ಶ್ರೀಗಂಧದ ಧೂಪ - ( ಅರುಣ )
ಮೊದಲ ಬಾಗ ಶ್ರೀಗಂಧದ ಧೂಪ - ( ದತ್ತ)
ಡ್ರೈವರನ್ನು ಬರಬೇಡವೆಂದು ತಿಳಿಸಿ ತಾನೆ ಕಾರನ್ನು ಡ್ರೈವ್ ಮಾಡುತ್ತ ಹೊರಟು, ತುಮಕೂರು ತಲಪುವಾಗ ಒಂಬತ್ತು ಗಂಟೆಯ ಆಸುಪಾಸು. ಈಗ ರಸ್ತೆ ಮೊದಲಿನಂತಿಲ್ಲ ಎಲ್ಲವು ಬದಲಾಗಿದೆ ಎನ್ನುಕೊಳ್ಳುತ್ತ, ಊರು ಪ್ರವೇಶಿಸುವಾಗಲೆ ನೆನಪಿಗೆ ಬಂದಿತು, ಕಾಲೇಜು ದೂರವೇನಿಲ್ಲ, ಇದೆ ಮುಖ್ಯರಸ್ತೆಯ ಬಲಬದಿಯಲ್ಲಿ, ಮೊದಲು ಸರ್ಕಾರಿ ಪಾಲಿಟೆಕ್ನಿಕ್ ನಂತರ ತಾನು ಓದಿದ ಸೈನ್ಸ್ ಕಾಲೇಜು. ಕಾಲೇಜಿನ ಹತ್ತಿರ ಬಂದು ಗೇಟಿನ ಹತ್ತಿರ ತಿರುಗಿಸುವಾಗಲೆ ಮುಖ್ಯದ್ವಾರಕ್ಕೆ ಮಾಡಿದ್ದ ಅಲಂಕಾರಗಳು, ಕಟ್ಟಿದ್ದ ಸ್ವಾಗತದ ಬ್ಯಾನರುಗಳು ಎಲ್ಲ ಕಾಣಿಸಿದವು. ಇರುವುದು ಪೋಲಿಸ್ ಇಲಾಖೆಯಾದರು ಅವನ ಹೃದಯದಲ್ಲಿ ಎಂತದೊ ಸಣ್ಣ ಕಂಪನ ಎನಿಸಿತು. ಇಷ್ಟು ವರ್ಷಗಳ ನಂತರ ತಾನು ಓದಿದ ಕಾಲೇಜಿನೊಳಗೆ ಪ್ರವೇಶಿಸುತ್ತಿರುವೆ.....
... ನಿಂತಿರುವ ಕೆಲವು ವಿದ್ಯಾರ್ಥಿ ಸ್ವಯಂ ಸೇವಕರು ಕಾರನ್ನು ನಿಲ್ಲಿಸಬೇಕಾದ ಜಾಗದತ್ತ ಕೈಮಾಡಿದರು. ದತ್ತ ಬಂದಿದ್ದನ್ನು ಗಮನಿಸಿದ ಪ್ರಿನ್ಸಿಪಾಲ್ ನಗುತ್ತ ಕಾರಿನತ್ತಲೆ ನಡೆದು ಬಂದಾಗ ಇವನಿಗೆ ಸಂಕೋಚವೆನಿಸಿತು. ಇವರು ಎಷ್ಟಾದರು ತನ್ನ ಗುರುಗಳು ಎಂಬ ಭಾವ ತುಂಬಿ ಕಣ್ಣು ತುಂಬಿತು. ತಾನು ಅವರತ್ತ ನಡೆದ. ಅವರು ಇವನ ಕೈಕುಲುಕಿ ಸ್ವಾಗತಿಸಿದರು. ಅವರ ಜೊತೆಯಿದ್ದ ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘದ ಸದಸ್ಯರು ಇವನಿಗೆ ಕರಲಾಘವ ಇತ್ತು, ಕರೆದೋಯ್ದು ಬೇಡವೆಂದರು ಕೇಳದೆ ಬಲವಂತ ಮಾಡಿ ಉಪಹಾರ ಮಾಡಿಸಿದರು. ನಂತರ ಇವನು ಕಾರ್ಯಕ್ರಮ ನಡೆಯಬೇಕಾಗಿದ್ದ ಜಾಗದತ್ತ ಬಂದು ಅಲ್ಲಿ ಡಯಾಸ್ ಎದುರಿಗೆ ಹಾಕಿದ್ದ ಕುರ್ಚಿಗಳತ್ತ ನಡೆದ. ಅಲ್ಲಿ ನೋಡುವಾಗ ಅನೇಕ ಪರಿಚಯದ ಮುಖಗಳು ಕಾಣಿಸಿ ಎಲ್ಲರತ್ತ ಕೈಬೀಸುತ್ತ ಹೋಗಿ ಕುಳಿತ. ಕಾರ್ಯಕ್ರಮದ ಉದ್ಘಾಟನೆಗೆ ತುಮಕೂರಿನ ಯುವ ಸಂಸದ ಬರಲಿದ್ದು ಅವರು ಇವನ ಜೊತೆ ಓದುತ್ತಿದ್ದ ಇವನ ಸೀನಿಯರ್ ಹಾಗು ಪರಿಚಿತರೆ. ಅತಿಥಿಗಳಾಗಿ ಹಿಂದೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ನಿವೃತ್ತ ಪ್ರಾಧ್ಯಾಪಕರನ್ನು ಕರೆಸಲಾಗಿತ್ತು. ಪ್ರಾರಂಬಕ್ಕೆ ಇನ್ನು ಅರ್ದ ಗಂಟೆ ಇದೆಯೆಂದು ತಿಳಿಸಿದರು.
