ಎತ್ತಿ ಹಿಡಿಯಿರಿ ಕನ್ನಡ ಬಾವುಟ ನಿಮ್ಮಲ್ಲಿ ನಿಮಗೆ ಶಂಕೆ ಏಕೆ?

ಎತ್ತಿ ಹಿಡಿಯಿರಿ ಕನ್ನಡ ಬಾವುಟ ನಿಮ್ಮಲ್ಲಿ ನಿಮಗೆ ಶಂಕೆ ಏಕೆ?

ಸಂಪದದ ಭವಿಷ್ಯದ ಬಗ್ಗೆ  ಚಿಂತಿತರಾದ ಜಯಂತ್ ಜ್ಯೋತಿಷಿ ಹತ್ತಿರ ಹೋಗಿದ್ದಾರೆ

ಅದಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ....

 

ಜಯಂತ್
ಸಂಪದದ ಬಗ್ಗೆ ಅಷ್ಟೊಂದು ಯೋಚಿಸುತ್ತೀರಿ ? ಪ್ರತಿಯೊಂದು ಜೀವಿಯು() ತನ್ನನ್ನು ತಾನು ಕಾಪಾಡಿಕೊಳ್ಳುತ್ತದೆ ಅದು ಪ್ರಕೃತಿ ನಿಯಮ
ನೀವು ಬರೆಯಬೇಕೆಂದಿರುವದನ್ನೆಲ್ಲ ಬರೆಯುತ್ತ ಹೋಗಿ ಓದಲು ನಾವಿದ್ದೀವಿ
ಸಮುದ್ರದಲ್ಲಿ ಉಬ್ಬರ ಇಳಿತದಂತೆ ಎಲ್ಲವು ಅಷ್ಟೆ ಯಾವಾಗಲು ಒಂದೆ ಸಮ ಇರಲು ಸಾದ್ಯವೆ?
ಇಂದಿನ ಇಳಿತ ನಾಳಿನ ಹೆಚ್ಚು ಉಬ್ಬರಕ್ಕೆ ನಾಂದಿ

ಬಿಟ್ಟು ಹೋದವರ ನೆನೆದು ಕೊರಗುವಿರಿ ಏಕೆ?
ದೇವರು ಎರಡರೆಡು ಕೈ ಕೊಟ್ಟಿರುವುದು ಏಕೆ?
ಎತ್ತಿ ಹಿಡಿಯಿರಿ ಕನ್ನಡ ಬಾವುಟ ನಿಮ್ಮಲ್ಲಿ ನಿಮಗೆ ಶಂಕೆ ಏಕೆ?

 

ಮತ್ತೆ  ಆಸು ರವರ ಈ ಕವನ ಓದಿ....

(ಆಸುರವರ ಒಪ್ಪಿಗೆ ಪಡೆಯದೆ ಹಾಕಿರುವೆ ಅವರು ಕ್ಷಮಿಸಲಿ)

 

 

ಮನ ನೋಯಿಸಿಕೊಳ್ಳಬೇಕಾಗಿಲ್ಲ!

 

ಎಷ್ಟೇ ಒಳ್ಳೆಯ ಅಡುಗೆ ಮಾಡಿ ಬಡಿಸಿದರೂ,
ಖುಷಿಯಲ್ಲಿ ಹೊಟ್ಟೆ ತುಂಬಾ ಉಂಡವರೆಲ್ಲರೂ,
ಮೆಚ್ಚುಗೆಯ ಮಾತನಾಡುವರು ಎಂಬ ಖಾತ್ರಿಯೂ ಇಲ್ಲ

ನಾವೆಷ್ಟೇ ಚಿಂತನೆ ಮಾಡಿ ನಮ್ಮ ಮಾತುಗಳನ್ನು
ಹೊರ ಹಾಕಿದರೂ, ಜನರು ಧ್ಯಾನದಿಂದ ಆಲಿಸಿ
ಅರ್ಥೈಸಿಕೊಂಡು, ಪ್ರತಿಸ್ಪಂದಿಸುವರು ಎಂದೇನೂ ಇಲ್ಲ

ನಮ್ಮ ಯತ್ನದಲ್ಲಿ ಇಲ್ಲವಾದರೆ ಕಿಂಚಿತ್ತೂ ಲೋಪ
ಮತ್ತು ಇಹುದಾದರೆ ನಮಗೆ ಸದಾ ಆತ್ಮತೃಪ್ತಿ,
ನಿಜವಾಗಿಯೂ ನಾವು ಮನ ನೋಯಿಸಿಕೊಳ್ಳಬೇಕಾಗಿಲ್ಲ!

 

 

- ಪಾರ್ಥಸಾರಥಿ

 

Rating
No votes yet

Comments