ಅಪಘಾತ-ಕಾರಣ- ಅಗಲ ರಸ್ತೆ

ಅಪಘಾತ-ಕಾರಣ- ಅಗಲ ರಸ್ತೆ

ಚಾರಣ ಎಲ್ಲರಿಗೂ ಗೊತ್ತು.


ಕಾರಣ=?


ಕಾರಣ=ಕಾರಲ್ಲಿ +ಪಯಣ.


ಪೂರ್ವಪದದ ಕೊನೆಯ ಅಕ್ಷರ ಹಾಗೂ ಉತ್ತರಪದದ ಮೊದಲೆರಡು ಅಕ್ಷರಗಳು ಲೋಪವಾಗುವ ಝೆನ್ ಸಂಧಿ ಇದು.


ಇನ್ನೊಂದು ಕಾರಣವೂ ಇದೆ. ಕಾರಿನ+ರಣ=ಕಾರಣ.(ಭಜ್ಜಿ ಸಂಧಿ)


(ರಣ=ಆಸೆ.ತುಳುವಿನಿಂದ ಕನ್ನಡಕ್ಕೆ ಆಮದಾದ ಶಬ್ದ).ಮನೆಯಲ್ಲಿ ರಾಶಿ ಕಾರುಗಳಿದ್ದರೂ ಯಾವುದೇ ಹೊಸ ಕಾರು ಬಂದರೂ, ಕೊಂಡು ಪ್ರದರ್ಶನ ಮಾಡುವುದು.


ಸಿಬ್ಬಂದಿಯನ್ನು ಓಡಿಸಿ, ತಾನೇ ಕಾರನ್ನು ಓಡಿಸಿದಾಗ ಇದೇ "ರಾಹು ಸಂಧಿ"ಯಾಗುವುದು.


’ಋಣ’(loan)ಮಾಡಿ ಕಾರು ತೆಗೆದುಕೊಳ್ಳುವುದು- ’ಕಾಋಣ’. ’ಋ’ ಣ  ಕಷ್ಟವಾದವರು ಕಾರಣ ಎನ್ನುತ್ತಾರೆ. ತಪ್ಪಲ್ಲ. ಆದರೆ-


"ರಾಜಕಾರಣಿ" ಪದ ಪ್ರಯೋಗ ತಪ್ಪು.


ಹಿಂದೆ ರಾಜರಂತೆ ಕಾರಲ್ಲಿ ಪಯಣಿಸುತ್ತಿದ್ದವರನ್ನು-ರಾಜಕಾರಣಿ ಎನ್ನುತ್ತಿದ್ದರು. ಆ ಕಾಲಕ್ಕೆ ಅದು ಸರಿ. ಈಗ?


ಕೊನೆಯದಾಗಿ "ಹೇಳಿ ಹೋಗು-ಕಾರಣ"=


ಕಾರಲ್ಲಿ ಹೋಗುವ ಮೊದಲು ಕಾರಿನ ಕನ್ನಡಿ ಇಳಿಸಿ "ನಮಸ್ತೆ, ಶಬ್ಬಖೈರ್" ಹೇಳಿ ಹೋಗುವುದು. :)


ವ್ಯಾ-ಕಾರಣ ಪಾಠ ೨ ಮುಗಿಯಿತು.


ಇನ್ನು  "ಅಪಘಾತ-ಕಾರಣ- ಅಗಲ ರಸ್ತೆ" ಬಗ್ಗೆ ನಾಳೆ ಬರೆಯುವೆನು.


-ಗಣೇಶ.

Rating
No votes yet

Comments