ಇವನ ಜೋತೆ ಓದುತ್ತಿದ್ದ ಗಂಗಾದರ, ಗೋಪಾಲ ನಾಯಕ್, ಸತೀಶ್ , ನಂಜುಂಡ ಶೆಟ್ಟಿ , ನರಸಿಂಹ ಮೂರ್ತಿ , ಹುಸೇನ್, ನಾರಯಣಸ್ವಾಮಿ ..ಎಷ್ಟೊಂದು ಜನ ಗೆಳೆಯರು ಅವನ ಸುತ್ತುವರೆದು ಕುಳಿತರು. ಯಾರು ಎಲ್ಲೆಲ್ಲಿ ಇರುವರು, ಏನು ಕೆಲಸ, ಮದುವೆ ಆಯಿತ ಮಕ್ಕಳು ಇಂತವೆಲ್ಲ ಮಾತು , ಹೋ ಎಂಬ ಕೂಗು ಎಲ್ಲರಲ್ಲು ಸಂಭ್ರಮ. ತಾವು ಕೆಲಸ ಮಾಡುತ್ತಿದ್ದ ಜವಾಬ್ದಾರಿ, ಗಾಂಭೀರ್ಯ ಎಲ್ಲವನ್ನು ತೊರೆದು ಹಗುರ ಮನಸಿನಲ್ಲಿ ಮತ್ತೆ ಎಲ್ಲರು ವಿದ್ಯಾರ್ಥಿಗಳಂತೆ ವರ್ತಿಸುತ್ತಿದ್ದರು. ದತ್ತನನ್ನು ಕಂಡು , ಅವನ ಈಗಿನ ಸ್ಥಾನ ಎಲ್ಲ ವಿಚಾರಿಸುತ್ತ ಅವರಿಗೆಲ್ಲ ಇವನ ಬಗ್ಗೆ ಮೆಚ್ಚುಗೆ, ಗೌರವ. ಹಾಗೆ 'ಏನಪ್ಪ ನಾವೇನಾದರು ಅಂದರೆ ನಮ್ಮನ್ನು ಒದ್ದು ಒಳಗೆ ಹಾಕಲ್ಲ ತಾನೆ " ಅಂತ ಕಿಚಾಯಿಸಿದರು. ದತ್ತನಿಗೆ ಎಲ್ಲ ಹಾಸ್ಯಗಳು ಪ್ರಿಯವಾಗಿದ್ದವು, ನಗುತ್ತ ಎಲ್ಲರನ್ನು ಮಾತನಾಡಿಸುತ್ತಿದ್ದ. ದೂರದಿಂದ ಇವರನ್ನೆಲ್ಲ ಗಮನಿಸುತ್ತಿದ್ದ ಪ್ರಿನ್ಸಿಪಾಲರಿಗೆ ಒಳಗೆ ನಗು. ಒಂದು ಕಾಲದಲ್ಲಿ ನಾನು ಪ್ರಾಧ್ಯಾಪಕನಾಗಿದ್ದಾಗಲೆ ಇವರೆಲ್ಲ ನನಗೆ ಹೆದರಿ ನಿಲ್ಲುತ್ತಿದ್ದರು, ಈಗ ಇವರೆಲ್ಲ ಎಷ್ಟು ಎತ್ತರದ ಸ್ಥಾನ ಏರಿದ್ದಾರೆ, ನನಗೆ ಇದು ಗರ್ವದ ವಿಷಯ ಎಂದುಕೊಳ್ಳುತ್ತಿದ್ದರು.
ದೂರದಲ್ಲಿ ಎಲ್ಲಿಯೋ ಹರಟುತ್ತ ಕುಳಿತ್ತಿದ್ದ, ನರಹರಿ ಇವನನ್ನು ಕಂಡು ಎದ್ದು ಕೈಬೀಸುತ್ತ ಬಂದ. ಮೊದಲಿನಿಂದ ಅವನ ಸ್ವಭಾವವೆ ಬೇರೆ ಅವನಿಗೆ ತನ್ನನ್ನು ಎತ್ತರಕ್ಕೆ ಪ್ರೊಜೆಕ್ಟ್ ಮಾಡಿಕೊಳ್ಳುವದೆಂದರೆ, ಎಂತದೊ ಖುಷಿ. ಅಲ್ಲದೆ ಮೊದಲಿನಿಂದ ಕಣ್ಣು ಸ್ವಲ್ಪ ಐಬು ಹಾಗಾಗಿ ದಪ್ಪ ಗಾಜಿನ ಕನ್ನಡಕ. ಕಿವಿಯು ಸ್ವಲ್ಪ ಮಂದ ಆದರೆ ಅದನ್ನು ತೋರಗೊಡುತ್ತಿರಲಿಲ್ಲ. ಓದುವದರಲ್ಲಿ ಜಾಣನಾದರು ಗೆಳೆಯರ ಮದ್ಯೆ ಪದೆ ಪದೆ ಅಪಹಾಸ್ಯಕ್ಕೆ ಒಳಗಾಗುತ್ತಿದ್ದ ಎಡವಟ್ಟುರಾಯ. ದತ್ತನ ಪಕ್ಕ ಬಂದು ಕುಳಿತವನೆ
"ಏನಪ್ಪ ದತ್ತ , ಅಂತು ಹೇಗೊ ನೀನು ಓದು ಮುಗಿಸಿದೆಯಲ್ಲ, ಈಗ ಏನು ಮಾಡ್ತೀದ್ದಿ" ಎಂದ, ಅವನಿಗೆ ಏಕೊ ದತ್ತನ ವಿಷಯ ತಿಳಿದಿಲ್ಲ. ದತ್ತ ಅವನಿಗೆ ಉತ್ತರಿಸುವ ಬದಲು
"ನನ್ನದಿರಲಿ ನೀನು ಏನು ಮಾಡ್ತಿದ್ದಿ ನಿನ್ನ ಸಮಾಚಾರವೇನು,ಮದುವೆಮಕ್ಕಳು, ಕೆಲಸ " ಎಂದು ಪ್ರಶ್ನಿಸಿದ. ನರಹರಿಗೆ ಅಷ್ಟು ಸಾಕಾಯ್ತು
