ಕಥೆ : ವಿಧಿಯಾಟ.
ಸಿದ್ಲಿಂಗು ಮನೆ ಮುಂದೆ ಚಪ್ಪರ ಇದೆ...ಚಪ್ಪರಕ್ಕೆ ಹಾರ ಹಾಕಿದ್ದಾರೆ ...
ಬೆಳಿಗ್ಗೆ ಕಟ್ಟಿದ್ದ ಬಾಳೆಕಂಬಗಳು ಸ ೊರಗಿ ಹೋಗಿವೆ..
ಅಳಿದುಳಿದ ಎಲೆಗಳನ್ನು ಹಸುಗಳು ತಿನ್ ನುತ್ತಿವೆ...
ಮನೆಯ ಮುಂದೆ ಜನ ಜಮಾಯಿಸಿದ್ದರೂ ಯಾ ರಿಗೂ ಹಸುವನ್ನು ಓಡಿಸುವ ಮನಸ್ಸಿರಲಿ ಲ್ಲ.
ಮನೆಯ ಒಳಗೆ ಸಿದ್ಲಿಂಗು ಹೆಣವಾಗಿ ಮ ಲಗಿದ್ದಾನೆ.
ಪಕ್ಕದಲ್ಲಿದ್ದ ಅವನ ತಾಯಿ ಹಾಗೂ ತಂ ಗಿ ಎದೆ ಬಡಿದುಕೊಂಡು ಅಳುತ್ತಿದ್ದಾ ರೆ..
ಸಿದ್ಲಿಂಗು ತಾಯಿ ಅಳುತ್ತಾ ಬೇಡ ಬೇಡ ಅಂತಾ ಬಡ್ಕೊಂಡೆ ಕೇಳಲಿಲ್ಲ...ಈ ಗ ಹೀಗೆ ಮಾತಾಡದೆ ಮಲಗಿದ್ದಾನೆ ನಾನು ಏನು ಮಾಡಲಿ. ಏಳೋ ಮಗಾ ನಾಳೆ ನಿನ್ನ ತಂಗಿ ಮದ್ವೆ ಕಣೋ ಏಳೋ ಮಗಾ ಏಳೋ....ಎಂದು ಗೋಳಿಡುತ್ತಿದ್ದಾಳೆ.
ಕಾಲದ ಹಿಂದಕ್ಕೆ ಸರಿದರೆ ಅಂದು ಬೆಳಿಗ್ಗೆ.
ಅವ್ವ ಬೇಗ ಉಣ್ಣಕ್ಕೆ ಕೊಡವ್ವ. ಬಸ್ ಬಂದ್ಬುಡತ್ತೆ ಹೊತ್ತಾಯ್ತದೆ ಎಂದು ಸಿದ್ಲಿಂಗು ದೇವರಿಗೆ ನಮಸ್ಕಾರ ಹಾಕುತ್ತ ಕೂಗುತ್ತಿದ್ದಾನೆ. ಒಳಗಿದ್ದ ಸಿದ್ಲಿಂಗು ಅಮ್ಮ ಅಲ್ಲ ಮಗಾ ಇವತ್ತು ಕೆಲ್ಸಕ್ಕೆ ಹೋಗಬೇಕಾ. ನಾಳೆ ಹೊತ್ತಾರೆ ತಂಗಿ ಮದ್ವೆ ಮಡಿಕ್ಕೊಂಡು ಕೆಲ್ಸಕ್ಕೆ ಓತೀಯ. ಮನೆಗೆ ನೆಂಟ್ರು ಎಲ್ಲ ಬತ್ತಾರೆ. ನನಗೆ ಒಬ್ಳಿಗೆ ಎಲ್ಲ ಸುಧಾರಿಸಕ್ಕೆ ಆಗಕ್ಕಿಲ್ಲ ಮಗಾ. ಒಂದೆರಡು ದಿನ ರಜ ಕೇಳು ನಿಮ್ಮ ಯಜಮಾನರ ಹತ್ತಿರ ಅಂತ ಹೇಳಿದ್ನಲ್ಲ ಕೇಳಿಲ್ವಾ. ಅದೂ ಅಲ್ದೆ ಮಧ್ಯಾಹ್ನ ಅಯ್ನೋರು ಬತ್ತಾರೆ ಅವ್ರಿಗೆ ಏನೇನು ಬೇಕೋ ನೋಡ್ಬೇಕು. ಸಂತೆ ಕಡೆ ಆಗಿ ಸಾಮಾನ್ ಎಲ್ಲ ತರೋದೈತೆ ಮಗಾ ನೀನು ಒಂಟೋದ್ರೆ ಎಂಗ್ಲಾ ಎಂದು ಒಂದೇ ಸಮನೆ ಕೂಗುತ್ತಿದ್ದಳು. ಸಿದ್ಲಿಂಗು ದೇವರಿಗೆ ಕೈ ಮುಗಿದು ಆಚೆ ಬಂದು ಪ್ಯಾಂಟ್ ಹಾಕಿಕೊಳ್ಳುತ್ತಾ ಅಲ್ಲವ್ವೋ ನಾನೇನು ಊರು ಬುಟ್ಟು ಒಯ್ತಿದೀನ, ಮಧ್ಯಾಹ್ನ ಅಷ್ಟೊತ್ತಿಗೆ ಬತ್ತೀನಿ. ನಮ್ ಯಜಮಾನ್ರು ನಮ್ ರೂಪ ಮದ್ವೆಗೆ ಒಸಿ ಕಾಸು ಕೊಡ್ತೀನಿ ಅಂತ ಹೇಳವ್ರೆ ಅದನ್ನ ಇಸ್ಕೊಂಡು ಬಂದ್ ಬುಡ್ತೀನಿ ಅಟೆಯ..ಸರಿ ಸರಿ ಬೇಗ ಮುದ್ದೆ ಕೊಡು ಬಸ್ ಬಂದ್ ಬುಡ್ತದೆ ಎಂದು ಅವಸರ ಮಾಡುತ್ತಿದ್ದ. ಒಳಗಿಂದ ಬಿಸಿಬಿಸಿ ಮುದ್ದೆ ಬಸ್ಸಾರು ತಗೊಂಡು ಬಂದ ಅಮ್ಮನ ಕೈಯಲ್ಲಿ ತಟ್ಟೆ ತೆಗೆದುಕೊಂಡು ತಿನ್ನತೊಡಗಿದ ಸಿದ್ಲಿಂಗು ಅಷ್ಟರಲ್ಲಿ ಬಸ್ಸಿನ ಹಾರನ್ ಕೇಳಿಸ್ತು. ಅವ್ವ ಬಸ್ ಬಂತು ನಾನು ಒಯ್ತೀನಿ ಎಂದು ಅರ್ಧಕ್ಕೆ ಬಿಟ್ಟು ಹೊರಟ. ಅವರಮ್ಮ ಇದೇನ್ಲಾ ಅರ್ಧಕ್ಕೆ ಬುಟ್ಟೆ ಪೂರ್ತಿ ತಿಂದು ಹೋಗಬಾರದ ಎಂದು ಅವನ ಹಿಂದೆಯೇ ಕೂಗಿಕೊಂಡು ಬಂದಳು. ಅಷ್ಟರಲ್ಲಿ ಸಿದ್ಲಿಂಗು ಮುಂದೆ ಬೆಕ್ಕೊಂದು ಹಾಡು ಹೋಯ್ತು. ಅವರಮ್ಮ ಲೇ ಮಗಾ ಬೆಕ್ಕು ಅಡ್ಡ ಹೋಯ್ತು ಒಸಿ ಕೂತ್ಕೊಂಡು ಹೋಗ್ಲಾ ಎಂದು ಕೂಗುತ್ತಿದ್ದರು ಅವ್ವೋ ಅದಕ್ಕೆಲ್ಲ ಟೆಮಿಲ್ಲ ಎಂದು ಓಡಿ ಹೋಗಿ ಬಸ್ ಹತ್ತಿ ರೈಟ್ ರೈಟ್ ಎಂದ..
ಸ್ವಲ್ಪ ಹಿನ್ನಲೆ.
