ಸಂಪದ ಹಾಗೂ ಜ್ಯೋತಿಷ್ಯ

ಸಂಪದ ಹಾಗೂ ಜ್ಯೋತಿಷ್ಯ

ಸ್ವಾಮಿ ನಮಸ್ಕಾರ

ಜ್ಯೋತಿಷಿಗಳು : ಓಹೋ ನಮಸ್ಕಾರ ಬನ್ನಿ, ಕೂತ್ಕೊಳಿ, ಹೇಳಿ ಏನು ನಿಮ್ಮ ಸಮಸ್ಯೆ?

ಸಂಪದಿಗ : ಸ್ವಾಮಿ ಇತ್ತೀಚಿಗೆ ಯಾಕೋ ನಮ್ ಸಂಪದದಲಿ ಮುಂಚಿನ ಹಾಗೆ ಬರಹಗಳೇ ಬರುತ್ತಿಲ್ಲ, ಹಾಗೆ ದಿನ ದಿನ ಹಳೆಯ ಸಂಪದಿಗರು ಸಂಪದದ ಕಡೆ ನೋಡುತ್ತಲೇ ಇಲ್ಲ, ಕಾರಣವೇನು ಅಂತಾನೆ ಗೊತ್ತಾಗ್ತಾ ಇಲ್ಲ, ದಯವಿಟ್ಟು ಸ್ವಲ್ಪ ಏನಾದರೂ ಪರಿಹಾರ ಇದ್ರೆ ತಿಳಿಸಿ

ಜ್ಯೋತಿಷಿಗಳು : ಎಲ್ಲಿ ಸಂಪದದ ಜಾತಕ ಕೊಡಿ ನೋಡೋಣ

ಸಂಪದಿಗ : ತಗೋಳಿ ಸ್ವಾಮಿ

ಜ್ಯೋತಿಷಿಗಳು : ಸಂಪದದ ಜಾತಕ ತೆಗೆದುಕೊಂಡು ದೀರ್ಘಕಾಲ ಅದನ್ನು ಪರೀಕ್ಷಿಸಿ ಕವಡೆಗಳನ್ನು ಹಾಕಿ ಹೇಳಿದರು

ನೋಡಿ ಸ್ವಾಮಿ ನಿಮ್ ಸಂಪದ ಮುಂಚೆ ತುಂಬಾ ಲವಲವಿಕೆ  ಇಂದ ಇತ್ತು, ಉತ್ತಮವಾದ ಬರಹಗಳು, ಚರ್ಚೆಗಳು, ಕವನಗಳು ಇದ್ದವು, ಎಲ್ಲಕ್ಕಿಂತ ಮುಖ್ಯವಾಗಿ ಓದುಗರು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದರು. ಅದು ಚೆನ್ನಾಗಿದೆಯೋ ಇಲ್ಲವೋ ಎರಡನ್ನೂ ಪ್ರತಿಕ್ರಿಯೆಯ ಮೂಲಕ ತಿಳಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಓದುಗರು ಯಾಕೋ ಪ್ರತಿಕ್ರಿಯಿಸುವಲ್ಲಿ ಸಂಕೋಚ ಪಡುತ್ತಿದ್ದಾರೆ. ಸಂಪದಿಗ : ಹೌದು ಸ್ವಾಮಿ ತಮ್ಮ ಮಾತುಗಳು ನಿಜ. ಆದರೆ ಈಗಲೂ ಉತ್ತಮ ಬರಹಗಾರರು ಇದ್ದಾರಲ್ಲ ಸಂಪದದಲ್ಲಿ ಆದರೂ ಯಾಕೆ ಬರಹಗಳು ನಿರೀಕ್ಷಿಸಿದಂತೆ ಬರುತ್ತಿಲ್ಲ, ಅದೂ ಕಳೆದೆರಡೂ ತಿಂಗಳಂತೂ ತೀರ ನೀರಸವಾಗಿತ್ತು. ಜ್ಯೋತಿಷಿಗಳು : ನಿಜ ಸ್ವಾಮಿ ಈಗಲೂ ಉತ್ತಮ ಬರಹಗಾರರಿದ್ದಾರೆ, ಅವರಿಂದ ಉತ್ತಮ ಬರಹಗಳು ಬರುತ್ತಿವೆ. ಆದರೆ ಹಳೆಯ ಸಂಪದಿಗರು ಏಕೆ ಬಿಟ್ಟರು?

 


 


ಸಂಪದಿಗ : ಅದಕ್ಕೆ ಉತ್ತರ ನೀವೆ ಕೊಡಬೇಕು ಸ್ವಾಮಿ.

