ಅ ಕಪ್ ಓಫ್ ಕಾಫಿ ... ಸಿಪ್ - ೪೧
ಸಿಪ್ - ೪೧
"ಕಾಫಿ ಕುಡಿಯುವ ಚಟ ಶುರು ಮಾಡಿಕೊಂಡಿದ್ದಿಯ ಕೆಲಸಕ್ಕೆ ಸೇರಿ ಕೊಂಡಾಗಿನಿಂದ" ಎಂದು ಗೊಣಗುತ್ತ ಅಮ್ಮ ದಿನದ ಮೂರನೇ ಕಪ್ ತಯಾರಿಸಿ ನನಗೆ ಕೊಡುತಿದ್ದರು ಹನ್ನೋದರ ಸುಮಾರಿಗೆ.
"ಹೌದಮ್ಮ ಏನ್ ಮಾಡ್ಲಿ ಆಫೀಸ್ ನಲ್ಲಿ ಫ್ರೀ ಸಿಕ್ಕುವುದು ಅಂದ್ರೆ ಕೆಲಸ ಮತ್ತು ಕಾಫಿ ಮಾತ್ರ" ಎಂದು ಉತ್ತರಕೊಟ್ಟೆ ಅಮ್ಮನಿಗೆ. ಇಬ್ಬರು ಅತ್ತೆಯಂದಿರು ಮತ್ತು ಚಿಕಮ್ಮಂದಿರು ಸೇರಿ ಮಧೂರಿಗೆ ಹೋಗಿದ್ದರು.ವರ್ಷಳಿಗೆ ಇವತ್ತೂ ನನ್ನ ಜೊತೆ ಹೋಗುವಂತೆ ಸಲಹೆ ನೀಡಿದ್ದರು ಮನೆಯವರು.ಮಧ್ಯಾಹ್ನ ಊಟ ಮುಗಿಸಿ ಬರುವ ಅವರು ಬೆಳಗ್ಗೆನೇ ಇಬ್ಬರಿಗೆ ಬಾಯ್ ಹೇಳಿ ದೇವಸ್ತಾನದ ದಾರಿ ಹಿಡಿದಿದ್ದರು.
ನನ್ನ ಉತ್ತರ ಕೇಳುತ್ತ ವರ್ಷ "ಏನೋ ಹುಡುಗೀರು ಇಲ್ವಾ ಆಫಿಸ್ ನಲ್ಲಿ, ಅವರೂ ಫ್ರೀ ಗೆ ಸಿಗ್ತಾರಲ್ಲ..."
"ಹುಡುಗೀರು ಫ್ರೀಗೆ ಸಿಗ್ತಾರೆ ನಿಜ, ಆದರೆ ಆ ಬಳಿಕ ಅವರಿಗೆ ವ್ಯಯಿಸುವ ಖರ್ಚು ತುಂಬಾ ದುಬಾರಿ, ಹುಡುಗೀನೂ ಬೇಡ ಏನು ಬೇಡ ಅನ್ಸುತ್ತೆ, ಅದಕ್ಕೆ ಬೋರ್ ಆದಾಗ ಕಾಫಿಯ ನೆನಪಾಗುತ್ತದೆ."
ನನ್ನ ಉತ್ತರ ಕೇಳಿ ಕುಡಿದು ಮುಗಿಸಿದ ಗ್ಲಾಸ್ ಹಿಡಿದು ಅಮ್ಮ ಒಳಗೆ ಹೋದರು.
ವರ್ಷಾ "ನಾನು ನೀನಾಗಿ ಅವಳ ಟಾಪಿಕ್ ತೆಗಿಯಲಿ ಅಂತ, ಆ ರೀತಿ ಮಾತಾಡಿದ್ರೆ ನೀನು ವೆಧಾಂತಿಯಂತೆ ಮಾತು ಶುರುಮಾಡಿದೆ... ಬುದ್ದಿ ಇಲ್ಲ ಕಣೋ ನಿನಗೆ" ಎಂದಳು.
"ಇಷ್ಟು ಬೇಗಾ ನಾ, ಬೇಡ ಅನ್ಸುತ್ತೆ, ನಾನಿನ್ನು ಸೆಟಲ್ ಆಗಿಲ್ಲ"
"ದೇವ್ರೇ... ನೀನು ಯಾವಾಗ ಸೆಟಲ್ ಆಗುವುದೋ..? ನೀನು ಯಾವಾಗ ಇನ್ನೊಬ್ಬಳಿಗೆ ತಾಳಿ ಕಟ್ಟಿ ನಿನ್ನ ಜೊತೆ ಸೇರಿಸಿ ಆಡುವ ಮಾತಿಂದ ಯಾವಾಗ ನನಗೆ ಮುಕ್ತಿ ಸಿಗುತ್ತದೋ ...? ದೇವರಿಗೆ ಗೊತ್ತು" ಅಂದಳು ವರ್ಷ.
ಅಡುಗೆ ಕೊನೆಯಿಂದ ಅಮ್ಮ "ವೈಭು ಹನ್ನೊಂದು ಮುಕ್ಕಲಾಯ್ತು, ನಿನಗೆ ಹಲ್ವಾ ಚಿಪ್ಸ್ ಬೆಕಂದಿದ್ದಿಯಲ್ಲ, ತೆಕೊಂಡು ಬಾ, ಮತ್ತೆ ಊಟ ಮಾಡಿ ಹೊರಡಬೇಕು.."