ಸಿದ್ಲಿಂಗು ಕುಟುಂಬ ಟಿ.ನರಸಿಪುರದ ಹತ್ತಿರ ಒಂದು ಹಳ್ಳಿಯಲ್ಲಿ ವಾಸವಾಗಿದ್ದರು. ಸಿದ್ಲಿಂಗು ತಂದೆ ಸಿದ್ಲಿಂಗು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಹಾವು ಕಡಿದು ಸತ್ತು ಹೋಗಿದ್ದ. ಸಿದ್ಲಿಂಗು ತಾಯಿ ಬಹಳ ಕಷ್ಟಪಟ್ಟು ಸಿದ್ಲಿಂಗು ಹಾಗು ರೂಪಳನ್ನು ಸಾಕಿದ್ದರು. ಕಷ್ಟದ ನಡುವೆ ಮಕ್ಕಳನ್ನು ಹೆಚ್ಚು ಓದಿಸಲಾಗದೆ ಅರ್ಧಕ್ಕೆ ಶಾಲೆ ಬಿಡಿಸಿದ್ದಳು. ಸಿದ್ಲಿಂಗು ಬೆಳೆದು ದೊಡ್ಡವನಾದ ಹಾಗೆ ತಾಯಿಯ ಕಷ್ಟ ಅರಿತು ಅದೇ ಹಳ್ಳಿಗೆ ಇದ್ದ ಒಂದೇ ಒಂದು ಬಸ್ "ಮಾದೇಶ್ವರ" ದಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ್ದ. ಬೆಳಿಗ್ಗೆ ಮುದ್ದೆ ಉಂಡು ಮನೆ ಬಿಡುತ್ತಿದ್ದ ಸಿದ್ಲಿಂಗು ಟಿ.ನರಸಿಪುರ - ಮೈಸೂರು ನಡುವೆ ಓಡುತ್ತಿದ್ದ ಬಸ್ಸಿನ ಖಾಯಂ ಕ್ಲೀನರ್ ಆಗಿದ್ದ. ರಾತ್ರಿ ಕೊನೆಯ ಟ್ರಿಪ್ ಮುಗಿಸಿ ಮನೆಗೆ ಬಂದು ಉಂಡು ಮಲಗುತ್ತಿದ್ದ. ಮನೆ ಬಿಟ್ಟರೆ ತನ್ನ ಬಸ್ ತನಗೆ ಎರಡನೇ ಮನೆ ಆಗಿಬಿಟ್ಟಿತ್ತು. ತನ್ನ ನಿಯತ್ತಿನಿಂದ ಬಸ್ ಮಾಲಿಕನ ಹತ್ತಿರ ಒಳ್ಳೆಯ ಹೆಸರು ಸಂಪಾದಿಸಿದ್ದ. ಮೊದಲು ತಿಂಗಳಿಗೆ ೮೦೦ ರೂನಂತೆ ಕೆಲಸಕ್ಕೆ ಸೇರಿದ್ದ ಸಿದ್ಲಿಂಗು ಈಗ ೨೦೦೦ ಸಾವಿರ ಸಂಬಳ ಬರುತ್ತಿತ್ತು. ಬರುತ್ತಿದ್ದ ಸಂಬಳದಲ್ಲೇ ಅಲ್ಪ ಸ್ವಲ್ಪ ತನ್ನ ತಂಗಿ ರೂಪ ಮದುವೆಗೆಂದು ಕೂಡಿಡುತ್ತಿದ್ದ. ರೂಪ ಗೆ ಹದಿನೆಂಟು ತುಂಬಿ ಹತ್ತೊಂಭತ್ತು ಬಿದ್ದಿತ್ತು. ಸಿದ್ಲಿಂಗು ತಾಯಿ ಮಗನನ್ನು ಕೂಡಿಸಿಕೊಂಡು ನೋಡ್ಲಾ ಮಗ ನಮ್ ರೂಪಾನ ಕೇಳ್ಕೊಂಡು ಪಕ್ಕದ ಹಳ್ಳಿ ರಾಜಪ್ಪ ಬಂದಿದ್ರು. ಅವರ ಮಗನಿಗೆ ರೂಪಾನ ಕೇಳವ್ರೆ. ರೂಪನು ಒಪ್ಕಂದವ್ಲೇ. ಮುಂದಿನ ತಿಂಗಳೇ ಮದುವೆ ಮಾಡಿಬಿಡೋಣ ಮಗ. ರಾಜಪ್ಪನೆ ಹೇಳವ್ರೆ ಮದುವೆ ಖರ್ಚಿನ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ಎಲ್ಲ ಖರ್ಚು ನಮ್ದೆ ಎಂದು. ಆದರೂ ನಮ್ಮ ಖರ್ಚು ಅಂತ ಇರತ್ತಲ್ಲ ಮಗ. ಅದಿಕ್ಕೆ ಗೌಡ್ರ ಹತ್ರ ಒಸಿ ಸಾಲ ತಗೊಳೋಣ ಅಂತ ಇದ್ದೀನಿ ಎಂದಳು. ಅದಕ್ಕೆ ಸಿದ್ಲಿಂಗು ಅವ್ವ ನಾನು ಕೂಡ ನಮ್ ಯಜಮಾನ್ರ ಹತ್ರ ಒಸಿ ದುಡ್ಡು ಕೇಳ್ತೀನಿ ಎಂದ. ನೋಡ್ತಾ ನೋಡ್ತಾ ಒಂದು ತಿಂಗಳು ಕಳೆದು ಹೋಯ್ತು. ಮದುವೆಯ ದಿನ ಹತ್ತಿರ ಬಂದೆ ಬಿಡ್ತು.
ವಾಸ್ತವ
ಸೀದಾ ಬಸ್ ಏರಿ ರೈಟ್ ರೈಟ್ ಎಂದ ಸಿದ್ಲಿಂಗು ನೇರ ಡ್ರೈವರ್ ಹತ್ತಿರ ಹೋಗಿ ಅಣ್ಣ ನಾಳೆ ನನ್ನ ತಂಗಿ ಮದ್ವೆ ಐತಣ್ಣ ತಪ್ಪದೆ ಬರಬೇಕು. ಅಂಗೆ ಒಂದ್ ವಿಸ್ಯ ಕಣಣ್ಣ. ನಾನು ಇವತ್ತು ಡ್ಯೂಟಿ ಮಾಡಕ್ಕಿಲ್ಲ. ಆಫೀಸ್ ತವ ಹೋಗಿ ಯಜಮಾನ್ರ ಹತ್ರ ಒಸಿ ದುಡ್ಡು ಇಸ್ಕೊಂಡು ವಾಪಸ್ ಒಂಟೋಯ್ತೀನಿ ಕಣಣ್ಣ ಎಂದ. ಡ್ರೈವರ್ ಕೂಡ ಹೋಗಿ ಬಾ ಸಿದ್ಲಿಂಗು ಈ ಕೆಲಸ ದಿನ ಇದ್ದಿದ್ದೆಯ. ಎಂದು ನೇರ ಬಸ್ ಆಫೀಸ್ ಹತ್ರ ಬಂತು. ಸಿದ್ಲಿಂಗು ಬಸ್ ಇಳಿದು ನೇರ ಯಜಮಾನ್ರ ರೂಮಿನ ಹತ್ತಿರ ಬಂದ. ಅಲ್ಲಿ ಯಜಮಾನ್ರು ಇನ್ನು ಬಂದಿರಲಿಲ್ಲ. ಅದನ್ನು ನೋಡಿ ಆಫೀಸ್ ಒಳಗೆ ಹೋಗಿ ಯಜಮಾನ್ರ ಮೊಬೈಲ್ ಗೆ ಒಂದು ಕರೆ ಮಾಡಿದ. ಯಜಮಾನ್ರೆ ಅದೇ ನಾಳೆ ನನ್ ತಂಗಿ ಮದ್ವೆ ಐತಲ್ಲ. ಅದಕ್ಕೆ ನಿಮ್ ತವ ದುಡ್ಡು ಇಸ್ಕೊಳೋಣ ಅಂತ ಆಫೀಸ್ ತವ ಬಂದಿವ್ನಿ ಎಂದ. ಅದಕ್ಕೆ ಯಜಮಾನರು "ಸಿದ್ಲಿಂಗು ಇವತ್ತು ನಾನು ಆಫೀಸ್ ತವ ಬರೋದು ಒಸಿ ಲೇಟ್ ಆಯ್ತದೆ. ನೀನು ಒಂದ್ ಕೆಲಸ ಮಾಡು ಒಂದು ರೌಂಡ್ ರೂಟ್ ಮುಗಿಸಿಕೊಂಡು ಬಾ ಅಷ್ಟರಲ್ಲಿ ನಾನು ಬರ್ತೀನಿ ಬಂದು ದುಡ್ಡು ಕೊಡ್ತೀನಿ. ಹಾ ಅಂದ ಹಾಗೆ ಇವತ್ತು ಹೊಸ ಡ್ರೈವರ್ ಒಬ್ಬ ಬಂದವನೇ ಅವನನ್ನು ಕರ್ಕೊಂಡು ಹೋಗು ಇವತ್ತು ರೂಟ್ ಗೆ ಎಂದು ಫೋನ್ ಇಟ್ಟ. ಸರಿ ಹೊಸ ಡ್ರೈವರ್ ನ ಕರ್ಕೊಂಡು ರೂಟ್ ಗೆ ಹೊರಟ ಸಿದ್ಲಿಂಗು.
ಬಸ್ ಮೈಸೂರಿನಿಂದ ಹೊರಟು ಸಣ್ಣ ಸಣ್ಣ ಹಳ್ಳಿಗಳೆಲ್ಲ ಮುಗಿಸಿಕೊಂಡು ಟಿ. ನರಸಿಪುರಕ್ಕೆ ಬಂತು. ಅಲ್ಲಿ ಸಂತೆ ನಡೆಯುತ್ತಿತ್ತು. ಸಿದ್ಲಿಂಗು ತನ್ನ ಮೆಚ್ಚಿನ ತಂಗಿಗಾಗಿ ಒಂದಷ್ಟು ಬಳೆಗಳು ಮತ್ತು ಹೂವನ್ನು ತೆಗೆದುಕೊಂಡು ಬರುವಷ್ಟರಲ್ಲಿ ಮತ್ತೆ ಬಸ್ ಮೈಸೂರಿಗೆ ಹೊರಡಲು ಸಿದ್ಧವಾಗಿತ್ತು. ಟಿ. ನರಸಿಪುರದಿಂದ ಹೊರಟ ಬಸ್ಸು ಸ್ವಲ್ಪ ದೂರ ಬಂದು ಹೈವೇಯಲ್ಲಿ ಒಂದು ಹಳ್ಳಿಗೆ ಹೋಗುವ ಕಡೆ ನಿಲುಗಡೆ ಕೊಟ್ಟಿತು. ಅಲ್ಲಿ ಕೆಲವರು ಇಳಿಯುವವರಿದ್ದರು. ಅ ವರು ಕೆಳಗಿಳಿದು ಸಿದ್ಲಿಂಗು ನ ಕುರಿತು ನೋಡಪ್ಪ ಮೇಲ್ಗಡೆ ಸ್ವಲ್ಪ ಲಗೇಜ್ ಇದೆ ಇಳಿಸುತ್ತೀಯ ಎಂದು ಕೇಳಿದರು. ಇದೆಲ್ಲ ಸಿದ್ಲಿಂಗು ಗೆ ಮಾಮೂಲಿ. ಸರಿ ಎಂದು ಮೇಲೆ ಹತ್ತಿ ಲಗೇಜ್ ಕೆಳಗೆ ಹಾಕಿದ. ಲಗೇಜ್ ಕೆಳಗೆ ಹಾಕಿ ಸಿದ್ಲಿಂಗು ಇನ್ನು ಕೆಳಗೆ ಇಳಿದಿರಲಿಲ್ಲ. ಆಗಲೇ ಡ್ರೈವರ್ ಬಸ್ ಹೊರಡಿಸಿಬಿಟ್ಟ. ಡ್ರೈವರ್ ಹೊಸಬನಾದ್ದರಿಂದ ಅಷ್ಟು ಗಮನ ಕೊಟ್ಟಿರಲಿಲ್ಲ. ಸರಿ ಬಸ್ ಹೈವೇ ಯಲ್ಲಿ ೬೦-೭೦ ವೇಗದಲ್ಲಿ ಹೋಗುತ್ತಿದೆ. ಸಿದ್ಲಿಂಗು ಗೆ ಹಲವು ಬಾರಿ ಇಂಥಹ ಅನುಭವ ಆಗಿದೆ. ಮಾಮೂಲಿನಂತೆ ಬಸ್ ಚಲಿಸುತ್ತಿರುವಾಗಲೇ ಮೇಲಿನಿಂದ ಕಿಟಕಿಯ ಪಕ್ಕದಲ್ಲಿ ಬಂದಿರುವ ಏಣಿ ಹಿಡಿದು ಒಳಗೆ ಬರುವ ಅಭ್ಯಾಸ ಇದ್ದ ಸಿದ್ಲಿಂಗು ಏಣಿಯ ಮೇಲೆ ಕಾಲಿಟ್ಟು ಒಳಗೆ ಬರಲು ಪ್ರಯತ್ನಿಸುತ್ತಿದ್ದ. ಹಿಂದಿನ ಸೀಟುಗಳಲ್ಲಿ ಯಾರೂ ಕುಳಿತಿರಲಿಲ್ಲ. ಮುಂದೆ ಕುಳಿತಿದ್ದವರು ಇದನ್ನು ಗಮನಿಸಿರಲಿಲ್ಲ. ಇದ್ದಕ್ಕಿದ್ದಂತೆ ಬಸ್ಸಿನಲ್ಲಿದ್ದವರೆಲ್ಲ ಕೂಗಿಕೊಂಡರು. ಓ ಡ್ರೈವರಪ್ಪ ಏನೋ ಕಬ್ಬಿಣ ಬಿತ್ತು ಅನ್ಸತ್ತೆ ಬಸ್ಸು ನಿಲ್ಸು ಎಂದರು. ಸ್ವಲ್ಪ ದೂರ ಬಂದು ಬಸ್ ನಿಲ್ಲಿಸಿದ ಡ್ರೈವರ್ ಕೆಳಗಿಳಿದು ಬಂದು ನೋಡಿದರೆ ರಸ್ತೆಯ ಮಧ್ಯದಲ್ಲಿ ಸಿದ್ಲಿಂಗು ಬಿದ್ದಿದ್ದಾನೆ. ಕಿವಿ ಮೂಗಿನಲ್ಲಿ ಬಾಯಿಯಲ್ಲಿ ರಕ್ತ ಸುರಿಯುತ್ತಿದೆ. ತಲೆ ಒಡೆದು ರಕ್ತ ಹರಿಯುತ್ತಿದೆ. ಉಸಿರಾಡಲು ಬಹಳ ಕಷ್ಟ ಪಡುತ್ತಿದ್ದಾನೆ. ಸುತ್ತಲೂ ನಿಂತಿರುವ ಜನಕ್ಕೆ ಏನು ಮಾಡಬೇಕೋ ತೋಚುತ್ತಿಲ್ಲ. ಎಲ್ಲರೂ ಡ್ರೈವರ್ ಗೆ ಹೇಳಿದರು ನೋಡಪ್ಪ ಮೊದಲು ಗಾಡಿಲಿ ಹಾಕ್ಕೋ ಹತ್ತಿರ ಇರುವ ಯಾವುದಾದರೂ ಆಸ್ಪತ್ರೆ ಬಳಿ ನಡಿ ಎಂದರು. ಅಷ್ಟರಲ್ಲಿ ಸಿದ್ಲಿಂಗು ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಜೇಬಿನಲ್ಲಿ ಇಟ್ಟುಕೊಂಡಿದ್ದ ಬಲೆ ಎಲ್ಲ ಚೂರು ಚೂರಾಗಿ ಕೆಳಗೆ ಬಿದ್ದಿತ್ತು.
ಐದು ನಿಮಿಷದ ಹಿಂದೆ.