" ನನ್ನದೇನಪ್ಪ ಎಲ್ಲ ಸಕ್ಕತ್, ಡಿಗ್ರಿ ಮುಗಿಸಿ ನಂತರ ಕಂಪ್ಯೂಟರ್ ಕೋರ್ಸ್ ಗಳನ್ನು ಸೇರಿದೆ. ಕೆಲಸ ಹುಡುಕುವುದು ಕಷ್ಟವೆ ಆಗಲಿಲ್ಲ, ಇನ್ ಫ್ಯಾಕ್ಟ್ ಅವರೆ ನನಗೆ ಕರೆದು ಕೆಲಸ ಕೊಟ್ಟರು ಅಂತ ಇಟ್ಕೊ, ರಾಯ್ಲ್ ಫ್ಯಾಮಿಲಿನಪ್ಪ ನನ್ನ ಮನೆಯವರು, ಚಿಕ್ಕಮಂಗಳೂರಿನ ಕಡೆ ಕಾಫಿ ಪ್ಲಾಂಟರ್ ಅವರಪ್ಪ, ಕೋಟಿ ಕೋಟಿ ಆಸ್ತಿ ಕೊಳೆಯುತ್ತ ಬಿದ್ದಿದ್ದೆ. ಹಾಗಂತ ನನಗೇನು ಕಡಿಮೆ ಇಲ್ಲ. ತಿಂಗಳಿಗೆ ಎಂಬತ್ತು ಸಾವಿರ ದಾಟಿದೆ ಈಗ, ಕಂಪನಿಯಿ೦ದಲೆ ಕಾರು ಕೊಟ್ಟಿದ್ದಾರೆ. ಇಲ್ಲಿ ಇರುವ ಯಾರಿಗಾದರು ಇದೆಯ ಕೇಳು ನನ್ನಷ್ಟು ಇನ್ ಕಮ್ "
ಜೋರಾದ ದ್ವನಿಯಲ್ಲಿ ನರಹರಿ ಮಾತನಾಡುತ್ತಿದ್ದರೆ ಸುತ್ತ ಕುಳಿತವರು ಮುಸಿಮುಸಿ ನಗುತ್ತಿದ್ದರು. ಅವನು ಮಾತ್ರ ಅದರ ಪರಿವಿಲ್ಲದೆ ಮಾತನಾಡುತ್ತಿದ್ದ
" ಅದರಲ್ಲಿ ಅಷ್ಟೆ ರಿಸ್ಕ್ ಇದೆಯಪ್ಪ, ಏನು ಮಾಡುವುದು ಕೆಲವು ಕಾನೂನಿಗೆ ಮರೆಮಾಚುವ ಕೆಲಸವು ಮಾಡಬೇಕಾಗುತ್ತೆ, ಕಂಪನಿಗೋಸ್ಕರ. ನಿನಗೆ ತಿಳಿದರೆ ಪರವಾಗಿಲ್ಲ ಬಿಡು, ಪೋಲಿಸರಿಗೆ, ಅದರಲ್ಲು ಸೈಬರ್ ವಿಭಾಗಕ್ಕೆ ತಿಳಿದರೆ ತೊಂದರೆ ಅಂತಿಟ್ಕೊ, ತೊಂದರೆ ಏನು ಬಂತು ಹಣ ಚೆಲ್ಲಬೇಕಾಗುತ್ತೆ ಅಷ್ಟೆ. ಸಂಬಳ ಬೇಕು ಅಂದ್ರೆ ಅದೆಲ್ಲ ಮಾಡಬೇಕಲ್ವಾ? . ಈಗ ನಿನ್ನ ತಗೊ ನೀನು ಅಷ್ಟು ದುಡಿಯಲು ಸಾದ್ಯವಾ?" .
ಹೀಗೆ ಅವನ ಕಂಪನಿಯ ವ್ಯವಹಾರದ ಬಗ್ಗೆ ಏನೆಲ್ಲ ಹೇಳುತ್ತ ಕಡೆಗೆ
"ಅದು ಸರಿ ನೀನು ಎಲ್ಲಪ್ಪ ಕೆಲಸ ಮಾಡುವುದು? ನೀನು ಬಿಡು ಬುದ್ದಿವಂತ ಯಾವೊದೋ ಕಾಲೇಜಿನಲ್ಲಿ ಕೊರೆಯೊ ಕೆಲಸ ಶುರುಮಾಡಿರುತ್ತಿ" ಅಂತ ಗಹಗಹಿಸಿ ನಕ್ಕ.
ಸುತ್ತ ಅವನ ಮಾತು ಕೇಳುತ್ತಿದ್ದವರು, ದತ್ತನ ಬಗ್ಗೆ ಗೊತ್ತಿದ್ದವರು ನಗುತ್ತ ಕುಳಿತ್ತಿದ್ದರು.
ದತ್ತ ಸಣ್ಣದಾಗಿ ನಗುತ್ತ "ನಾನು ಪೋಲಿಸ್ ಇಲಾಖೆಯಲ್ಲಿರುವೆ " ಎಂದು ತಿಳಿಸಿದ,
ನರಹರಿ ಆಶ್ಚರ್ಯದಿಂದ
"ಏನು ಪೋಲಿಸ್ ಕೆಲಸವೆ, ಎಂತದು, ಅಲ್ಲಿಯ ಗುಮಾಸ್ತ ಕೆಲಸವ ಅಥವ ಏನು " ಎಂದ ಕುತೂಹಲದಿಂದ
"ಅಲ್ಲಪ್ಪ , ಸೈಬರ್ ಕ್ರೈ ವಿಭಾಗದ ಚೀಫ್ , ಡಿ.ಐ.ಜಿ. ಸೈಬರ್ ಕ್ರೈಮ್ " ನಗುತ್ತ ಹೇಳಿದ ದತ್ತ.
ನಿದಾನವಾಗಿ ಅರ್ಥವಾದಂತೆ ನರಹರಿಯ ಮುಖ ಬಣ್ಣ ಕಳೆದು ಕೊಂಡಿತು. ಅವನು ನಿಜವಾಗಿ ಸೈಬರ್ ಡಿ.ಐ.ಜಿ ದತ್ತನ ಹೆಸರು ಕೇಳಿದ್ದ ಆದರೆ ಕನಸಿನಲ್ಲು ಅವನು ತನ್ನ ಕ್ಲಾಸ್ ಮೆಟ್ ಅಂತ ಕಲ್ಪನೆಯು ಮಾಡಿರಲಿಲ್ಲ ಗಾಭರಿ ಅವನಲ್ಲಿ ತುಂಬಿತು. ಯಾರಲ್ಲು ಹೇಳಬಾರದ ಕೆಲವು ವಿಷಯ ಅವನಲ್ಲಿ ಬಾಯಿಬಿಟ್ಟಿದ್ದ, ಅದು ಯಾವುದೋ ಜೋಶ್ ನಲ್ಲಿ. ಅವನಿಗೆ ಈಗ ಅಲ್ಲಿಂದ ಹೇಗಾದರು ಪಾರದರೆ ಸಾಕು ಅನ್ನಿಸಿತು.
ತಕ್ಷಣ "ಸರಿಯಪ್ಪ ಬೇರೆ ಯಾರ್ಯಾರು ಬಂದಿದ್ದಾರೆ ಅಂತ ನೋಡ್ತೀನಿ " ಎಂದು ದಡ ದಡ ಹೊರಟ. ಸುತ್ತಲ್ಲಿದ್ದವರು ಜೋರಾಗಿ ನಗುತ್ತಿದ್ದರು.
