ದೆಹಲಿ ಕೋರ್ಟ್ ಸ್ಫೋಟ: ಭಾರತದ ಮೇಲೆ ಮತ್ತೆ-ಮತ್ತೆ-ಧಾಳಿ-ಪ್ರಾಣ ಹಾನಿ-ಪರಿಹಾರ ಮಾತ್ರ ಸೊನ್ನೆ....

ದೆಹಲಿ ಕೋರ್ಟ್ ಸ್ಫೋಟ: ಭಾರತದ ಮೇಲೆ ಮತ್ತೆ-ಮತ್ತೆ-ಧಾಳಿ-ಪ್ರಾಣ ಹಾನಿ-ಪರಿಹಾರ ಮಾತ್ರ ಸೊನ್ನೆ....

ಪ್ರಿಯ ಸಂಪದಿಗರೇ


ಕೆಲ ತಿಂಗಳ ಹಿಂದೆ (೧೫  ಜುಲೈ    ೨೦೧೧) ನಾ ಮುಂಬೈ ಧಾಳಿ ಕುರಿತಾದ  ಲೇಖನವೊಂದನ್ನ ಬರೆದಿದ್ದೆ,


http://sampada.net/%E0%B2%AE%E0%B3%81%E0%B2%82%E0%B2%AC%E0%B3%88-%E0%B2%AE%E0%B3%87%E0%B2%B2%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%86-%E0%B2%AC%E0%B2%BE%E0%B2%82%E0%B2%AC%E0%B3%8D-%E0%B2%A7%E0%B2%BE%E0%B2%B3%E0%B2%BF


ಇವತ್ತು(೦೭-೦೯-೨೦೧೧) ಬೆಳಗ್ಗೆ  ದೆಹಲಿ ಕೋರ್ಟು  ಮೇಲೆ ,ಧಾಳಿ ಆಗಿದೆ (ಉಗ್ರರಿಗೆ ಕೋರ್ಟು-ಶಾಲೆ-ದೇವಸ್ಥಾನ ರಸ್ತೆ-ಮಹಡಿ , ಉಹೂ  ಒಂದೂ ವ್ಯತ್ಯಾಸವಿಲ್ಲ)


ಮತ್ತದೇ 'ಯಥಾ ಪ್ರಕಾರದ ಹಳೆ  ಕಿತ್ತೋಗಿರೋ  ಟೇಪ್ ರೆಕಾರ್ಡರ್ ತರಹ ಅದೇ ಪೊಳ್ಳು ಭರವಸೆಗಳು, ಅಶ್ವಾಶನೆಗಳು, ''ಶಿಖಂಡಿ ಖಂಡನೆ'ಯೂ  ಆಗುತ್ತಿದೆ


ಇನ್ನು ಕೆಲವರು ಮಾಮೂಲಿನಂತೆ ಪೋಲೀಸರ ಬೇಹುಗಾರಿಕೆಯ ವೈಫಾಲ್ಯದ      ಬಗ್ಗೆ  ಹೇಳುತ್ತಿದ್ದಾರೆ..


ನಾ ಆಗ ಬರೆದ ಬರಹವನ್ನೇ ಮತ್ತೊಮ್ಮೆ ಓದಿ,


ಆಗಿನ ಪರಿಸ್ತಿತಿಗೂ  ಈಗಿನದ್ದಕ್ಕು ಹೆಚ್ಚ್ಚಿನ ವ್ಯತ್ಯಾಸವೆನಿಲ್ಲ.


 


ಉಗ್ರರ ಗುರಿ ಈಗ ದೆಹಲಿಗೆ ಶಿಫ್ಟ್ ಆಗಿದೆ, ಸ್ಥಳ ಬದಲಾಗಿದೆ , ಆದರೆ  ಪ್ರಾಣ ಹಾನಿ  ಆಗಿದ್ದು ,ಈ ಸಾರಿ ಬಿಗಿ ಭದ್ರತೆ! ಇರೋ ಕೋರ್ಟಿನ ಮೇಲೆಯೇ...


ಹಾಗಾದ್ರೆ 'ತಪ್ಪುಗಳಿಂದ ಭಾರತ,ಮತ್ತು 'ಜನ ನಾಯಕರು' ಪಾಠ ಕಲಿತಿಲ್ಲವೇ?


ಕಲಿಯುವುದಿಲ್ಲವೇ?


 


ಇವರಿಗೆ 'ಒಸಾಮಾನನ್ನು' ಪರಲೋಕಕ್ಕೆ ಅಟ್ಟಲು ಅಮೇರಿಕ 'ಪಾಪಿ ಪಾಕ್ 'ಅನ್ನು  ಲೆಕ್ಕಿಸದೆ ,  ಅವರದೇ ನೆಲದಲ್ಲಿ ನುಗ್ಗಿ   ಕೊಂದದ್ದು, ಅರಿವಿಲ್ಲವೇ!!!

Comments