"ಆಯ್ತಮ್ಮ ಒಂದು ನಿಮಿಷ"
"ಅವಳ ಜೊತೆ ನಿಂಗೆ ತುಂಬಾ ಮಾತಾಡುವುದಿದೆ ಹೇಳಿ ನನಗೆ ಗೊತ್ತು, ಜೀವನ ಪೂರ್ತಿ ಅವಳೊಡನೆ ಮಾತಾಡುವಿಯಂತೆ, ಹೋಗಿ ತೆಕೊಂಡು ಬಾರೋ... ನನ್ನ ಅಡುಗೆ ಮುಗೀತು, ಒಗ್ಗರಣೆ ಹಾಕಿದ್ರೆ ಆಯ್ತು" ಎನ್ನುತ್ತಾ ಅಮ್ಮ ಕುದಿಯುತ್ತಿರುವ ಎಣ್ಣೆಗೆ ಸಾಸಿವೆ ಹಾಕಿದರು.
"ಅವಳಿಗೆ ಏನು ಬೇಕಂತ ಕೇಳು, ಹಾಸ್ಟೆಲ್ ನಲ್ಲಿ ಇರುವ ಹುಡುಗಿ,ಅದನ್ನು ತಂದು ಕೊಡು" ಎಂದಳು ಸಾಸಿವೆಯ ಶಬ್ದ ಕಮ್ಮಿಯಾಗುತ್ತಲೇ.
"ಗೂಬೆ ನಿನಗೆ ಏನ್ ಬೇಕು ಹೇಳು..."
"ಏನಾದ್ರೂ ಎರಡು ಬಗೆ ಕರಿದ ಐಟಂ ತೆಕೊಂಡು ಬಾ ಕಾಲ್ಕಾಲ್ ಕಿಲೋ" ಎಂದಳು ವರ್ಷಾ. ನಂತರ "ಗೂಬೆ ನಿನ್ನ ಮಂಗಳೂರ್ ..." ಎನ್ನುತ್ತಾ ಮೌನ ವಾದಳು.
ತಿರುಗಿದೆ. ಸುಮ್ಮನಾಗಿದ್ದಳು. ನಕ್ಕಳು. ನಾನು "ನನ್ನನ್ನು ಸಾಯಿಸ್ತೀಯ ನೀನು..." ಎನ್ನುತ್ತಾ ಸೈಕಲ್ ಏರಿದೆ.
ಮಗನ ಆಲಸ್ಯ ಗೊತ್ತಿದ್ದ ತಂದೆಯವರು ಮೊದಲೇ ಹೇಳಿ ಕಟ್ಟಿಸಿ ಕೊಂದು ಹೋಗಿದ್ದರು. ಬೇಕರಿಗೆ ಹೋಗುವಾಗ ಅವನು ಹೇಳಿದ "ತಂದೆಯವರು ಕಟ್ಟಿಸಿ ತೆಕೊಂಡು ಹೋಗಿದ್ದಾರೆ, ಹೇಗಿದ್ದೀಯ ವೈಭು" ಎಂದು ಮಾತಿಗೆ ನಿಂತ.
ನಾನು "ಚೆನ್ನಗಿದ್ದಿನೆ , ಏನೆಲ್ಲಾ ತೆಕೊಂಡು ಹೋದರು ..?"
"ಬಾಳೆ ಚಿಪ್ಸು, ಬಾಳೆ ಹಲ್ವಾ, ಯಾವಾಗಿನಂತೆ.." ಅಂದ.
"ಇನ್ನು ಕಾಲ್ಕಾಲು ಕಿಲೋ ಚಿಪ್ಸ್ ಮತ್ತು ಮಿಕ್ಷರ್ ಕೊಡೊ" ಅಂದೆ.
ಅವನು ತಿಂಡಿ ತುಗುತ್ತಾ "ಪುಣೆಯಲ್ಲಿ ಈ ಹಳ್ಳಿ ಬೇಕರಿಯ ಹೆಸರು ನೀನು ಪ್ರಚಾರ ಮಾಡ್ತಾ ಇದ್ದಿಯಂತೆ.." ಎಂದು ಮತ್ತೆ ಮಾತು ಶುರು ಮಾಡಿದ.
"ನಿಂಗೆ ಸಲ್ಪ ವ್ಯಾಪಾರ ಆಗ್ಲಿ ಹೇಳಿ ಗುರು ಅಣ್ಣ" ಎಂದೆ.
ಅದಕ್ಕವನು "ಪೇಟೆಯವರು ಲೆಜ್, ಗೀಜ್ ಹೇಳಿ ತಿನ್ನುವ ಜನ, ನಮ್ಮದು ಯಾರ್ ತಿಂತಾರೆ" ಎಂದು ಹತಾಶೆಯಲ್ಲಿ ನುಡಿದ.
"ನಿಮ್ಮದಕ್ಕೆ ಇದ್ದ ರುಚಿ ಅದಕ್ಕೆ ಬರಲು ಸಾಧ್ಯ ಇಲ್ಲ ಗುರು ಅಣ್ಣ" ಎಂದೆ ನಾನು. ಅವನು ನನ್ನ ಕೈಗೆ ಆ ಎರಡು ಐಟಂ ಅನ್ನು ಪ್ಲಾಸ್ಟಿಕ್ ನಲ್ಲಿ ಹಾಕಿ ಕೊಟ್ಟ.
ಹಣ ಕೊಡಲು, "ಬೇಡ ಬೇಡ ತಂದೆಯವರ ಲೆಕ್ಕಕ್ಕೆ ಸೇರಿಸ್ತೇನೆ... "ಅಂದ
"ಮರತ್ರೆ...?"
"ಪರವಾಗಿಲ್ಲ ನಮ್ ಹುಡುಗ ಅಲ್ಲ ನೀನು " ಎಂದರು.
ಮುಗುಳ್ನಕ್ಕೆ, ಅವರು "ಇನ್ಯಾವಾಗ...?"
ಆ ಡೆಮೆಜರ್ ಯಾವಾಗ ಒಪ್ತಾನೆ ಆವಾಗ.. ಇನ್ನೊಮ್ಮೆ ಸಿಗೋಣ "ಎಂದು ಸೈಕಲ್ ಅನ್ನು ನಮ್ಮ ಅಂಗಡಿಯೆಡೆಗೆ ಹಾಯಿಸಿದೆ.
