ಯಡ್ಡಿಯಿಂದ "ಜೈಲುಭರೋ" ಚಳವಳಿಗೆ ಚಾಲನೆ!

ಯಡ್ಡಿಯಿಂದ "ಜೈಲುಭರೋ" ಚಳವಳಿಗೆ ಚಾಲನೆ!

ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲಿಯಾಸ್ ಯಡ್ಡಿ, ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಆದರೆ, ಈ ಬಾರಿ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲಿಯಾಸ್ ಯಡ್ಡಿ "ಶೋಭಾಯಾತ್ರೆ"ಯ ಬದಲು "ಜೈಲುಯಾತ್ರೆ" ನಡೆಸುವ ಮೂಲಕ!

ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಹಗರಣಗಳ ಮೇಲೆ ಹಗರಣಗಳನ್ನು ಸೃಶ್ಟಿಸುತ್ತ ನಡೆದಿದ್ದ ಯಡ್ಡಿ, ಇಡೀ ಬಿಜೆಪಿ ಸಚಿವ ಸಂಪುಟ "ಗ್ರಾಮವಾಸ್ತವ್ಯ"ದ ಬದಲು ವಿನೂತನ ಮಾದರಿಯ "ಜೈಲುವಾಸ್ತವ್ಯ "ಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಈಗಾಗಲೇ ತಮ್ಮ ನಾಯಕನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿರುವ ಯಡ್ಡಿಯ ಕಟ್ಟಾಳು ಕಟ್ಟಾ ಸುಬ್ರಮಣ್ಯ ನಾಯ್ಡು ಜೊತೆಯಲ್ಲಿ ಉಭಯ ಕುಶಲೋಪರಿ ನಡೆಸಲು ಈ "ಯಾತ್ರೆ" ನಡೆಸಿದ್ದಾರೆಂದು ತಿಳಿದುಬಂದಿದೆ. ಇದಲ್ಲದೆ, ತಮ್ಮೊಂದಿಗೆ ತನ್ನ ಹಿಂಬಾಲಕರೂ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಅಲ್ಲ, ಆದೇಶ ನೀಡಿದ್ದಾರೆ. ಈ ಕುರಿತು ಸಧ್ಯದಲ್ಲೇ ನಮ್ಮ "ನಗಾಡುವಗೌಡ"ರು ಸಚಿವ ಸಂಪುಟದ ಸಭೆ ಕರೆದು ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ನಿಶ್ಚಯಿಸಿದ್ದಾರೆಂದು, "ನಾವೆಲ್ಲ ಒಮ್ಮೆಲೆ ಹೋಗುವ" ಎಂದು ಹೇಳಿದ್ದಾರೆಂದು "ಜೈಲುಭರೋ" ಪತ್ರಿಕೆ ಸುದ್ದಿ ನೀಡಿದೆ.

 

Rating
No votes yet

Comments