ಅವನು ಮರೆಯಾದ ಸ್ವಲ್ಪ ಸ್ವಲ್ಪ ಹೊತ್ತಿಗೆ, ಎಡಬಾಗದಲ್ಲಿ ಕುಳಿತಿದ್ದ, ಹೆಣ್ಣುಮಕ್ಕಳ ಕಡೆಯಿಂದ ಮೂರು ನಾಲಕ್ಕು ಜನರ ಗುಂಪು ನಿದಾನವಾಗಿ ಇತ್ತ ಬರುವುದು ಕಾಣಿಸಿತು. ಇವನು ತಕ್ಷಣ ಗುರುತಿಸಿದ. ಅನುಮಾನವೆ ಇಲ್ಲ ಇದು ಜಾನಕಿಯ ಗುಂಪೆ. ಅಂದರೆ ಅರುಣ ಸಹ ಬಂದಿದ್ದಾಳೆ. ಅವನ ಕಣ್ಣಿನಲ್ಲಿಯ ಹೊಳಪು ಜಾಸ್ತಿಯಾಯಿತು. ಅವರು ಹತ್ತಿರ ಬಂದಂತೆ ನಾಲ್ವರು ಕಾಣಿಸಿದರು,
ನಗುತ್ತ ಇವನತ್ತ ನೋಡಿದ ಜಾನಕಿ
"ನಮಸ್ಕಾರ ದತ್ತ ಅವರಿಗೆ, ನಮ್ಮ ನೆನಪು ಇದ್ದೀತಾ? " ಎಂದಳು ಅದಕ್ಕೆ ದತ್ತ
"ಇರದೆ ಉಂಟೆ, ನಿಮ್ಮನೆಲ್ಲ ಹೇಗೆ ಮರೆಯಲು ಸಾದ್ಯ? . ನೀವೀಗ ಏನು ಮಾಡುತ್ತಿದ್ದೀರಿ " ಅಂತೆಲ್ಲ ವಿವರ ವಿಚಾರಿಸಿದ,
ಜಾನಕಿ ಖಾಸಗಿ ಕಂಪನಿಯೊಂದರಲ್ಲಿ ಸ್ಟೆನೋ ಆಗಿ ದುಡಿಯುತ್ತಿದ್ದಳು, ಉಳಿದ ಮೂವರಲ್ಲಿ ಸರೋಜ ಮಾತ್ರ ಮದುವೆಯಾಗಿ ಗಂಡನ ಜೊತೆ ಮನೆ ಮಡದಿಯಾಗಿದ್ದಳು, ಉಳಿದ ಇಬ್ಬರು ಕಲ್ಪನ ಹಾಗು ಭಾರತಿ ಕೆಲಸ ಮಾಡುವವರೆ. ಎಲ್ಲರಿಗು ಮದುವೆಗಳಾಗಿ ಆಗಲೆ ಒಂದು ಎರಡು ಮಕ್ಕಳು. ಓಡುವ ಸಮಯದ ವೇಗವನ್ನು ನೆನೆದು ಅವನು ಆಶ್ಚರ್ಯ ಪಡುತ್ತಿದ್ದ.
ಹೊರಗೆ ನಗುತ್ತ ಮಾತನಾಡುತ್ತಿದ್ದರು ಅವನಲ್ಲಿ ಕೊರೆಯುತ್ತ ಇದೆ "ಅರುಣ ಎಲ್ಲಿ ಕಾಣುತ್ತಿಲ್ಲ" ಮಾತನಾಡುತ್ತ ಕಡೆಗೆ ಕೇಳಿಯೆ ಬಿಟ್ಟ
"ಅಂದ ಹಾಗೆ ಎಲ್ಲಿ ನಿಮ್ಮ ಐದು ಜನರ ಗುಂಪಿನಲ್ಲಿ ಒಬ್ಬರು ಮಿಸಿಂಗ್, ಏಕೆ ಬಂದಿಲ್ಲ "
ಜಾನಕಿ ಈಗ ನಗುತ್ತಿದ್ದಳು,
"ಕಡೆಗು ನೆನಪಿಸಿಕೊಂಡು ಕೇಳಿದಿರಲ್ಲ ಬಿಡಿ " ಎನ್ನುತ್ತ,
ಎಡಬಾಗದಲ್ಲಿ ಕುಳಿತ್ತಿದ್ದ ಹೆಂಗೆಳೆಯರತ್ತ ತಿರುಗಿ, ದೂರದಲ್ಲಿ ಕುಳಿತಿದ್ದವರತ್ತ ಕೈಮಾಡಿ ಕರೆದಳು. ಈಗ ದೂರದಿಂದಲು ದತ್ತ ಗುರುತಿಸಿದ. ಅವಳೆ ಅರುಣ , ಕುಳಿತ್ತಿದ್ದವಳು ಎದ್ದು ಬರುತ್ತಿದ್ದಾಳೆ. ತಿಳಿ ನೀಲಿ ಬಣ್ಣದ ಸೀರೆಯಲ್ಲಿ, ಹಗುರವಾಗಿ ಕೂದಲನ್ನು ಹಿಂದೆ ಕಟ್ಟಿ ಬರುತ್ತಿದ ಅವಳ ನಿಲುವು ಅವನನ್ನು ಕದಲಿಸಿತು. ಅವನ ಹೃದಯದ ಬಡಿತ ಅವನಿಗೆ ಕೇಳುತ್ತಿತ್ತು, ಅವಳನ್ನು ನೋಡಲು, ಮಾತನಾಡಲು ಕಾತುರನಾಗಿದ್ದ. ಅರುಣ ಹತ್ತಿರ ಬಂದು ನಗುತ್ತ ನುಡಿದಳು
"ಹೇಗಿದ್ದೀರಿ "
ದತ್ತ ಸಂತೋಷದಿಂದ ನುಡಿದ ,
"ಚೆನ್ನಾಗಿಯೆ ಇದ್ದೇನೆ, ಅದೇನು ನಿಮ್ಮ ಗುಂಪು ಬಿಟ್ಟು , ನೀವೊಬ್ಬರೆ ಬೇರೆಯಾಗಿ ಬರುತ್ತಿದ್ದೀರಿ " ಎಂದು ಕೇಳಿಯೆ ಬಿಟ್ಟ ಕುತೂಹಲದಿಂದ.