ತಂದೆಯವರು "ಬುದ್ದಿ ಇಲ್ಲ ನಿನಗೆ ಹನ್ನೆರಡಾಯಿತು, ಯಾವಾಗ ಹೊರ್ಡ್ತೀಯ...ತಕೋ ಸೀದಾ ಮನೆಗೆ ಹೋಗು ...ಇನ್ನು ದಾರಿಯುದ್ದಕ್ಕೆ ಯಾರಾದ್ರೂ ಸಿಕ್ರು ಹೇಳಿ ಮಾತಾಡಿ ನಿಲ್ಲ ಬೇಡ" ಎಂದರು ತನ್ನ ಕೈಯಲ್ಲಿರುವ ಒಂದು ಕಿಲೋ ಚಿಪ್ಸ್ ಮತ್ತು ಹಲ್ವಾ ವನ್ನು ಸೈಕಲ್ ನ ಹೆಂಡಲ್ ಗೆ ಹಾಕುತ್ತ.
"ಹೋಗುವಾಗ ಬರ್ತೇನೆ, ಬಾಯ್ ಗೌರವ್" ಎನ್ನುತ್ತಾ ಪೆಡಲ್ ಮೆಟ್ಟಿದೆ.
ಮನೆಗೆ ತಲುಪುವಾಗ ಅಮ್ಮ ಮತ್ತು ವರ್ಷನ ನಡುವೆ ಸಂಭಾಷಣೆ ಮುಂದುವರೆದಿತ್ತು.
"ವೈಭು ಗೆ ನಾನು ಒಪ್ಪಿಸ್ತೇನೆ, ನಿನಗೆ ಅವನು ಇಷ್ಟ ಇದ್ದಾನ ಹೇಳು... ನಮಗೆ ನೀನು ಇಷ್ಟ ಆಗಿದ್ದಿಯ" ಎಂದು ಅಮ್ಮ ಅವಳನ್ನು ಕೆಳುತಿದ್ದರು.
ವರ್ಷ "ಅತ್ತೆ, ಹಾಗಲ್ಲ, ಅವನ ಟೆಸ್ಟ್ ಬೇರೆ ಇದೆ"
"ನಿಂಗೆ ಅವನು ಇಷ್ಟ ಇದ್ದನಾ...? ಇಲ್ಲ ಹೇಳಿ ಹೇಳು..." ಎಂದು ಅಮ್ಮ ಅವಳ ಅಭಿಪ್ರಾಯ ಕೇಳುತಿದ್ದಳು.
"ಇಷ್ಟಾನೆ, ಆದ್ರೆ ಬೇಡ ಅತ್ತೆ, ಸಂಭಂದ ದೊಳಗಿನ ಸಂಭಂದ" ಅಂದಳು ವರ್ಷ
"ಅವ ಬರಲಿ ನಾನೇ ಕೇಳ್ತೇನೆ ಅವನ ವಿಷಯ"
"ಬೇಡ ಅತ್ತೆ ಈಗ ಬೇಡ, ಅವನಿಗೆ ನೆಂಟಸ್ತಿಕೆ ನೋಡಲು ಶುರುಮಾಡಿದ ಬಳಿಕ ಕೇಳಿ"
"ಈಗಲೇ ಕೇಳ್ತೇನೆ, ಇವತ್ತಿಂದಲೇ ನೆಂಟಸ್ತಿಕೆ ಶುರು ಮಾಡಿದರಾಯಿತು, ಹೇಗೂ ಎಲ್ಲರು ಇಲ್ಲಿದ್ದಾರೆ..."
"ಒಂದು ವರ್ಷ ಹೋಗಲಿ ಅತ್ತೆ..."ಎಂದು ವರ್ಷ ಪ್ರೊಪೋಸಲ್ ಮುಂದೆ ಹಾಕಿದಳು.
"ನಿನಗೂ ಆಸೆ ಇದೆ ಅದಕ್ಕೆ ನೀನು ಒಂದು ವರ್ಷ ಮುಂದೆ ಹಾಕು ಅಂತಿದ್ದಿಯಲ್ಲ... ಪರವಾಗಿಲ್ಲ ನಿಂದು ಓದಿ ಆಗ್ಲಿ, ಬಳಿಕ ಕೇಳ್ತೇನೆ" ಎಂದು ಅಮ್ಮ ಹೇಳಿದರು.
"ಅವನು ಕೇಳಿದ್ರೆ ನಮ್ಮ ಮಾತು..?"
"ಎಲ್ಲಿ ಕೇಳ್ತಾನೆ.. ಯಾರಾದ್ರು ದಾರಿಯಲ್ಲಿ ಸಿಕ್ರೆ ಮಾತಾಡ್ತಾ ನಿಲ್ತಾನೆ... ಬಸ್ಸಿಗೆ ಹತ್ತು ನಿಮಿಷ ಇರುವಾಗ ಬಂದು ಕೈ ಕಾಲು ಬಡಿತಾನೆ ನೋಡು, ಇಷ್ಟು ಬೇಗ ಬರಲ್ಲ" ಎಂದು ನನ್ನ ಮಾಮೂಲಿ ವರಸೆಯನ್ನು ಸೋದರ ಸೊಸೆಗೆ ವಿವರಿಸುತಿದ್ದರು ಅತ್ತೆ.
ಜಗಲಿಯ ಮೇಲೆ ತಂದ ಸಾಮಾನಿನ ಚೀಲ ಇಟ್ಟು ಬಚ್ಚಲಿಗೆ ಹೋಗಿ ಕೈಕಾಲು ತೊಳೆದು ಒಳಗೆ ಬಂದೆ.
