ಭ್ರ್ರಷ್ಟರ ಸಂಪತ್ತಿನ ಸದ್ವಿನಿಯೋಗ

ಭ್ರ್ರಷ್ಟರ ಸಂಪತ್ತಿನ ಸದ್ವಿನಿಯೋಗ

 ಈಗಿನ ರಾಜಕಾರಣಿಗಳ, ಅಧಿಕಾರಿಗಳ, ಆಡಳಿತ ವರ್ಗದವರ ಭ್ರಷ್ಟಾಚಾರ ಮಿತಿಮೀರಿದೆ. ಲೋಕಯುಕ್ತರ ತೆನಿಖೆಯಿಂದ ಕೋಟ್ಯಾಂತರ ರೂ ನಗದು ಹಾಗೂ ಆಸ್ತಿಪಾಸ್ತಿ ವಶಪಡಿಸಿಕೊಳ್ಳಲಾಗಿದೆ.ಈ ಸುದ್ದಿಗಳು ನಮ್ಮಂತಹ ಸಾಮಾನ್ಯ ನಾಗರಿಕರಿಗೆ ಸುದ್ಧಿ ಮಾಧ್ಯಮಗಳಿಂದ ತಿಳಿಯುತ್ತದೆ. ಆದರೆ ಆ ಹಣ, ವಸ್ತುಗಳು ಏನಾಯಿತು? ಎಂದು ಯಾರೂ   ತಿಳಿಸುವುದಿಲ್ಲ. ಆ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವ, ಆಪಾದಿತರನ್ನು ಹುದ್ದೆಯಿಂದ ವಜಾಮಾಡಲಾಗಿದೆ ಎಂಬ ಸುದ್ದಿಗಳೂ ತಿಳಿಯುತ್ತವೆ ಆದರೆ ಆ ಹಣ ಏನಾಯಿತು ಎಂದು ತಿಳಿಯುವುದಿಲ್ಲ. ತನಿಖೆ ಮುಗಿಯುವವರೆಗೂ ಆ ಹಣ, ಆಸ್ತಿಪಾಸ್ತಿಯನ್ನು ಭದ್ರವಾಗಿ ಇರಿಸುವುದರಿಂದ ಯಾರಿಗೂ ಲಾಭವಿಲ್ಲ ಆದರೆ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಅಂದರೆ ಉದಾಹರಣೆಗೆ ರಸ್ತೆ ರಿಪೇರಿ, ಶೌಚಾಲಯ ನಿರ್ಮಾಣ, ಶಾಲೆ, ಆಸ್ಪತ್ರೆ ಇತ್ಯಾದಿಗಳಿಗೆ ವಿನಿಯೋಗಿಸಿದರೆ ಉಚಿತವಲ್ಲವೇ? ಅಕಸ್ಮಾತ್ ಆಪಾದಿತರು ನ್ಯಾಯಾಲಯದಲ್ಲಿ ನಿರಪರಾಧಿ ಎಂದು ಸಾಬೀತಾದರೆ ಅವರೆಲ್ಲರ ಸ್ವತ್ತನ್ನು ಸರ್ಕಾರ ಹಿಂದಿರುಗಿಸಿದರಾಯಿತು. ಸಂಪತ್ತನ್ನು ಒಂದಡೆ ಮಿತಿಮೀರಿ ಸಂಗ್ರಹಿಸುವುದರಿಂದ ಅದರ ಮೌಲ್ಯ ನಷ್ಟವಾದಂತೆ ಅಲ್ಲವೇ?

    ನಮ್ಮ ದೇಶ ಸಂಪದ್ಭರಿತ ದೇಶ. ಆದರೆ ಆ ಸಂಪತ್ತು ದೇವಸ್ಥಾನಗಳ ಗರ್ಭ ಗುಡಿಗಳಲ್ಲಿ, ಭ್ರಷ್ಟಾಚಾರಿಗಳ ಮನೆಗಳಲ್ಲಿ ಮತ್ತು ಸ್ವಿಸ್ ಬ್ಯಾಂಕ್ ಗಳಲ್ಲಿ ಇವೆ. ಸಂಪದ್ಭರಿತ ದೇಶದ  ಸಾಮಾನ್ಯ ಪ್ರಜೆಗಳು ಮೂಲಭೂತ ಸೌಕರ್ಯಗಳೂ ಸರಿಯಾಗಿಲ್ಲದೆ ಸದಾ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಇಂತಹ ಸಂಗ್ರಹವಾದ ಸಂಪತ್ತು ಸಾರ್ವಜನಿಕರ ಒಳಿತಿಗೆ  ಉಪಯೋಗಕ್ಕೆ ಸಿಗುವಂತಾಗಲಿ. ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಎಲ್ಲರೂ ಹೊರಾಡುವುದು ಅನಿವಾರ್ಯ.
Rating
No votes yet

Comments