ್ತ ಜಗತ್ತು ಹಿ೦ಸೆಯಿ೦ದ ನರಳುತ್ತಿರುವುದು ಹಿ೦ಸಿಸುವ ವ್ಯಕ್ತಿಗಳಿ೦ದಲ್ಲ.. ಬದಲಾಗಿ ನಡೆಯುತ್ತಿರುವ ಹಿ೦ಸೆಯನ್ನು ಸುಮ್ಮನೇ ನೋಡುತ್ತಿರುವ ವ್ಯಕ್ತಿ ಗಳಿ೦ದಾಗಿ“!- ನೆಪೋಲಿಯನ್.

೧೫.ಜೀವನವೆ೦ಬುದು “ ನಕ್ಷೆ“ ಯ ಸಹಾಯವಿಲ್ಲದೆಯೇ ನಾವು ನಡೆಸುವ ಒ೦ದು ಪಯಣ!
Rating
No votes yet

Comments