ಸ್ವಯಂ ನಿವೃತ್ತಿ

ಸ್ವಯಂ ನಿವೃತ್ತಿ

 ಸಂಪದಿಗ ಮಿತ್ರರೇ,

 ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸೇವೆಯಿಂದ ನಾನು ನಿನ್ನೆ  ಸ್ವಯಂ ನಿವೃತ್ತಿ ಪಡೆದಿರುವೆ. ನನ್ನ ಮಿತ್ರರು ತಮ್ಮ ಮನದಾಳದ ಮೆಚ್ಚುಗೆಯ ಮಾತುಗಳನ್ನಾಡಿ  ನನ್ನನ್ನು ಬೀಳ್ಕೊಟ್ಟಿದ್ದಾರೆ. ಹಲವು  ವರ್ಷಗಳ ಒಡನಾಟ ಹಲವು ಮಿತ್ರರ ಕಣ್ಣಾಲಿಗಳನ್ನು ತೇವಗೊಳಿಸಿತ್ತು. ನನ್ನ ಮಿತ್ರರು ಹಾಗೂ ಅತ್ಯಂತ ಹಿರಿಯ ಅಧಿಕಾರಿಗಳು ನನ್ನ ಬಗ್ಗೆ ಹೊಂದಿರುವ ಭಾವನೆಗಳು ಅವರ ಮಾತುಗಳಿಂದ ವ್ಯಕ್ತವಾದಾಗ ನನ್ನ ಮೂವೆತ್ತರಡು ವರ್ಷಗಳ ನಿಗಮದ ಸೇವೆ ಸಾರ್ಥಕವಾಯ್ತು ಎಂದು ಸಮಾಧಾನಗೊಂಡೆ. ನೆನಪಿನ ಕೆಲವು ಚಿತ್ರಗಳನ್ನು ಸಂಪದಿಗ ಮಿತ್ರರಿಗಾಗಿ ಪ್ರಕಟಿಸಿರುವೆ. ಕ.ವಿ.ಪ್ರ.ನಿ.ನಿ, ಹಾಸನ ವೃತ್ತದ ಅಧೀಕ್ಷಕ ಇಂಜಿನಿಯರ್ ಶ್ರೀ ಬೋಪಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಲ್ಲಾ ಕಾರ್ಯನಿರ್ವಾಹಕ ಇಂಜಿನಿಯರುಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಮತ್ತು ಸಹಾಯಕ/ಕಿರಿಯ ಇಂಜಿನಿಯರ್ ಗಳು ಪಾಲ್ಗೊಂಡು ಎಲ್ಲರೂ ಶುಭ ಕೋರಿದರು.

ಚಿತ್ರಗಳಿಗೆ ಕ್ಯಾಪ್ಶನ್ ಹಾಕುವುದಕ್ಕೆ ತಿಳಿಯುತ್ತಿಲ್ಲ. ವಿವರಣೆ ಇಲ್ಲೇ ಕೊಡುವೆ.

ಚಿತ್ರ-೧:  ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧೀಕ್ಷಕ ಇಂಜಿನಿಯರ್ ಶ್ರೀ ಬೋಪಯ್ಯನವರೊಡನೆ

ಚಿತ್ರ-೨: ಸಭೆ

ಚಿತ್ರ-೩: ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಹಾಸನ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಮತಿ ಬಿ.ಟಿ. ಲತ

ಚಿತ್ರ-೪: ಅರಸೀಕೆರೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಸತ್ಯನಾರಾಯಣ

ಚಿತ್ರ-೫: ಹಾಸನ ವಿದ್ಯುತ್ ಸ್ವೀಕರಣಾ ಕೇಂದ್ರದ ನಿರ್ವಹಣಾ ಇಂಜಿನಿಯರ್ ಶ್ರೀ ವಿನಯ್

ಚಿತ್ರ-೬: ಹಾಸನ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಗೋಪಾಲ್

ಚಿತ್ರ-೭:ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಅಶೋಕ್ ಕುಮಾರ್

          

Rating
No votes yet

Comments