ಯಡ್ಡಿ ಮತ್ತು ಕುಮ್ಮಿ ಸೇರಬಾರದು ಅಂತ ಬರೆದಾಗಿದೆ ಎಂದೋ ಬ್ರಹ್ಮನು

ಯಡ್ಡಿ ಮತ್ತು ಕುಮ್ಮಿ ಸೇರಬಾರದು ಅಂತ ಬರೆದಾಗಿದೆ ಎಂದೋ ಬ್ರಹ್ಮನು

ಸಂಜು ಮತ್ತು ಗೀತ ಹಾಡಿನ ಧಾಟಿಯಲ್ಲಿ ಓದಿಕೊಂಡು ಹೋಗಿ..ಇದು ಕೇವಲ ಹಾಸ್ಯಕ್ಕಾಗಿ...ಹೌದು ನಿಜವಾಗಿಯೂ ಇದು ಹಾಸ್ಯಕ್ಕಾಗಿ

 

ಯಡ್ಡಿ ಮತ್ತು ಕುಮ್ಮಿ ಸೇರಬಾರದು ಅಂತ ಬರೆದಾಗಿದೆ ಎಂದೋ ಬ್ರಹ್ಮನು

ರಾಜ್ಯಪ್ರೇಮಕ್ಕಿಂತ ಸೀಟು ನನ್ನ ಸ್ವಂತ ಎನ್ನುವಾಗ ಇನ್ನು ನಮಗೆ ಚಿಂತೆಯೂ...

ನಿನ್ನ ಸಿ.ಎಂ ಪದವಿಯನ್ನು ಕೊಡುಗೆ ನೀಡದಿದ್ದರೆ ನನಗಿನ್ನೂ..

ನಿನ್ನ ಎಲ್ಲ ದಾಖಲೆಯನ್ನು ಕೊಡುವೆ ಕೇಂದ್ರ ವಶಕ್ಕಿನ್ನೂ...

ಜನರ ಜೊತೆ ನಿಮ್ಮೀ ಆಟ ತರವೇ? ಕೊನೆಯಿಲ್ಲವೇ ಕೊನೆಯಿಲ್ಲವೇ ಓ ದೇವರೇ.....

 


ಯಡ್ಡಿ ಮತ್ತು ಕುಮ್ಮಿ ಸೇರಬಾರದು ಅಂತ ಬರೆದಾಗಿದೆ ಎಂದೋ ಬ್ರಹ್ಮನು

 

ಆ ದೇವರಾಣೆ ಈ ದೇವರಾಣೆ ಎಂದೆಲ್ಲ ಮಾಡಿ ಬದಲಾಗಲಿಲ್ಲ..

ಏನಾಗಲಿ ಬರೀ ಸುಳ್ಳಾಡುವೆ ನಿನ್ನ ಈ ಸುಳ್ಳಿಗೆ ಇಂದೇ ಕೊನೆಯಾಗಲಿ

ನಮ್ಮ ರಾಜ್ಯದಲ್ಲಿ ನಿನ್ನ ದಕ್ಷ ಸಿ.ಎಂ ಎಂದು ನಂಬಿ..ಚಿನ್ನದಂಥ ಓಟು ಕೊಟ್ಟು ಆರಿಸಿದರೆ ನಿನ್ನ

ಇತಿಹಾಸದ ಪುಟ ಕಾಣದ ಭ್ರಷ್ಟತೆ ನೀಡಿದೆ..

ಜನರ ಜೊತೆ ನಿಮ್ಮೀ ಆಟ ತರವೇ? ಕೊನೆಯಿಲ್ಲವೇ ಕೊನೆಯಿಲ್ಲವೇ ಓ ದೇವರೇ 

 


ಯಡ್ಡಿ ಮತ್ತು ಕುಮ್ಮಿ ಸೇರಬಾರದು ಅಂತ ಬರೆದಾಗಿದೆ ಎಂದೋ ಬ್ರಹ್ಮನು

 

ಮಾಡಿಲ್ಲ ಯಾರು ಇಷ್ಟಾಸ್ತಿಯನ್ನು...ಮಾಡಿರಬಹುದು ಅವರು ನಿನ್ನಂತೆ ಲೂಟಿ

ಜನತಾ ಎಂದರೆ ಅದಕೂ ಭ್ರಷ್ಟತೆ...ಕಮಲ ಎಂದರೂ ಅದಕೂ ಭ್ರಷ್ಟತೆ

ಕಮಲಕಿದ್ದ ಹೆಸರ ಇಂದು ಕೆಡಿಸಿ ಕೂತೆ ನೀನು...ಸಾಕು ಮಾಡು ಇನ್ನು ನಿನ್ನ ಭ್ರಷ್ಟ ನೀತಿಯನ್ನು

ಮರುಳಾಗರು ಮೋಸಹೋಗರು ರಾಜ್ಯದ ಜನತೆ...ದೇವರಾಣೆಯ ದಾಖಲೆಯಾಟವ ನಿಲ್ಲಿಸಿ

ರಾಜ್ಯದ ಅಭಿವೃದ್ಧಿಯ ಮುನ್ನಡೆಸಿ....

 


ಯಡ್ಡಿ ಮತ್ತು ಕುಮ್ಮಿ ಸೇರಬಾರದು ಅಂತ ಬರೆದಾಗಿದೆ ಎಂದೋ ಬ್ರಹ್ಮನು
Rating
No votes yet

Comments