ವಿಶ್ವ ಕವಿಗೆ ಕವನದ ನಮನ‌

ವಿಶ್ವ ಕವಿಗೆ ಕವನದ ನಮನ‌

ಕವನ

ಕನ್ನಡದ ಜಗಕೆಲ್ಲ ತಮದ ಕತ್ತಲು ಕವಿದಿರಲು,


ಉದಯಿಸಿತೊಂದು ಉಷಾ-ಕಿರಣ ಶಿವಮೊಗ್ಗೆಯ ಕುಪ್ಪಳಿಯಲಿ,


ಯಾರ ಜನ್ಮದ ಪುಣ್ಯವೋ,ಯಾರ ತಪಸ್ಸಿನ ಫಲವೋ,


ಹುಟ್ಟಿ ಬೆಳೆದರು ತು೦ಗೆ ಭದ್ರೆಯರ ನಾಡಿನಲಿ.


 


ಗುರುವರ್ಯ ಆಲೂರು ವೆಂಕಟರಾಯರ ಸ್ಫೂರ್ತಿಯೋ,ಬಿ.ಎ.ಶ್ರೀ ಯವರ ಆಶೀರ್ವಾದವೋ,


ಉದ್ಧರಿಸಿದರು ಕನ್ನಡ ನಾಡು - ನುಡಿಯ ಗುಡಿಯನ್ನು.


ವಾಲ್ಮೀಕಿಯ ಅವತಾರವೋ,ಕನ್ನಡವನು ದಿಗಂತದಾಚೆ ವಿಸ್ತರಿಸುವ ಧೃಢ ಚಿತ್ತವೋ,


ಬರೆದರು "ಶ್ರೀ ರಾಮಾಯಣ ದರ್ಶನಂ" ಪಡೆದರು ಜ್ಞಾನಪೀಠ0

 


ಕನ್ನಡ ತಾಯಿಯ ಆಶೀರ್ವಾದವೋ,ಕನ್ನಡಿಗರಿಗಾದ ವರವೋ ,


ಸವೆಸಿದರು ತೊಂಬತ್ತು ವರ್ಷಗಳ ಕನ್ನಡ ನಾಡು ನುಡಿಯ ಸಾರ್ಥಕ ಸೇವೆಯಲಿ,


ಯಾರ ಅವಕೃಪೆಯೋ,ವಿಧಿಯ ಕ್ರೂರ ನಿಯಮವೋ,


ಕಥೆಯ ಮುಗಿಸಿತು ರಸ ಋಷಿಯ,ವಿಶ್ವ ಮಾನವನ.


 


ಕನ್ನಡ ನಾಡು ನುಡಿಯ ಸೇವೆಯಲಿ ಅನವರತ ಶ್ರಮಿಸಿ, ನಮ್ಮನ್ನೂ ಶ್ರಮಿಸಲು ತೊಡಗಿಸಿ


ಬಿಟ್ಟಗಲಿದರು ೧೦ ನೇ ನವೇಂಬರ ೧೯೯೪ ರಲಿ,


ಅವರ ಮಹಾನ್ ಚೇತನಕೆ,ಅವರ ಬಯಕೆಯಂತೆ ಅನಿಕೇತನವಾದ ಚೇತನಕೆ,


ಇದೋ ಕನ್ನಡಿಗರ ಅಶ್ರು ಪೂರಿತ ಶೃದ್ಧಾಂಜಲಿ


ಅವರ ಚಿಂತನದ ಸಿಂಚನ ಆಗಲಿ ನಮ್ಮ ಮೇಲೆ ಚಿರಂತನ.


Comments