ಈಗ ನಗುವ , ಸರದಿ ಜಾನಕಿಯದು, ಅರುಣ ಬೇಡವೆಂದು ಸನ್ನೆ ಮಾಡುತ್ತಿದ್ದರು ಅವಳು ಚಿತಾವಣೆಯ ದ್ವನಿಯಲ್ಲಿ ಅಂದಳು
"ಅದೇನೊ ಅಪ್ಪ, ಈ ಅರುಣ ನಾವು ಕರೆದರು ಜೊತೆಗೆ ಬರಲಿಲ್ಲ, ಅವಳು ನೀವಾಗಿ ನೆನೆದು ಕೇಳಿದರೆ ಮಾತ್ರ ನಿಮ್ಮ ಎದುರಿಗೆ ಬರುವದಾಗಿ ಕುಳಿತಿದ್ದಳು "
ದತ್ತನಿಗೆ ಹೇಗೆ ಹೇಗೊ ಆಯಿತು. ಅರುಣಳಿಗೆ ಈಗಲು ಅವಳ ಮನಸಿನಲ್ಲಿ ನನಗೆ ಜಾಗವಿರಬಹುದು ಇಲ್ಲದಿದ್ದರೆ ಹೀಗೇಕೆ ವರ್ತಿಸುತ್ತಿದ್ದಳು. ನಗುತ್ತಲೆ ಮಾತನಾಡಿಸಿದ. ಏನು ಮಾಡಿಕೊಂಡಿದ್ದೀರಿ ಎಂದೆಲ್ಲ. ಅವಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಈಗ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದಳು.
"ಯಾವ ಬ್ರಾಂಚ್" ಎಂದು ಕೇಳಿದ, ಅದಕ್ಕೆ ಉತ್ತರವಾಗಿ ಜಾನಕಿ
" ಇಲ್ಲೆ ಕುಳಿತು ಏನು ಮಾತು ಬನ್ನಿ , ಒಮ್ಮೆ ನಾವು ಓದಿದ್ದ ಕಾಲೇಜಿನಲ್ಲೆಲ್ಲ ಒಂದು ಸುತ್ತು ಹಾಕಿಬರೋಣ, ನಮ್ಮ ಕ್ಲಾಸ್ ರೂಮ್ ನೋಡಿ ಬರೋಣ" ಎಂದು ಕರೆದಳು.
ಸರಿ ಎಂದು ಅವನು ಎದ್ದು ಹೊರಟ. ಹುಡುಗಿಯರು ಸೂಕ್ಷ್ಮವಾಗಿಯೆ ಗಮನಿಸಿದರು. ಈಗ ಅವನ ನಡುಗೆಯೆ ಬದಲಾಗಿದೆ, ಆತ್ಮ ವಿಶ್ವಾಸ ತುಂಬಿದಂತಿದೆ, ಮೊದಲಿನಂತೆ ಎಂತದೋ ಒಂದು ಕೀಳಿರಿಮೆ ಸಂಕೋಚ ಇಲ್ಲ. ಅವರೆಲ್ಲರ ನಡುವೆ ಅವನ ಮನವು ಏನೊ ಹಗುರವಾಗಿತ್ತು. ತನ್ನ ಅಧಿಕಾರ ಸ್ಥಾನ, ಮಾನಸಿಕ ಒತ್ತಡ ಎಲ್ಲವನ್ನು ಮರೆತಿದ್ದ. ಆ ಒಂದು ಸಂದರ್ಭಕ್ಕೆ ಏಕೊ ಹಳೆಯ ದತ್ತನೆ ಆಗಿಹೋಗಿದ್ದ. ಎಲ್ಲಡೆಯು ಸುತ್ತಾಡಿದರು. ಮೂರು ಪ್ಲೋರ್ ಗಳಲ್ಲಿ ಹರಡಿದ್ದ ಅಂಗ್ಲದ M ಆಕಾರದಲ್ಲಿದ್ದ ಕಲ್ಲು ಕಟ್ಟಡವದು. ತುಂಬ ಬದಲಾವಣೆ ಏನಿರಲಿಲ್ಲ. ಬಾಟನಿ ವಿಭಾಗದ ಮುಂಬಾಗದಲ್ಲಿದ್ದ ಚಿಕ್ಕಕೈತೋಟದಲ್ಲಿ ಸಂಪಿಗೆ ಗಿಡ ದೊಡ್ಡ ಮರದಂತಾಗಿತ್ತು. ಅದೇ ರೂಮುಗಳು ಅದೇ ಕಾರಿಡಾರ್. ಹೊರಗೆ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಎಲ್ಲರು ಸೇರಿದ್ದರಿಂದ. ಒಳಗೆ ಜನರಿರಲಿಲ್ಲ. ಆರು ಜನರು ಮಾತನಾಡುತ್ತ, ಕಡೆಯ ವರ್ಷ ಅವರ ತರಗತಿ ನಡೆಯುತ್ತಿದ್ದ ರೂಮಿನಲ್ಲಿ ಪ್ರವೇಶಿಸಿದರು. ದತ್ತ ಸದಾ ತಾನು ಕೂಡುತ್ತಿದ್ದ ಮುಂದಿನ ಬೆಂಚಿನಲ್ಲಿ ಹೋಗಿ ಕುಳಿತ, ಅವನ ಎದುರಿಗೆ ಐದು ಜನರು ನಿಂತಿದ್ದರು. ಎಲ್ಲರಿಗು ಏನೆಲ್ಲ ಸಂತಸ. ಹಳೆಯ ನೆನಪುಗಳೆಲ್ಲ ಒಮ್ಮೆಲೆ ಮುಗಿಬಿದ್ದು ಅವರನ್ನು ಕಾಡಿದವು. ಅಲ್ಲಿ ನಡೆದಿದ್ದ ಎಷ್ಟೊ ವಿಷಯಗಳನ್ನು ನೆನಪಿಸಿಕೊಂಡರು. ಸಮಯ ನೋಡಿಕೊಂಡರೆ ಆಗಲೆ ಹತ್ತು ವರೆ ದಾಟಿತ್ತು, ಆಗ ಜಾನಕಿ,
"ಸರಿ ಇನ್ನೇನು ಈಗ ಕಾರ್ಯಕ್ರಮ ಪ್ರಾರಂಬವಾಗಬಹುದೇನೊ , ಕೆಳಗೆ ಹೋಗಬಹುದು" ಎನ್ನುತ ಎದ್ದು , ಅರುಣಳ ಮುಖವನ್ನು ಒಂದು ರೀತಿ ನೋಡಿ ನಿದಾನವಾಗಿ ಹೊರನಡೆದಳು ಅವಳ ಉಳಿದ ಗೆಳತಿಯರೆಲ್ಲ ಅವಳ ಹಿಂದೆ ಹೊರಟಂತೆ, ಅರುಣ ಮಾತ್ರ ಅಲ್ಲೆ ಉಳಿದಳು. ಅವರೆಲ್ಲ ಅಲ್ಲಿಂದ ಹೊರಹೋಗಿ ಕಾರಿಡಾರ್ ನಲ್ಲಿ ದೂರದಲ್ಲಿ ಮಾತನಾಡುತ್ತ ನಿಂತರು, ಈಗ ರೂಮಿನಲ್ಲಿ ಇವರಿಬ್ಬರೆ. ದತ್ತ ಸ್ವಲ್ಪ ಸಂಕೋಚದಿಂದ ಕೇಳಿದ
"ಅರುಣ ಹೇಗಿದ್ದೀರಿ, ನಿಮ್ಮನ್ನು ಕಾಣಲು ತುಂಬ ಪ್ರಯತ್ನ ಪಟ್ಟೆ ಆಗಲೆ ಇಲ್ಲ "
ಅರುಣ ಮಾತ್ರ ನಕ್ಕಳು,
"ನಾನು ಎಲ್ಲಿ ಹೋಗಲಿ ದತ್ತ, ತುಮಕೂರಿನಲ್ಲಿಯೆ ಇದ್ದೆ, ಹುಡುಕುವದೇನು ಬಂತು, ಅದೆಲ್ಲ ಆಯಿತಲ್ಲ ಈಗ ನೀವು ಹೇಗಿದ್ದೀರಿ, ನಿಮ್ಮ ಮನೆಯವರು ತುಂಬಾ ರೂಪವತಿ ಅಂತ ಕೇಳಿದ್ದೀನಿ, ಅಷ್ಟೆ ಬುದ್ದಿವಂತರು ಅಂತೆ, ನನ್ನ ಹಾಗೆ ದಡ್ಡಿಯಲ್ಲ" ಎಂದು ನಕ್ಕಳು. ಅಲ್ಲಿಗೆ ಅವಳಿಗೆ ಎಲ್ಲವು ಗೊತ್ತಿದೆ.
"ಅರುಣ, ನಾನು ನಿಮ್ಮನ್ನು ತುಂಬ ನೆನೆಸಿದ್ದೆ, ಮದುವೆ ಮೊದಲು ಹುಡುಕಲು ಪ್ರಯತ್ನಿಸಿದೆ, ಆದರೆ ಸಂದರ್ಭ ಬೇರೆಯೆ ಇತ್ತು, ಏನೆಲ್ಲ ನಡೆದು ಹೋಯಿತು" ಎಂದ
"ಹಳೆಯದೆಲ್ಲ ಈಗ ಏಕೆ ನೆನೆಸಬೇಕು ಬಿಡಿ, ಎಲ್ಲವು ಚೆನ್ನಾಗಿಯೆ ಇದೆಯಲ್ಲ. ನನಗೆ ಈಗಲು ನಮ್ಮ ಕಾಲೇಜಿನ ದಿನಗಳ ನೆನಪೆ ಪ್ರಿಯ" ಎಂದಳು , ಹೀಗೆ ನಾಲ್ಕು ಐದು ನಿಮಿಶವೆನ್ನುವಾಗ ಹೊರಗಿನಿಂದ ಜಾನಕಿ ಕೂಗಿದಳು, ಅರುಣ ಬರುತ್ತೀಯ ಹೋಗೋಣ ಎನ್ನುತ್ತ ಅವರೆಲ್ಲ ನಿದಾನವಾಗಿ ನಡೆಯುತ್ತಿದ್ದರು. ಅರುಣ ಒಮ್ಮೆ ಹೊರಗೆ ನೋಡಿದಳು ಎಲ್ಲರು ಇವರಿಗೆ ಬೆನ್ನು ಮಾಡಿದ್ದರು, ದತ್ತ ಬೆಂಚಿನಲ್ಲಿ ಕುಳಿತು ಅವಳನ್ನೆ ನೋಡುತ್ತಿದ್ದ, ಅವನ ಕಣ್ಣನಲ್ಲಿ ದೃಷ್ಟಿ ಇಟ್ಟು ನೋಡಿದ ಅವಳು,
"ಸರಿ ಇನ್ನು ಹೊರಡೋಣ, ಕೆಳಗೆ ಕಾರ್ಯಕ್ರಮ ಪ್ರಾರಂಬವಾಗಬಹುದು ಬನ್ನಿ"
ಎನ್ನುತ್ತ ಎದ್ದು ನಿಂತಳು
"ಮತ್ತೆ ಯಾವಾಗ ನಮ್ಮ ಬೇಟಿ " ಎಂದ ದತ್ತ ತುಸು ಅಸಹಾಯಕ ದ್ವನಿಯಲ್ಲಿ.
ಎಂತದೊ ನಗು ಅವಳ ತುಟಿಗಳಲ್ಲಿ.
"ನಮ್ಮ ಬೇಟಿಯಾ, ಹೀಗೆ ಯಾವುದೊ ಅನಿರೀಕ್ಷಿತ ಸಂದರ್ಭದಲ್ಲಿ ಆಗಬಹುದು, ಎಂದು ಆಗದೆಯು ಇರಬಹುದು" ಎಂದವಳು, ಹೊರಡುವ ಮುಂಚೆ ನಿದಾನವಾಗಿ ಬಗ್ಗಿ ಅವನ ಹಣೆಯ ಮೇಲಿನ ಮುಂಗುರಳನ್ನು ಎಡಕೈಲಿ ಹಿಂದೆ ತಳ್ಳುತ್ತ, ನಿದಾನವಾಗಿ ತನ್ನ ತುಟಿಯನ್ನು ಅವನ ಹಣೆಯ ಮೇಲೆ ಒತ್ತಿದಳು ಅವಳ ಕಣ್ಣುಗಳೇಕೊ ತುಂಬುತ್ತಿದ್ದವು,
"ಇದು ನಮ್ಮಿಬ್ಬರ ಬೇಟಿಯ ನೆನಪಿಗಾಗಿ " ಎಂದು ಸಣ್ಣ ದ್ವನಿಯಲ್ಲಿ ನುಡಿದು, ತಲೆ ತಗ್ಗಿಸಿ ಹೆಜ್ಜೆ ಹಾಕುತ್ತ ಗೆಳತಿಯರನ್ನು ಸೇರಲು ಹೊರಟಳು.
