ಕಥೆ ಬರೆಯಲು ಕೋರಿಕೆ ...

ಕಥೆ ಬರೆಯಲು ಕೋರಿಕೆ ...

ಈ ಕೆಳಗೆ ಘಟನೆಯೊಂದನ್ನು ಕೊಟ್ಟಿದ್ದೇನೆ. ನಾನು ಬರೆದಿದ್ದೇ ಒಂದು ಸಣ್ಣ ಕಥೆಯಾಗಿದೆ. ಇರಲಿ. :-) ಒಳ್ಳೆಯ ಕಥೆಗಾರ ಇದನ್ನು ಬಹು ಕಾಲ ನೆನಪಿನಲ್ಲುಳಿಯುವ ಸ್ವಾರಸ್ಯಕರ ಕಥೆಯಾಗಿಸಬಲ್ಲ ಎಂದು ನನಗೆ ಆಗಲೇ ಅನ್ನಿಸಿತ್ತು. ಈಗ ಕೂಡ ಅನ್ನಿಸುತ್ತಿದೆ. ಹಾಗಾಗಿ, ಇದನ್ನೇ ವಿಸ್ತಾರಿಸಿ ಕಥೆ ಬರೆಯಲು ನಿಮಗಿದೋ ಆಹ್ವಾನ.

ಘಟನೆ:
 
ಶ್ರೀಯುತ ಗಜಾನನ ಭಟ್ಟರು ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ. ಅವರಿಗೆ ತಮ್ಮ ಸಂಪ್ರದಾಯಗಳ ಕುರಿತು ಶ್ರದ್ಧೆ, ಹೆಮ್ಮೆ.  ಒಮ್ಮೆ ಯುಗಾದಿಗೆ ಊರಿಗೆ ಹೋಗಿದ್ದ ಅವರಿಗೆ ಆ ವರ್ಷದ ರಾಶಿ ಫಲವನ್ನು ಅದೇಕೋ ಕೇಳಲಾಗಲೇ ಇಲ್ಲ. ಊರಿನಿಂದ ಮರಳಿ ಬರಲು ರೈಲು ಹತ್ತಿದ ಅವರಿಗೆ, ಆ ಸಂವತ್ಸರದ ಪಂಚಾಂಗವನ್ನು ಕೊಂಡು ತಮ್ಮ ರಾಶಿ ಫಲವನ್ನು ಓದುವ ಮನಸ್ಸಾಯಿತು.  ರೈಲು ಬಿಡುವ ಸಮಯವಾಗಿತ್ತು. ಅದು ಹೇಗೋ ಓಡಿ ಹೋಗಿ ತಮ್ಮ ನೆಚ್ಚಿನ ಪಂಚಾಂಗವನ್ನು ರೈಲ್ವೆ ನಿಲ್ದಾಣದ ಪುಸ್ತಕದ ಅಂಗಡಿಯಿಂದ ಕೊಂಡು ತಂದರು. ಈ ಗಡಿಬಿಡಿಯಲ್ಲಿ ತಮ್ಮ ಕಾಲನ್ನೂ ಉಳುಕಿಸಿಕೊಂಡರು.

ರೈಲಿನಲ್ಲಿ ಕಾಲು ನೋವು ಹೆಚ್ಚಾದ್ದರಿಂದ ಅವರಿಗೆ ಪಂಚಾಂಗವನ್ನು ಓದಲಾಗಲಿಲ್ಲ. ದೆಹಲಿಯ ಮನೆ ತಲುಪಿದ ಮೇಲೂ, ಕಾಲು ನೋವಿಗೆ ಆಸ್ಪತ್ರೆ ಓಡಾಟ - ಕಚೇರಿಯ ರಾಶಿ ಬಿದ್ದ ಕೆಲಸದ ಒತ್ತಡಗಳ ನಡುವೆ, ರಾಶಿ ಫಲವನ್ನು ಓದಲಾಗಲಿಲ್ಲ. ಅಂತೂ ಹತ್ತು - ಹದಿನೈದು ದಿನಗಳ ನಂತರ ಪಂಚಾಗ ತೆರೆದು ಓದಲು ಕುಳಿತರು.

ಅವರ ರಾಶಿ ಫಲದಲ್ಲಿ ಹೀಗೆ ಬರೆದಿತ್ತು: ಅಬಕಡ  ಅಬಕಡ ಅಬಕಡ  ಅಬಕಡ ಅಬಕಡ  ಅಬಕಡ ಅಬಕಡ. ಅಬಕಡ ಅಬಕಡ  ಅಬಕಡ ಅಬಕಡ  ಅಬಕಡ ಅಬಕಡ.  ನಿಮಗೆ ಈ ವರ್ಷ ಉತ್ತಮ ಆರೋಗ್ಯ ಭಾಗ್ಯವಿದೆ ಎಂದೇ ಹೇಳಬಹುದು. ಆದಾಗ್ಯೂ, ಪ್ರಯಾಣದ ಸಮಯದಲ್ಲಿ ಕಾಳಜಿ ಅಗತ್ಯ. ವರ್ಷದ ಮೊದಲಲ್ಲಿ ನೋವನ್ನು ಅನುಭವಿಸುವ ಸಾಧ್ಯತೆಯಿದೆ. ಅಬಕಡ ಅಬಕಡ  ಅಬಕಡ ಅಬಕಡ  ಅಬಕಡ ಅಬಕಡ.  ಅಬಕಡ ಅಬಕಡ  ಅಬಕಡ ಅಬಕಡ  ಅಬಕಡ.

Rating
No votes yet

Comments