ಶಿವನ ಒಲಿಸುವ ಪರಿ
ದಟ್ಟಕಾಡಲೊಬ್ಬಂಟಿ ಅಲೆವರು
ಬೆಟ್ಟದ ತುದಿಗೂ ಏರುವರು
ಕೊಳದಾಳದಲಿ ಮುಳುಗುವರು,
ತಿಳಿಗೇಡಿಗಳು ಹೂಗಳಿಗೆಂದು!
ಮನದ ಕೊಳದಲೇ ಅರಳಿದ
ಹೂವೊಂದ ನೆಚ್ಚಿ ಮುಡಿಸಲು
ಉಮೆಯರಸ ಮೆಚ್ಚಿ ನಲಿವ-
ನೆಂಬುದನಿವರು ಅರಿವರೆಂದು?
ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯)
ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||
-ಹಂಸಾನಂದಿ
ಕೊ: ಉಮೆಯೊಡನೆ ನಂದಿಯೇರಿರುವ ಶಿವ, ಹೊಯ್ಸಳೇಶ್ವರ ದೇವಾಲಯ, ಹಳೇಬೀಡು
ಕೊ.ಕೊ: ವೈಶಾಖ ಶುದ್ಧ ಪಂಚಮಿಯಂದು ಶಂಕರಜಯಂತಿ, ಅಂದರೆ ಆದಿಶಂಕರರು ಹುಟ್ಟಿದ ದಿನ. ಅದು ನೋಡಿದಾಗ ಶಿವಾನಂದ ಲಹರಿಯ ನಾಲ್ಕಾರು ಶ್ಲೋಕಗಳನ್ನು ಓದಿದೆ. ಅದರಲ್ಲಿ ಒಂದರ ಅನುವಾದ ಇದು.
ಚಿತ್ರ ಕೃಪೆ: http://upload.wikimedia.org/wikipedia/commons/2/2d/Halebidu_shiva.jpg
Rating
Comments
ಉ: ಶಿವನ ಒಲಿಸುವ ಪರಿ
In reply to ಉ: ಶಿವನ ಒಲಿಸುವ ಪರಿ by asuhegde
ಉ: ಶಿವನ ಒಲಿಸುವ ಪರಿ