ದತ್ತನಿಗೆ ಒಂದು ಕ್ಷಣ ಎಲ್ಲವು ಅಯೋಮಯವಾಯಿತು ದಿಘ್ಮೂಡನಾಗಿ ಕುಳಿತಿದ್ದ, ಪ್ರಥಮ ಬಾರಿಗೆ ಅವನು ಅರುಣಳಲ್ಲಿ ಉದ್ವೇಗದ ನಡತೆಯನ್ನು ಕಂಡಿದ್ದ. ಇದು ಅವಳು ಕೊಟ್ಟ ಪ್ರಥಮ ಚುಂಬನ, ಅದು ಇಷ್ಟು ವರ್ಷಗಳ ನಂತರ ಇಂತಹ ಪರಿಸ್ಥಿಥಿಯಲ್ಲಿ.
ಎಲ್ಲರು ಎದ್ದು ಹೊರಟ ಮೇಲೆ ಅವನು ನಿದಾನವಾಗಿ ಎದ್ದು ನಡೆಯುತ್ತ ಹೊರಟ, ಅವನ ಮನವೇಕೊ ಗಾಳಿಯಲ್ಲಿ ಹಾರಾಡುತ್ತಿತ್ತು, ಮೈಮನೆವೆಲ್ಲ ಹಗುರವಾದಂತೆ.
ಮುಂದೆ ನಡೆದ ಕಾರ್ಯಕ್ರಮವೆಲ್ಲ ಅವನಿಗೆ ಎಲ್ಲೊ ಕನಸಿನಲ್ಲಿ ನಡೆಯುತ್ತಿದ್ದಂತೆ ಅನ್ನಿಸಿತು, ಪ್ರಿನ್ಸಿಪಾಲರು ಅವನನ್ನು ಸ್ಟೇಜಿಗೆ ಕರೆದು ಹೊಗಳಿ ತಮ್ಮ ಕಾಲೇಜಿಗೆ ಗೌರವವೆನ್ನುತ್ತ, ಹೂಗುಚ್ಚವನ್ನು ಕೊಡಿಸಿದರು.
ಎಲ್ಲ ಕಾರ್ಯಕ್ರಮ ಮುಗಿಸಿ, ಎಲ್ಲರಿಗು ಹೇಳಿ, ಬೆಂಗಳೂರಿನತ್ತ ಹೊರಟಾಗ, ಮದ್ಯಾನ ೩ ಗಂಟೆಯ ಹತ್ತಿರ. ಕಾರನ್ನು ಡ್ರೈವ್ ಮಾಡುತ್ತಿದ್ದರು , ದತ್ತನ ಮನ ಎಂತದೋ ಸಂಭ್ರಮದಲ್ಲಿ ತುಂಬಿತ್ತು. ತಾನು ಅರುಣಳನ್ನು ಬಿಟ್ಟು ಬೇರೆಯೆ ಆದ ಮದುವೆಯಾದರು , ಅವಳು ಹಾಗು ಅವಳ ಸ್ನೇಹಿತೆಯರು ತನ್ನ ಬಗ್ಗೆ ನಡೆದುಕೊಂಡ ಸನ್ನಡತೆ ಅವನ ಮನಸನ್ನು ಹಗುರಗೊಳಿಸಿತ್ತು. ಇಷ್ಟು ವರ್ಷಗಳ ನಂತರವು, ಮದುವೆಯ ನಂತರವು ಅರುಣ ಅವಳ ಮನಸಿನಲ್ಲಿ ತನ್ನ ಬಗ್ಗೆ ಕೊಟ್ಟಿರುವ ಸ್ಥಾನ ಇಟ್ಟಿರುವ ಪ್ರೀತಿ ಅವನಿಗೆ ಆಶ್ಚರ್ಯವೆನಿಸಿತು. ಅವಳು ಎಲ್ಲಿದ್ದಾಳೊ, ಅವಳ ಗಂಡ ಮಕ್ಕಳು ಎಲ್ಲಿದ್ದಾರೆ ತಿಳಿಸಲೆ ಇಲ್ಲ , ಅದು ಅವಳಿಗೆ ಇಷ್ಟವಿಲ್ಲ ಅನ್ನಿಸುತ್ತೆ. ಆದರೆ ಗೆಳತಿಯರ ಬೆನ್ನಿಗೆ ನನ್ನ ಹಣೆಗೆ ಮುತ್ತಿಡುವಷ್ಟು ಪ್ರೀತಿಯನ್ನು ಅವಳು ಇನ್ನು ತನ್ನ ಹೃದಯದಲ್ಲಿ ಕಾಪಾಡಿಕೊಂಡಿದ್ದಾಳೆ, ಚಿಪ್ಪಿನೊಳಗೆ ಮುಚ್ಚಿಟ್ಟಿರುವ ಮುತ್ತಿನಂತೆ. ನಿದಾನಕ್ಕೆ ತನ್ನ ಬಲಕೈ ಅನ್ನು ಹಣೆಯ ಮೇಲೆ ಆಡಿಸಿಕೊಂಡ . ಹಣೆಯ ಮೇಲೆ ಅವಳು ತುಟಿಯೊತ್ತಿದ ತಂಪು ಇನ್ನು ಉಳಿದಿದೆಯೋನೊ ಅನ್ನಿಸಿ ಎಂತದೊ ಸುಖವೆನಿಸಿತು. ಮುಖದ ಹತ್ತಿರ ಅವಳ ಮುಖ ತಂದಾಗ ತನ್ನ ಸುತ್ತ ಅಡರಿದ ಆ ಸುವಾಸನೆ ಇನ್ನು ತನ್ನ ಸುತ್ತ ಉಳಿದಿದೆ ಎನ್ನುವ ಭಾವ ಅವನನ್ನು ಆವರಿಸಿತು. ಕಾರಿನಲ್ಲೆಲ್ಲ ಎಂತದೋ ಶ್ರೀಗಂಧದ ಧೂಪ ಹರಡಿದಂತ ಸುವಾಸನೆ ತುಂಬಿತ್ತು. ಕಾರು ನಿದಾನವಾಗಿ ಬೆಂಗಳೂರಿನತ್ತ ಓಡುತ್ತಿತ್ತು.