ಅಮ್ಮ "ಏನೋ ಯಾರು ಸಿಕ್ಕಿಲ್ವಾ ಮಾತಾಡ್ಲಿಕ್ಕೆ, ಬೇಗ ಬಂತು ಸವಾರಿ..."
"ಮಾತಾಡ್ಲಿಕ್ಕೆ ತುಂಬಾ ಜನ ಇದ್ರೂ , ಆದ್ರೆ ನಿಮ್ಮ ಯಜಮಾನ್ರು , ನನ್ನ ಜನ್ಮದಾತ ಆರ್ಡರ್ ಮಾಡಿದ್ದ ಸೀದಾ ಮನೆಗೆ ಹೋಗು ಹೇಳಿ ಅದಕ್ಕೆ ಒಂದೇ ಉಸಿರಲ್ಲಿ ಬಂದೆ" ಎಂದು ನೀರು ಕುಡಿದೆ.
"ನೀರು ಕುಡಿಬೇಡ, ಉಟಕ್ಕೆ ಕೂತ್ಕೋ, ವರ್ಷಾ ನೀನು ಕೂತ್ಕೊಳಮ್ಮ..." ಎಂದು ಟೇಬಲ್ ಮೇಲೆ ಎರಡು ಎಲೆ ಹಾಕಿದರು.
"ನೋಡೇ ಇವರಿಗೆ ನಾನು ಊರಿನವರ ಹತ್ರ ಮಾತಾಡುವುದೇ ಪ್ರಾಬ್ಲಮ್... ಜೊತೆಗೆ ಬೆಳೆದ ಜನ ಹೇಳಿ ಮಾತಾಡ್ತೇನೆ, ಮಾತಾಡಿದ್ರೆ ನನ್ನ ಗಂಟೇನು ಉದುರುತ್ತಾ ...? ಇವರು ಹೇಳಿದ ಹಾಗೆ ಮಾತಾಡದೆ ಬಂದ್ರೆ ಅವರು 'ರಾಯರ ಮಗ ಎಂಜಿನೀರ್ ಆದದ್ದೇ, ಎಲ್ಲಿಂದಲೋ ಬಂದಂತೆ ಆಡ್ತಾನೆ, ಲೋಕ ಕಾಣುದಿಲ್ಲ'ಅಂತ ಆಡ್ಕೊಳ್ತಾರೆ.. ಅದರಕ್ಕಿಂತ ಬಂದಾಗ ಎಲ್ಲರಿಗೆ ಒಂದು ಸರ್ತಿ ಮುಖತೋರಿಸಿ ಮಾತಾಡಿದ್ರೆ ಎಲ್ಲ ಪ್ರಾಬ್ಲಮ್ ಸಾಲ್ವ್ ..." ಅಂದೆ ವರ್ಷಳಲ್ಲಿ.
"ಜೀನಿಯಸ್ ಕಣೋ.. ನೀನು, ಎಷ್ಟೆನ್ದರೂ ನೀನು ನನ್ನ ವೈಭು ಅಲ್ಲಾ " ಎಂದಳು ವರ್ಷ..
ಗ್ಲಾಸಿಗೆ ಮಜ್ಜಿಗೆ ಸುರಿಸುತ್ತ ಅಮ್ಮ ಕಳ್ಳ ಕೆಮ್ಮು ಕೆಮ್ಮಿದರು.....
**************
ಊಟ ಮುಗಿಸಿ ಬ್ಯಾಗನ್ನು ಹೆಗಲಿಗೆರಿಸಿದೆ, ವರ್ಷಳೂ ತನ್ನ ಕಾಲೇಜ್ ಬ್ಯಾಗ್ ನಲ್ಲಿ ತಂದ ಕರಿದ ತಿಂಡಿ ಹಾಕಿ ರೆಡಿಯಾದಳು. ಅಮ್ಮನ ಮುಖ ಬಾಡಿತ್ತು. ಕಾಲಿಗೆ ಬಿದ್ದು ನಮಸ್ಕರಿಸಿದೆ. ಅವಳು ನನ್ನನ್ನು ಅನುಸರಿಸಿದಳು.
"ಇನ್ಯಾವಾಗ ಮಗನೆ...?" ಅಂದರು ಅಮ್ಮ ಎಂದಿನಂತೆ.
"ನೋಡೋಣ ಅಮ್ಮ ಅವರು ಬಿಟ್ಟಾಗ ಬರ್ತೇನೆ..."ಅಂದೆ
"ಬೇಗ ಬೆಂಗಳೂರು ಸಿಗಲಿ ನಿನಗೆ, ಆವಾಗ ನೆನಸಿದಾಗ ಬರಬಹುದು ಆಲ್ವಾ" ಅಂದರು ಅಮ್ಮ.
"ಬೆಂಗಳೂರಲ್ಲಿ ಇದ್ರೆ ಪ್ರತಿವಾರ ಬರಬಹುದು ಅಮ್ಮ ,ಶುಕ್ರವಾರ ಅಲ್ಲಿ ಕುಳಿತರೆ ಶನಿವಾರ ಬೆಳಗ್ಗೆ ಇಲ್ಲಿ ಬಂದು ನಿನ್ನ ಪಾಂಡುರಂಗ ಕಾಫಿ ಕುಡಿಯಬಹುದು !!" ಎಂದೇ.
"ಇವನಿಗೆ ಬರೀ ಕಾಫಿ ದೇ ಧ್ಯಾನ" ಎನ್ನುತ್ತಾ ಹಣೆ ಒತ್ತಿಕೊಂಡರು.
