ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2
ಇದು ಸುಮಾರು ೨೦ ವರ್ಷಗಳ ಹಿಂದಿನ ಘಟನೆ. ನಾನಾಗ ಹೊಳೆನರಸಿಪುರದಲ್ಲಿದ್ದೆ. ಒಂದು ಆರ್ಥಿಕ ಸಮೀಕ್ಷಾಕಾರ್ಯ ನಡೆಸಲು ಎಲ್ಲಾ ಇಲಾಖೆಗಳಿಂದ ಆಯ್ದ ಅಧಿಕಾರಿಗಳ ಮತ್ತು ನೌಕರರ ತರಬೇತಿ ಸಭೆ ಹಳೇಕೋಟೆಯ ಒಂದು ಕಾಲೇಜು ಸಭಾಂಗಣದಲ್ಲಿ ಆಯೋಜಿತವಾಗಿತ್ತು. ಹೊಳೆನರಸಿಪುರದ ವಿಶೇಷ ಭೂಸ್ವಾಧೀನಾಧಿಕಾರಿಯವರ ಕಛೇರಿಯ ರೆವಿನ್ಯೂ ಇನ್ಸ್ಪೆಕ್ಟರ್ ನನ್ನ ಬಳಿ ಬಂದು ತನ್ನ ಹತ್ತಿರದ ಬಂಧು ಒಬ್ಬರು ತೀವ್ರ ಅನಾರೋಗ್ಯದಿಂದಿದ್ದಾರೆಂದು ಹೇಳಿ ಅವರಿಗೆ ಚಿಕಿತ್ಸೆ ಕೊಡಿಸಿ ಬರುವುದಾಗಿಯೂ, ತಡವಾಗಿ ಬರುವುದಾಗಿಯೂ ಕೇಳಿಕೊಂಡರು. ಮಾನವೀಯತೆಯ ಕಾರಣದಿಂದ ಒಪ್ಪಿ ಆದಷ್ಟು ಬೇಗ ಬರಬೇಕೆಂದು ತಿಳಿಸಿದ್ದೆ. ಮಧ್ಯಾಹ್ನದ ವೇಳೆಗೆ ಆತ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತದ ಬಲೆಗೆ ಸಿಕ್ಕಿಬಿದ್ದ ಸುದ್ದಿ ಬಂತು. ನಿಜವಾಗಿ ನಡೆದದ್ದೇನೆಂದರೆ ಭೂಸ್ವಾಧೀನದ ಪರಿಹಾರದ ಚೆಕ್ ನೀಡಲು ಲಂಚ ಪಡೆಯುವ ಸಲುವಾಗಿ ಆತ ಬಂಧುವಿನ ಅನಾರೋಗ್ಯದ ಸುಳ್ಳು ಹೇಳಿದ್ದ. ಆತ ತರಬೇತಿಗೆ ಹಾಜರಾಗಿದ್ದಿದ್ದರೆ ಈ ಗತಿ ಬರುತ್ತಿರಲಿಲ್ಲ. ಸಾಯಂಕಾಲ ಹೊಳೆನರಸಿಪುರಕ್ಕೆ ನಾವು ಬರುವ ಸಮಯದಲ್ಲಿ ಲುಂಗಿ ಉಟ್ಟಿದ್ದ (ಪ್ಯಾಂಟನ್ನು ಜಪ್ತಿ ಮಾಡಿಕೊಂಡಿದ್ದರು) ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಕರೆದೊಯ್ಯಲಾಗುತ್ತಿತ್ತು. ತಲೆ ತಗ್ಗಿಸಿ ನಡೆಯುತ್ತಿದ್ದ ಆತನನ್ನು ಕಂಡು ಅಯ್ಯೋ ಅನ್ನಿಸಿತು.
- Log in to post comments
Comments
ಉ: ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2
In reply to ಉ: ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2 by partha1059
ಉ: ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2
In reply to ಉ: ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2 by partha1059
ಉ: ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2
In reply to ಉ: ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2 by partha1059
ಉ: ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2