ಕಾದಂಬರಿ ಸ್ಪರ್ಧೆ

ಕಾದಂಬರಿ ಸ್ಪರ್ಧೆ

ಮೈಸೂರಿನ ಪುಸ್ತಕಯಾನ ಪ್ರಕಾಶನ ಸಂಸ್ಥೆಯು ತನ್ನ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದೆ.  ಆಸಕ್ತ ಕಾರಂಬರಿಕಾರರು ತಮ್ಮ ಕಾದಂಬರಿಗಳ ಹಸ್ತಪ್ರತಿಗಳನ್ನು ಸ್ಪರ್ಧೆಗೆ ಕಳುಹಿಸಿಕೊಡಬಹುದು.  ಬಹುಮಾನದ ಮೊತ್ತ ಐದು ಸಾವಿರ ರೂಪಾಯಿಗಳು.  ಬಹುಮಾನಿತ ಕೃತಿಯನ್ನು ಪುಸ್ತಕಯಾನವು ಪ್ರಕಟಿಸಿ ೨೦೧೨ರ ಯುಗಾದಿಯ ಸಮಯಕ್ಕೆ ಮೈಸೂರಿನಲ್ಲಿ ಲೋಕಾರ್ಪಣೆಗೊಳಿಸುತ್ತದೆ.

ಸ್ಪರ್ಧೆಯ ನಿಯಮಗಳು:

o ಆಸಕ್ತಿಯುಳ್ಳ ಯಾವ ಕಾದಂಬರಿಕಾರರಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.  ವಯಸ್ಸಿನ ಮಿತಿ ಇರುವುದಿಲ್ಲ.

o ಇದುವರೆಗೆ ಎಲ್ಲಿಯೂ ಯಾವ ಪ್ರಕಾರದಲ್ಲಿಯೂ ಪ್ರಕಟವಾಗಿಲ್ಲದ ಕಾದಂಬರಿಗಳು ಮಾತ್ರ ಸ್ಪರ್ಧೆಗೆ ಅರ್ಹ,

o ಕಾದಂಬರಿ ಅಚ್ಚಿನಲ್ಲಿ ನೂರು - ನೂರಿಪ್ಪತ್ತು ಪುಟಗಳ ಮಿತಿಯಲ್ಲಿರಬೇಕು.

o ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ ಮೇಲ್ ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಹಸ್ತಪ್ರತಿಯೊಂದಿಗೆ ಲಗತ್ತಿಸಿರಬೇಕು.

o ಹಸ್ತಪ್ರತಿಗಳನ್ನು ಹಿಂತಿರುಗಿಸಲಾಗುವುದಿಲ್ಲ.  ಹೀಗಾಗಿ ಲೇಖಕರು ತಮ್ಮ ಕೃತಿಯ ಒಂದು ಪ್ರತಿಯನ್ನು ತಮ್ಮಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

o ಸ್ಪರ್ಧೆಯ ಫಲಿತಾಂಶವನ್ನು 2012ರ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಹಾಗೂ ಬಹುಮಾನಿತ ಕಾದಂಬರಿಕಾರರಿಗೆ ವೈಯುಕ್ತಿಕವಾಗಿ ಪತ್ರಮುಖೇನ ತಿಳಿಸಲಾಗುವುದು.


o ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿಯೂ ಪ್ರಕಾಶಕರ ತೀರ್ಮಾನವೇ ಅಂತಿಮ.

ಹಸ್ತಪ್ರತಿಗಳನ್ನು ಸ್ವೀಕರಿಸುವ ಕೊನೆಯ ದಿನ- ಡಿಸೆಂಬರ್ 31, 2011.

ಸ್ಪರ್ಧೆಯ ಬಗ್ಗೆ ಇನ್ನೂ ಹೆಚ್ಚಿನ ವಿವರಗಳು ಅಗತ್ಯವಿದ್ದಲ್ಲಿ ಸಂಪರ್ಕಿಸಿ: ಮೊಬೈಲ್-  9242340388, ಇ-ಮೇಲ್- pusthakayaana@gmail.com

ಹಸ್ತಪ್ರತಿಗಳನ್ನು ಕಳುಹಿಸಬೇಕಾದ ವಿಳಾಸ:

ಶ್ರೀ ಎಂ. ದೊರೆರಾಜು

ಪುಸ್ತಕಯಾನ

೬೫೪, ಕೂಗುಬಂಡೆ ರಸ್ತೆ,

ಕುವೆಂಪುನಗರ, ಮೈಸೂರು -  570 023

ಕರ್ನಾಟಕ

Comments