ಶೂ ಹಾಕಿ ಒಮ್ಮೆ ಅವರನ್ನು ನೋಡಿದೆ, ಮತ್ತೆ ತಿರುಗಲಿಲ್ಲ. ತಿರುಗಿ ನೋಡುವ ಧೈರ್ಯ ನನ್ನಲ್ಲಿಲ್ಲ, ಯಾಕಂದ್ರೆ ಆ ಸಮಯಕ್ಕೆ ಅಲ್ಲಿ ಮಾತೃಹೃದಯ ತಾಂಡವ ನೃತ್ಯ ಮಾಡುತ್ತಿರುತ್ತದೆ.
ವರ್ಷ ನನ್ನ ಹಿಂದೆಯೇ ಬರುತ್ತಿದ್ದಳು.
ಅಮ್ಮ ಅವಳಲ್ಲಿ "ವರ್ಷಾ ಅವನನ್ನು ಕೇಳಿ ನೋಡು..." ಎಂದು ಹೇಳಿದರು.
"ಸರಿ ಅತ್ತೆ, ಕೇಳ್ತೇನೆ, ಇಲ್ಲೇ ಕೇಳ್ಲಾ ...?" ಎಂದು ತಿರುಗಿ ನೋಡಿದಳು.
"ಬೇಡ ಬೇಡ ಅವನು ಸೆಟ್ಟಲ್ ಆಗ್ಲಿ" ಎಂದು ಅಮ್ಮ ನಕ್ಕರು.
ಓಣಿ ಬಿಟ್ಟು ರೋಡಿಗೆ ಬಂದಾಗ ನಾನು "ಏನಂತೆ ಅತ್ತೆ ಸೊಸೆಯ ಹತ್ತಿರ...?" ಎಂದೆ.
ಅವಳು "ಅತ್ತೆ ಅಲ್ಲ ಸೋದರತ್ತೆ ಅನ್ನು, ಸೋದರ ಸೊಸೆ ಅನ್ನು" ಎಂದು ಅವಳು ನಕ್ಕಳು.
ಇಬ್ಬರು ಬಿಸಿಲಲ್ಲಿ ನಡೆಯುತ್ತಲಿದ್ದೆವು. ದಾರಿಯುದಕ್ಕು ಅವಳು ತನ್ನ ಕಾಲೇಜ್ ನ ಆಗು ಹೋಗು ವಿವರಿಸುತಿದ್ದಳು, ಆಕೃತಿ ಬಗ್ಗೆ ಕೆಳುತಿದ್ದಳು. ನಾನು ಎಲ್ಲ ವಿಚಾರ ಅವಳಲ್ಲಿ ಹೇಳಿದೆ.
ನನ್ನಲ್ಲಿ "ಮಿಸ್ ಮಾಡ್ಕೋತಾ ಇದ್ದಿಯಾ...?"
"ಹಮ್ ತುಂಬಾ ಇಟ್ಸ್ ೨೦೪ ಡೆಯ್ಸ್ ನೌ" ಎಂದೆ.
ಅವಳು "ಮಾತ್ಸ್ ನಲ್ಲಿ ತುಂಬಾ ಮುಂದೆ ಇದ್ದೀರಿ... ಕೀಪ್ ಇಟ್ ಅಪ್ ಹೋಗ ಬಹುದಿತಲ್ಲ ಚೆನ್ನೈಗೆ ಒಂದು ಸರ್ತಿ"
"ಕಾರಣ ವಿಲ್ಲದೆ ಹೇಗೆ ಹೋಗ್ಲಿ ನೀನೆ ಹೇಳು" ಅಂದೆ.
"ಕಾರಣ ಮಾಡ್ಕೊಳ್ಬೇಕಪ್ಪಾ"
"ನೋಡೋಣ, ಅವಳ ಬರ್ತ್ಡೆಯ್ ಇದೆ ಬರುವ ತಿಂಗಳು ಆಗ್ಲೇ ಹೋಗ್ತೇನೆ"
"ಪ್ರೇಮಿಗೆ ನಮೋ ನಮಃ... ಯಾವಾಗಪ್ಪ ನಿನ್ನ ಮದುವೆ ಊಟ ನನಗಾದರೂ ಹೇಳೋ"
"ಮೊದಲಿಗೆ ನಾನು ಬೆಂಗಳೂರಲ್ಲಿ ಕೆಲಸ ಹುಡುಕಬೇಕು, ಕೆಲಸ ಸಿಕ್ಕಿ ಆದ್ಮೇಲೆ ಬೆಂಗಳೂರು ಅರ್ಥ ಮಾಡ್ಕೊಳ್ಬೇಕು, ಅದಾದ ಬಳಿಕ ಅಪ್ಪ ಅಮ್ಮನ ಅಲ್ಲಿ ಕರ್ಕೊಂಡು ಹೋಗ್ಬೇಕು, ಅದಾದ ಬಳಿಕ ಮದುವೆ ಗಿದುವೆ ಎಲ್ಲಾ..."
"ದೊಡ್ಡ ಪ್ರೋಜೆಕ್ಟೆ ಇದೆ ನಿನ್ನ ಮುಂದೆ"
"ಹೌದು ಯಾವಾಗ ಅದು ನೆರವೆರುತ್ತೋ ಗೊತ್ತಿಲ್ಲ..."
"ಯಾಕೋ ನಿರಾಶೆ ಯಲ್ಲಿದ್ದಿಯಾ ..? ನಿಂದು ಎರಡು ವರ್ಷ ಆಯ್ತಲ್ಲ, ಶುರುಮಾಡು ಕೆಲಸ ಹುಡುಕಲಿಕ್ಕೆ... ಅರಾಮಾಗೆ ಸಿಕ್ಕುತ್ತೆ ಕೆಲಸ"
"ಹೌದು ಹಾಗೆ ಅನ್ಕೊಂಡಿದ್ದೆ, ಆದ್ರೆ ಈಗ ಗೊತಾಯ್ತು ನಾವು ಅನ್ಕೊಂದದಷ್ಟು ಸುಲಭ ಇಲ್ಲ ಹೇಳಿ..."