 


ಜ್ಯೋತಿಷಿ : ನೋಡಿ ಹೀಗೆ ಹೇಳುತ್ತೀನೆಂದು ತಪ್ಪು ತಿಳಿಯಬೇಡಿ. ಕೆಲವು ಸಂಪದಿಗರು ತಾವು ಬಹಳ ಇಷ್ಟಪಟ್ಟು, ನಿರೀಕ್ಷೆಯಿಂದ ಬರಹಗಳನ್ನು ಬರೆದಿರುತ್ತಾರೆ. ಆದರೆ ಅವರು ನಿರೀಕ್ಷಿಸಿದ ಮಟ್ಟಕ್ಕೆ ಪ್ರತಿಕ್ರಿಯೆಗಳು ಬರದಿದ್ದಾಗ ಮನ ನೊಂದು ಬಿಟ್ಟಿರುವ ಸಾಧ್ಯತೆಗಳು ಇವೆ. ಎರಡನೆಯದು ಕೆಲವು ಚರ್ಚೆಗಳಲ್ಲಿ ಚರ್ಚಾ ವಿಷಯ ಬಿಟ್ಟು ವೈಯಕ್ತಿಕ ನಿಂದನೆಗಳಿಂದ ಕೂಡ ಸಂಪದ ಬಿಟ್ಟಿರುವ ಸಾಧ್ಯತೆಗಳಿವೆ. 

 


ಸಂಪದಿಗ : ಸ್ವಾಮಿ ಹಾಗಿದ್ದಲ್ಲಿ ಇದಕ್ಕೆ ಪರಿಹಾರವೇನು.

ಜ್ಯೋತಿಷಿ : ನೋಡಿ ಇದಕ್ಕೆ ಚರ್ಚಾ ಶಾಂತಿ, ಪ್ರತಿಕ್ರಿಯೆ ಶಾಂತಿ ಮಾಡಿಸಬೇಕು

ಸಂಪದಿಗ : ಹಾಗೆಂದರೇನು.

ಜ್ಯೋತಿಷಿ : ಚರ್ಚಾ ಶಾಂತಿ ಎಂದರೆ, ಮುಂಚ ಸಂಪದದಲ್ಲಿ ಸಾಕಷ್ಟು ವಿಷಯಗಳು ಚರ್ಚೆಗಳು ಆಗುತ್ತಿದ್ದವು, ಅದೇ ರೀತಿ ಓದುಗರಿಗೆ ಆಸಕ್ತಿಯೂ ಇತ್ತು, ಎಷ್ಟೋ ಗೊತ್ತಿಲ್ಲದ ವಿಷಯಗಳ ಬಗ್ಗೆ ಉತ್ತಮ ಮಾಹಿತಿಯೂ ದೊರಕುತ್ತಿತ್ತು . ಆದರೆ ಈಗ ಅದೆಲ್ಲಾ ನಡೆಯುತ್ತಿತ್ಲ್ಲ. ಆದ್ದರಿಂದ ಚರ್ಚಾ ಶಾಂತಿ , ಅಂದರೆ ಮತ್ತೆ ಚರ್ಚೆಗಳು ಶುರುವಾಗಬೇಕು, ಆರೋಗ್ಯದಾಯಕ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರತಿಕ್ರಿಯೆಗಳಿರಬೇಕು. ವೈಯಕ್ತಿಕ ನಿಂದನೆಗಳಿರಬಾರದು. ಅದರಿಂದ ಮತ್ತೆ ಸಂಪದ ಹಾಗೂ ಸಂಪದಿಗರು ಉತ್ತೆಜಿತರಾಗುವ ಸಾಧ್ಯತೆಗಳಿವೆ.

 


ಇನ್ನು ಪ್ರತಿಕ್ರಿಯೆ ಶಾಂತಿ ಎಂದರೆ ಸಾಧ್ಯವಾದಷ್ಟು ಬರಹಗಳಿಗೆ ಪ್ರತಿಕ್ರಿಯೆ ನೀಡುವುದು. ಆ ಬರಹ ಚೆನ್ನಾಗಿದ್ದರೆ ಚೆನ್ನಾಗಿದೆ ಎಂದು ಇಲ್ಲದಿದ್ದರೆ ಅದು ಏತಕ್ಕೆ ಚೆನ್ನಾಗಿಲ್ಲ ಹಾಗೆ ಹೇಗೆ ಉತ್ತಮಪಡಿಸಬಹುದು ಎಂದು ತಿಳಿಸುವುದು. ಎಷ್ಟೋ ಹೊಸಬರು ಸಂಪದಕ್ಕೆ ಬರುತ್ತಿರುತ್ತಾರೆ ಅವರು ತಾವು ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಕ್ರಿಯೆಗಳು ಬರದಿದ್ದಾಗ ಅವರ ಉತ್ಸಾಹ ಕಡಿಮೆಯಾಗುವ ಸಾಧ್ಯತೆಗಳೇ ಹೆಚ್ಚು.

ಸಂಪದಿಗ : ಸ್ವಾಮಿ ತಮ್ಮ ಅಮೂಲ್ಯ ಸಲಹೆಗಳಿಗೆ ವಂದನೆಗಳುನೋಡೋಣ ಇನ್ನು ಮುಂದಾದರೂ ಸಂಪದ ತನ್ನ ಹಳೆಯ ವೈಭವಕ್ಕೆ ಮರಳಿ ಬರುತ್ತದೋ ಎಂದು

Comments