ಏಣಿಯ ಮೇಲೆ ಕಾಲಿಟ್ಟು ಕಿಟಕಿಯ ಮೂಲಕ ಒಳಗೆ ಬರಲು ಪ್ರಯತ್ನಿಸುತ್ತಿದ್ದ ಸಿದ್ಲಿಂಗು ಒಂದು ಕಾಲನ್ನು ಒಳಗೆ ಇಟ್ಟಿದ್ದ. ಇನ್ನೊಂದು ಕಾಲನ್ನು ಒಳಗೆ ಇಡುವಷ್ಟರಲ್ಲಿ ಕಣ್ಣಿಗೆ ಧೂಳು ಬಿದ್ದಂತಾಗಿ ಒರೆಸಿಕೊಳ್ಳಲು ತಲೆ ಎತ್ತಿದ. ಅಷ್ಟೇ ರಸ್ತೆಯ ಪಕ್ಕದಲ್ಲಿದ ಮರದ ಬೃಹತ್ ಕೊಂಬೆಯೊಂದು ರಸ್ತೆಯ ಮೇಲಕ್ಕೆ ಹಾದು ಹೋಗಿತ್ತು. ಅದನ್ನು ಗಮನಿಸದ ಸಿದ್ಲಿಂಗು ತಲೆ ಕ್ಷಣಮಾತ್ರದಲ್ಲಿ ಅದಕ್ಕೆ ಬಡಿದು ಬಿಟ್ಟಿತ್ತು.
(ಈ ಮೇಲಿನ ಕಥೆಯಲ್ಲಿ ನಡೆದ ಅಪಘಾತ ದೃಶ್ಯ ಸುಮಾರು ಹತ್ತು ಹದಿನೈದು ವರುಷಗಳ ಹಿಂದೆ ನನ್ನ ಕಣ್ಣೆದುರು ಯಥಾ ಸ್ಥಿತಿಯಲ್ಲಿ ನಡೆದಿತ್ತು. ಅದಕ್ಕೆ ಒಂದು ರೂಪ ಕೊಟ್ಟು ಕಥೆಯನ್ನಾಗಿ ಮಾಡಿದ್ದೇನೆ.)
Rating
Comments
ಉ: ಕಥೆ : ವಿಧಿಯಾಟ.
In reply to ಉ: ಕಥೆ : ವಿಧಿಯಾಟ. by prasannakulkarni
ಉ: ಕಥೆ : ವಿಧಿಯಾಟ.
ಉ: ಕಥೆ : ವಿಧಿಯಾಟ.
In reply to ಉ: ಕಥೆ : ವಿಧಿಯಾಟ. by bhalle
ಉ: ಕಥೆ : ವಿಧಿಯಾಟ.
ಉ: ಕಥೆ : ವಿಧಿಯಾಟ.
In reply to ಉ: ಕಥೆ : ವಿಧಿಯಾಟ. by kavinagaraj
ಉ: ಕಥೆ : ವಿಧಿಯಾಟ.
ಉ: ಕಥೆ : ವಿಧಿಯಾಟ.
In reply to ಉ: ಕಥೆ : ವಿಧಿಯಾಟ. by sathishnasa
ಉ: ಕಥೆ : ವಿಧಿಯಾಟ.
In reply to ಉ: ಕಥೆ : ವಿಧಿಯಾಟ. by sathishnasa
ಉ: ಕಥೆ : ವಿಧಿಯಾಟ.
ಉ: ಕಥೆ : ವಿಧಿಯಾಟ.
In reply to ಉ: ಕಥೆ : ವಿಧಿಯಾಟ. by makara
ಉ: ಕಥೆ : ವಿಧಿಯಾಟ.
ಉ: ಕಥೆ : ವಿಧಿಯಾಟ.
In reply to ಉ: ಕಥೆ : ವಿಧಿಯಾಟ. by venkatb83
ಉ: ಕಥೆ : ವಿಧಿಯಾಟ.
In reply to ಉ: ಕಥೆ : ವಿಧಿಯಾಟ. by venkatb83
ಉ: ಕಥೆ : ವಿಧಿಯಾಟ.
ಉ: ಕಥೆ : ವಿಧಿಯಾಟ.
ಉ: ಕಥೆ : ವಿಧಿಯಾಟ.