"ಏನಾಯ್ತು ವೈಭು"
"ಪೇಟೆ ಬಂತು ಮತ್ತೆ ಹೇಳ್ತೇನೆ" ಎಂದು ಮಾತನ್ನು ಮದ್ಯದಲ್ಲಿ ನಿಲ್ಲಿಸಿದೆ.
ತಂದೆ ಚಿಕ್ಕಪ್ಪನಲ್ಲಿ ಆಶೀರ್ವಾದ ಪಡೆದು ಗೌರವ್ ಗೆ ಬಾಯ್ ಹೇಳುತ್ತಾ ಹೊರ ಬಂದೆ, ಅವಳು ಅದನ್ನೇ ಮಾಡಿದಳು, ಚಿಕಪ್ಪ "ವರ್ಷಾ ದುಡ್ಡಿದೆಯಾ...?" ಎಂದು ಕೇಳಿದರು.
"ಇದ್ದನಲ್ಲ ಫೈನೇನ್ಶಿಯರ್ ಜೊತೆಯಲ್ಲಿ" ಎಂದಳು.
ಇಬ್ಬರು ಅಲ್ಲಿಂದ ಮಂಗಳೂರಿಗೆ ಬರುವ ಬಸ್ ಹಿಡಿದುಕೊಂಡೆವು. ಲೋಕಲ್ ಗಣೇಶ್ ಪ್ರಸಾದ್ ಎಂದಿನಂತೆ ತುಂಬಿತ್ತು, ಖಾಲಿಯಾದ ಮೀನಿನ ಬುಟ್ಟಿ ನನ್ನ ಅಮೇರಿಕನ್ ಟ್ಯೂರಿಸ್ಟರ್ ಬಳಿಯಲ್ಲಿ ಸುವಾಸನೆ ಬೀರುತ್ತಿತ್ತು, ಹಲವು ಬೀಡಾದ ಕಲೆಗಳು ರೋಡ್ ಮೇಲೆ ಚೆಲ್ಲುತಿದ್ದವು. ಅವಳು ಎದುರಲ್ಲಿ ಸೀಟ್ ಸಿಕ್ಕಿ ಅಲ್ಲಿ ಕುಳಿತಿದ್ದಳು, ಜೊತೆಯಲ್ಲಿ ಹತ್ತಿದ ನಾನು ಕಂಡೆಕ್ಟರ್ ನ ಹಿಂದೆ ಹೋಗಿ ಹಿಂದೆ ಹೋಗಿಗೆ ಕಡೆ ಸಾಲಿನ ಸೀಟ್ ನ ಹತ್ತಿರ ತಲುಪಿದ್ದೆ, ನಡುವಲ್ಲಿ ಹತ್ತುಮಂದಿ ಇನ್ನೊಬ್ಬರ ದೇಹದ ಮೇಲೆ ತಮ್ಮ ಭಾರ ಹಾಕಿ ಬಾಲೆನ್ಸ್ ಮಾಡುತಿದ್ದರು. ಮಂಗಳೂರು ತಲಪುವಾಗ ಸಾಕು ಸಾಕಾಯ್ತು.
ಬಿಜೈ ಗೆ ಬಂದು ರಾಜಹಂಸದಲ್ಲಿ ವಿರಾಜಮಾನನಾದಾಗ ಮತ್ತೆ ಹುರುಪು ಬಂತು.
ವರ್ಷ ಪಕ್ಕದ ಸೀಟ್ನಲ್ಲಿ ಕುಳ್ತಿದ್ಲು.
"ಎಲ್ಲಿದ್ದಿಯೋ ವೈಭು ಬಸ್ ನಲ್ಲಿ,ಮೀನು ಮಾರಲಿಕ್ಕೆ ಹೋಗಿದ್ದಿಯೋ ಹೇಗೆ...?" ಎಂದಳು.
"ಯಾಕಮ್ಮ ಹಾಗೆ ಕೆಳ್ತಿದ್ದಿಯ, ಅಲ್ಲೇ ಇದ್ನಲ್ಲ ...ನಿನ್ನನ್ನು ಮತ್ತು ಲಗೇಜ್ ನೋಡ್ತಾ !!"
"ಮೀನಿನ ವಾಸನೆ ಬರ್ತಾ ಇದೆ, ಗೊತ್ತಾಗುತ್ತೆ ನೀನು ಮಂಗಳೂರಿನವನು ಹೇಳಿ" ಎಂದು ಗೇಲಿಮಾಡಿದಳು.
"ಏನ್ ಮಾಡ್ಲಿ, ಬಾಯಮ್ಮ ಬಸ್ನಿಂದ ಇಳ್ದು ಬುಟ್ಟಿ ಕೊಡು ಎಂದು ಹೇಳಿದಳು, ಅವಳ ತಲೆ ಮೇಲೆ ಇಟ್ಟಾಗ, ನನಗೂ ಸಣ್ಣ ಮಟ್ಟಿನ ಸ್ನಾನ ಆಯ್ತು" ಎಂದು ನಕ್ಕೆ.
ಅವಳು "ಆಗ ಮಾತು ಅರ್ಧಕ್ಕೆ ನಿಂತಿತಲ್ಲ ಹೇಳು ನಿನ್ ಕಥೆ" ಅಂದಳು
"ಐ ಟಿ ಲೈಫ್ ನಾನು ಅಂದುಕೊಂಡ ರೀತಿ ಇಲ್ಲ ಕಣೇ ಹೊರಗಿನಿಂದ ಎಲ್ಲ ಚಂದ,ಒಳಗೆ ಅದೇ ಹಳಸುತನ... "
"ಏನಾಯ್ತೋ, ಇನ್ನೂ ಹೊರಗೆ ಬಂದಿಲ್ವಾ ನಿನ್ನ ಅಪ್ರೈಸಲ್ ನಿಂದ"
"ಅದರಿಂದ ಹೇಗೆ ಹೊರಗೆ ಬರಲಿ ಹೇಳು,ಆ ರೀತಿ ಅದು ನನಗೆ ಹೊಡೆತ ಕೊಟ್ಟಿದೆ"
"ನಿನ್ನ ಮನೆಯವರಿಗೆ ಹೇಳ್ಲಿಲ್ವಾ ..?"