-----------------------------------------------------------------
ಕಥೆಯ ಕೊನೆ :
ಓದುಗರೆ ಪ್ರೇಮ ಕಥೆಗೆ ಒಂದು ಮುಕ್ತಾಯವೇನೊ ಕೊಟ್ಟಾಯಿತು. ಎಲ್ಲವು ಸುಖಾಂತವೆ. ಪ್ರೀತಿ ಪ್ರೇಮವೆಂದರೆ ಇದೆ ಸುಖ ಸಂತೋಷ ಅಲ್ಲವೆ. ಹಾಗೇನು ಭಾವಿಸಬೇಡಿ. ಈ ಕಥೆಯ ಕೊನೆಯಲ್ಲಿ ದತ್ತನಿಗು ಗೊತ್ತಾಗದಿದ್ದ ಸತ್ಯವೊಂದು ಇದೆ. ದತ್ತನಿಗೆ ಎಂದು ಅರ್ತವಾಗದ ಹೆಣ್ಣು ಹೃದಯದ ಮನದ ನೋವೊಂದು ಇದೆ. ದತ್ತನನ್ನ ಕಳಿಸಿದ್ದ ಅರುಣ ಎಂದು ಅವನನ್ನು ಮರೆತೆ ಇರಲಿಲ್ಲ. ತನ್ನ ಗುರಿಯನ್ನು ತಲುಪಿ, I.P.S. ಅಧಿಕಾರಿಯಾಗಿ ಪುನಃ ತನ್ನನ್ನು ಹುಡುಕಿ ಬರುವನೆಂದೆ ತನ್ನನ್ನು ಎಂದಿಗೂ ತೊರೆಯನೆಂದು ನಿಷ್ಕಲ್ಮಶವಾಗಿ ನಂಬಿದ್ದಳು ಅರುಣ. ಆದರೆ ಅವಳ ಮುಗ್ದ ಮನಸ್ಸು ಅಘಾತಕ್ಕೆ ಒಳಗಾಗಿತ್ತು, ಪತ್ರಿಕೆಗಳಿಂದ ದತ್ತನ ಮದುವೆಯ ವಿವರಗಳನ್ನು ತಿಳಿದು. ಆದರೇನು ಅವಳ ಮನಸಿನಲ್ಲಿದ್ದ ಅವನ ಮೇಲಿನ ಪ್ರೀತಿ ಎಂದು ಕಡಿಮೆಯಾಗಲೆ ಇಲ್ಲ, ಆಗಿನ್ನು ಚಿಗುರುತ್ತಿರುವ ಎಳೆಯ ಮಲ್ಲಿಗೆಯ ಬಳ್ಳಿಯನ್ನು ಕಿತ್ತೆಸಿದರು, ನೆಲದಲ್ಲಿ ಉಳಿದುಬಿಡುವ ಮಲ್ಲಿಗೆಯ ಬೇರಿನಂತೆ. ಅವಳ ಮನ ಮಾತ್ರ ವೈರಾಗ್ಯ ಭಾವ ತಾಳಿತು. ಕೃಷ್ಣನನ್ನು ನಂಬಿದ ರಾದೆಯಂತೆಯೆ ಅವಳು ಸದಾ ಕಾಲ ಕಳೆಯುತ್ತಿದ್ದಳು. ಅವಳ ತಂದೆ ತಾಯಿಗಳು ಎಂದೊ ಮರಣ ಹೊಂದಿದ್ದರು. ಈಗ ಅವಳಿಗೆ ತನ್ನವರು ಅಂತ ಯಾರು ಇರಲಿಲ್ಲ, ಅನಾಥೆಯಂತೆ ಬದುಕಿದ್ದಳು, ಅವಳ ಗೆಳತಿಯರು ಅವಳನ್ನು ಮದುವೆಗೆ ಒಪ್ಪಿಸಲು ತುಂಬಾ ಪ್ರಯತ್ನ ಪಟ್ಟರು. ಆದರೆ ಮನಸನ್ನು ಒಮ್ಮೆ ದತ್ತನಿಗೆ ಒಪ್ಪಿಸಿ ಈಗ ತಾನು ಬೇರೆಯವರನ್ನು ಮದುವೆಯಾಗುವುದು ಅಸಾದ್ಯವೆಂದು ನಿರ್ದರಿಸಿದ ಅವಳು ಅವಿವಾಹಿತಳಾಗಿಯೆ ಉಳಿದಿದ್ದಳು,ತಾನು ಅವಿವಾಹಿತೆಯಾಗಿ ಉಳಿಯಲು ಕಾರಣವನ್ನು ಬೇರೆಯವರಿಗೆ ಕೊಡಲು ಅಶಕ್ತಳು ಅವಳು. ಕಾಲೇಜಿನ ಕಾರ್ಯಕ್ರಮದಲ್ಲಿ ದತ್ತ ಬಂದಿದ್ದಾಗ ಈ ವಿಷಯಗಳನ್ನು ಏನೆ ಆದರು ಅವನಿಗೆ ಹೇಳಬಾರದೆಂದು ಗೆಳತಿಯರನ್ನೆಲ್ಲ ಒಪ್ಪಿಸಿದ್ದಳು. ಈಗ ನಿಮಗೇನು ಅನ್ನಿಸುತ್ತಿದೆ. ಪ್ರೀತಿ ಅನ್ನುವುದು ಮದುರ ಭಾವವೆ.
Comments
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by venkatb83
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by bhalle
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by partha1059
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by bhalle
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by makara
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by kavinagaraj
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by sathishnasa
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by santhosh_87
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by partha1059
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by Jayanth Ramachar
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by ಗಣೇಶ
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by bhalle
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by partha1059
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by bhalle
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by bhalle
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by ಗಣೇಶ
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by bhalle
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by ಗಣೇಶ
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by bhargavarao
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by partha1059
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by Premashri
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by partha1059
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by kamath_kumble
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by partha1059
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )
In reply to ಉ: ಶ್ರೀಗಂಧದ ಧೂಪ - ( ಅರುಣ ) by Chikku123
ಉ: ಶ್ರೀಗಂಧದ ಧೂಪ - ( ಅರುಣ )
ಉ: ಶ್ರೀಗಂಧದ ಧೂಪ - ( ಅರುಣ )