ಕಥೆ ಬರೆಯಲು ಕೋರಿಕೆ ...
ಈ ಕೆಳಗೆ ಘಟನೆಯೊಂದನ್ನು ಕೊಟ್ಟಿದ್ದೇನೆ. ನಾನು ಬರೆದಿದ್ದೇ ಒಂದು ಸಣ್ಣ ಕಥೆಯಾಗಿದೆ. ಇರಲಿ. :-) ಒಳ್ಳೆಯ ಕಥೆಗಾರ ಇದನ್ನು ಬಹು ಕಾಲ ನೆನಪಿನಲ್ಲುಳಿಯುವ ಸ್ವಾರಸ್ಯಕರ ಕಥೆಯಾಗಿಸಬಲ್ಲ ಎಂದು ನನಗೆ ಆಗಲೇ ಅನ್ನಿಸಿತ್ತು. ಈಗ ಕೂಡ ಅನ್ನಿಸುತ್ತಿದೆ. ಹಾಗಾಗಿ, ಇದನ್ನೇ ವಿಸ್ತಾರಿಸಿ ಕಥೆ ಬರೆಯಲು ನಿಮಗಿದೋ ಆಹ್ವಾನ.
ಘಟನೆ:
ಶ್ರೀಯುತ ಗಜಾನನ ಭಟ್ಟರು ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ. ಅವರಿಗೆ ತಮ್ಮ ಸಂಪ್ರದಾಯಗಳ ಕುರಿತು ಶ್ರದ್ಧೆ, ಹೆಮ್ಮೆ. ಒಮ್ಮೆ ಯುಗಾದಿಗೆ ಊರಿಗೆ ಹೋಗಿದ್ದ ಅವರಿಗೆ ಆ ವರ್ಷದ ರಾಶಿ ಫಲವನ್ನು ಅದೇಕೋ ಕೇಳಲಾಗಲೇ ಇಲ್ಲ. ಊರಿನಿಂದ ಮರಳಿ ಬರಲು ರೈಲು ಹತ್ತಿದ ಅವರಿಗೆ, ಆ ಸಂವತ್ಸರದ ಪಂಚಾಂಗವನ್ನು ಕೊಂಡು ತಮ್ಮ ರಾಶಿ ಫಲವನ್ನು ಓದುವ ಮನಸ್ಸಾಯಿತು. ರೈಲು ಬಿಡುವ ಸಮಯವಾಗಿತ್ತು. ಅದು ಹೇಗೋ ಓಡಿ ಹೋಗಿ ತಮ್ಮ ನೆಚ್ಚಿನ ಪಂಚಾಂಗವನ್ನು ರೈಲ್ವೆ ನಿಲ್ದಾಣದ ಪುಸ್ತಕದ ಅಂಗಡಿಯಿಂದ ಕೊಂಡು ತಂದರು. ಈ ಗಡಿಬಿಡಿಯಲ್ಲಿ ತಮ್ಮ ಕಾಲನ್ನೂ ಉಳುಕಿಸಿಕೊಂಡರು.
ರೈಲಿನಲ್ಲಿ ಕಾಲು ನೋವು ಹೆಚ್ಚಾದ್ದರಿಂದ ಅವರಿಗೆ ಪಂಚಾಂಗವನ್ನು ಓದಲಾಗಲಿಲ್ಲ. ದೆಹಲಿಯ ಮನೆ ತಲುಪಿದ ಮೇಲೂ, ಕಾಲು ನೋವಿಗೆ ಆಸ್ಪತ್ರೆ ಓಡಾಟ - ಕಚೇರಿಯ ರಾಶಿ ಬಿದ್ದ ಕೆಲಸದ ಒತ್ತಡಗಳ ನಡುವೆ, ರಾಶಿ ಫಲವನ್ನು ಓದಲಾಗಲಿಲ್ಲ. ಅಂತೂ ಹತ್ತು - ಹದಿನೈದು ದಿನಗಳ ನಂತರ ಪಂಚಾಗ ತೆರೆದು ಓದಲು ಕುಳಿತರು.
ಅವರ ರಾಶಿ ಫಲದಲ್ಲಿ ಹೀಗೆ ಬರೆದಿತ್ತು: ಅಬಕಡ ಅಬಕಡ ಅಬಕಡ ಅಬಕಡ ಅಬಕಡ ಅಬಕಡ ಅಬಕಡ. ಅಬಕಡ ಅಬಕಡ ಅಬಕಡ ಅಬಕಡ ಅಬಕಡ ಅಬಕಡ. ನಿಮಗೆ ಈ ವರ್ಷ ಉತ್ತಮ ಆರೋಗ್ಯ ಭಾಗ್ಯವಿದೆ ಎಂದೇ ಹೇಳಬಹುದು. ಆದಾಗ್ಯೂ, ಪ್ರಯಾಣದ ಸಮಯದಲ್ಲಿ ಕಾಳಜಿ ಅಗತ್ಯ. ವರ್ಷದ ಮೊದಲಲ್ಲಿ ನೋವನ್ನು ಅನುಭವಿಸುವ ಸಾಧ್ಯತೆಯಿದೆ. ಅಬಕಡ ಅಬಕಡ ಅಬಕಡ ಅಬಕಡ ಅಬಕಡ ಅಬಕಡ. ಅಬಕಡ ಅಬಕಡ ಅಬಕಡ ಅಬಕಡ ಅಬಕಡ.
Comments
ಉ: ಕಥೆ ಬರೆಯಲು ಕೋರಿಕೆ ...
In reply to ಉ: ಕಥೆ ಬರೆಯಲು ಕೋರಿಕೆ ... by partha1059
ಉ: ಕಥೆ ಬರೆಯಲು ಕೋರಿಕೆ ...
In reply to ಉ: ಕಥೆ ಬರೆಯಲು ಕೋರಿಕೆ ... by partha1059
ಉ: ಕಥೆ ಬರೆಯಲು ಕೋರಿಕೆ ...