"ಅಮ್ಮನಿಗೆ ಮತ್ತು ನಿನಗೆ ಮಾತ್ರ ಗೊತ್ತು ಆದಿನ ನನ್ನೊಡನೆ ಆದ ಕಥೆ. ಅವರು ಬೇರೆ ಯಾರಿಗೂ ಹೇಳಲಿಲ್ಲ, ಈವನ್ ನನ್ನ ಅಕ್ಕನಿಗೆ ಗೊತ್ತಿಲ್ಲ ಆದ ವಿಚಾರ, ಯಾರಾಗಿ ಕೇಳಿದರೆ ಇನ್ನು ಎರಡೇ ವರ್ಷ ಅಲ್ಲ, ಆಗುತ್ತೆ ಮುಂದಿನ ವರ್ಷ ಅಂತಾರೆ, ಅಷ್ಟೇ"
"ಹೌದು, ಆಗಲಿಲ್ಲ ಹೇಳಿ ಕೊರಗಿದ್ರೆ, ಇನ್ನೂ ನೂರು ಪ್ರಶ್ನೆ ಕೇಳಲು ಶುರುಮಾಡುತ್ತಾರೆ, ಅದರಕಿಂತ ನಮ್ಮಷ್ಟಕ್ಕೆ ಸುಮ್ಮನಿರುವುದು ಮೆಲಲ್ಲವಾ...?"
ನಾನು ಸುಮ್ಮನಿದ್ದೆ.
ಅವಳು ಮುಂದುವರಿಸಿದಳು "ಬೇರೆ ಕಂಪೆನಿ ಟ್ರೈ ಮಾಡ ಬಹುದಿತ್ತಲ್ಲಾ...?"
"ಟ್ರೈ ಮಾಡಿದ್ನೇ , ಆದ್ರೆ ಆಗ್ಬೇಕಲ್ಲಾ, ನನಗೆ ಎಕ್ಸ್ಪೀರಿಯನ್ಸ್ ಇರುವುದು ಸ್ಪೆಷಲ್ ಸ್ಕಿಲ್ನಲ್ಲಿ,ಅದು ಕಂಪೆನಿಗೆ ರೆವೆನ್ಯೂ ಏನೋ ಒಳ್ಳೆದಾಗಿ ತಂದು ಕೊಡುತ್ತೆ, ಆದರೆ ಒಪೆನಿಂಗ್ಸ್ ಕಮ್ಮಿ ಅಂತದ್ರಲ್ಲಿ. ಎಲ್ಲಿಯಾದರೂ ತಿಂಗಳಿಗೆ ಒಂದು ಎರಡು ಕಾಲ್ ಬರುತ್ತೆ, ಅದು ಆದ್ರೂ ಸರಿ ಹೇಳಿ ಅಲ್ಲಿ ಹೋದಾಗ ಕಂಸಲ್ಟೆನ್ಸಿ ಯವರು ಶೂರಿಟಿ ಕೇಳ್ತಾರೆ, ಎಕ್ಸ್ಪೀರಿಯನ್ಸ್ ಇದ್ದು ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳಬೇಕು, ಅದಕ್ಕೆ ಅಂಥವು ಬೇಡ ಅನ್ಸುತ್ತೆ.."
"ನೀನು ಬೇರೆ ಕಂಪೆನಿಗೆ ಟ್ರೈ ಮಾಡುವ ವಿಚಾರ ಮನೆಯಲ್ಲಿ ಗೊತ್ತಾ ...?"
"ಮೊದಲು ಹೇಳ್ತಿದ್ದೆ, ಈಗ ಹೇಳುವುದನ್ನು ಬಿಟ್ಟೆ, ಯಾಕಂದ್ರೆ ಅವರು ನನಗಿಂತ ಮಾತ್ಸಲ್ಲಿ ಹುಶಾರಿದ್ದರೆ, ನಿನ್ನ ಇಷ್ಟು ಕಂಪೆನಿ ಆಯಿತು ಒಂದರಲ್ಲೂ ಸೆಲೆಕ್ಟ್ ಆಗಿಲ್ಲ ಯಾಕೋ ಅಂತ ಕೇಳ್ತಾರೆ, ಅದಕ್ಕೆ ಈಗ ಹೇಳುವುದನ್ನು ನಿಲ್ಲಿಸಿದೆ"
"ಟೋಟಲ್ ಎಷ್ಟು ಕೊಟ್ಟಿದ್ದಿಯ ಇಲ್ಲಿ ವರೆಗೆ ಇಂಟರ್ವ್ಯೂ..?"
"ಏಳು ...?"
"ಏಳಾಗಿ ಇನ್ನೂ ಆಗಿಲ್ವಾ ನಿಂದು" ಎಂದು ಹುಬ್ಬು ಮೇಲೆ ಮಾಡುತ್ತಾ ವರ್ಷ.
"ಹೇಳುವುದು ಕೇಳು, ಕೊಡಲಿಕ್ಕೆ ಏಳು ಕೊಟ್ಟಿದ್ದೇನೆ, ಆದ್ರೆ ಎಲ್ಲ ನನ್ನ ಸ್ಕಿಲ್ ನದ್ದು ಅಲ್ಲ, ಒಂದು ನನ್ನ ಸ್ಕಿಲ್ ನದ್ದಾಗಿತ್ತು, ಸೆಲೆಕ್ಟ್ ಆಗಿ ಎಚ್, ಆರ್ ವರೆಗೆ ಹೋಗಿದ್ದೆ ಆದ್ರೆ ನಾನೇ ಕೊನೆಗೆ ಬೇಡ ಎಂದು ಬಿಟ್ಟೆ..?"
"ಯಾಕೋ..?"
"ಹೈದರಾಬಾದ್ ಅಂದ್ರು, ಅಲ್ಲಿ ಹೋಗಿ ಯಾರು ಸಾಯ್ತಾರೆ...?"
"ಸೇರ್ಬಹುದಿತಲ್ಲಾ ..."
"ನೋಡು ಈಗ ನಾನು ಓಕೆ ಹೇಳಿ ಹೋದ್ರೆ ಮಿನಿಮಮ್ ಎರಡು ವರ್ಷ ಅಲ್ಲಿ ಇರಬೇಕಾಗುತ್ತೆ, ಅದರ ಮುಂಚೆ ಕಂಪೆನಿ ಬದಲಾಯಿಸಿದ್ದರೆ ನನ್ನ ಕೆರಿಯರ್ಗೆ ತೊಂದರೆ, ಅಲ್ಲಿ ಹೋದೆ ಅಂತ ಇಟ್ಕೋ ಅಲ್ಲಿ ಅರ್ಥೈಸಿಕೊಳ್ಳಲು ಸಮಯ ಹಿಡಿಯುತ್ತೆ, ನನ್ನ ತಂದೆ ತಾಯಂದಿರನ್ನು ಅಲ್ಲಿ ಕೊಂಡು ಹೋಗಿ ಮನೆಯಲ್ಲಿ ಇಡುವಂತೆ ಇಲ್ಲ; ಅವರನ್ನು ಇಲ್ಲೇ ಬಿಟ್ಟಿರಬೇಕು. ನಾನಲ್ಲಿ ಅವರಿಲ್ಲಿ; ಅದರಕ್ಕಿಂತ ಬೆಂಗಳೂರನ್ನು ಪ್ರೆಫೆರ್ ಮಾಡ್ತಾ ಇದ್ದೇನೆ, ಬೆಂಗಳೂರು ಸಿಕ್ಕರೆ ಅಲ್ಲಿ ನಮ್ಮವರು ಎನ್ನುವ ತುಂಬಾ ಮಂದಿ ಇದ್ದಾರೆ. ವಾರ ಇಡಿ ಪಂಜರದ ಗಿಳಿಯಾಗಿ ಫ್ಲಾಟ್ನಲ್ಲಿ ಬಂದಿಯಾದ ಹೆತ್ತವರು ವಾರಾಂತ್ಯದಲ್ಲಿ ಅವರನ್ನು ಭೇಟಿಯಾಗ ಬಹುದು, ಚಿಂತೆ ಮರಿಬಹುದು. ಮೇಲಾಗಿ ಬರೀ ಕನ್ನಡ ಗೊತ್ತಿರುವ ಹೆತ್ತವರಿಗೆ ನನ್ನ ಗೈರಿನಲ್ಲಿ ವ್ಯವಹರಿಸಲು ಸುಲಭವಾಗುವುದು."
"ಸಿಗ್ತದೆ ವೈಭು ತಲೆ ಕೆಡಿಸಿ ಕೊಳ್ಳ ಬೇಡ"
"ಥ್ಯಾಂಕ್ಸ್ ಕಣೇ..."
"ಮತ್ತೆ ನಿನ್ ಲವ್ ಸ್ಟೋರಿ ಹೇಳು ಏನಂತಾರೆ ನಿನ್ನ ತಮಿಳ್ ಮಾವಂದಿರು..?" ಅಂದಳು ವರ್ಷಾ.
ಏನೂ ಇಲ್ಲ "ಆಕೃತಿಗೆ ಮದುವೆಯ ತಯಾರಿ ನಡೆಸುತಿದ್ದಾರಂತೆ ... ನಾನೇ ಬಂದು ಸುಧಾರಿಸ ಬೇಕು ಅಂತ ಕೇಳಿ ಕೊಳ್ಳುತಿದ್ದರು.."
"ಮದುವೆನಾ ...?ನೀನಿನ್ನೂ ಸೆಟಲ್ ಆಗ್ಲಿಲ್ಲ!!!"
"ನನ್ಜೊತೆ ಅಲ್ಲ... ಹೇಳಿದ್ನಲ್ಲಾ ವರ್ಷದ ಹಿಂದೆ ಸುನಿಲ್ ಹೇಳಿ, ಅವನು ಈ ಬೇಸಿಗೆಗೆ ಎಮ್ಮೆಸ್ ಮುಗಿಸಿ ವಾಪಸ್ಸು ಬರ್ತಿದ್ದಾನೆ, ಅವನ ಜೊತೆ"
"ಅಂದ್ರೆ ನಿಂದು ಎಳ್ಳು ನೀರಾ ...?"
"ಗೊತ್ತಿಲ್ಲ, ಅವಳನ್ನು ಬಿಟ್ಟಿರಲಿಕ್ಕೆ ಆಗುವುದಿಲ್ಲ, ಆದ್ರೆ ನಾನು ಸೆಟ್ಟಲ್ ಆಗದೆ ಹೇಗೆ ಒಪ್ಪಿಸಲಿ ನನ್ನ ಮನೆಯವರನ್ನೂ, ಅವಳ ಮನೆಯವರನ್ನೂ..."
"ಪ್ರಯತ್ನ ಪಡು ವೈಭು, ನಿನ್ನ ಪ್ರೀತಿ ನೀನು ಪಡೀಬೇಕು ಅಂದ್ರೆ, ನೀನು ಮಾಡಲೇ ಬೇಕು"
"ನೋಡೋಣ ಏನಾಗ್ತದೆ ಹೇಳಿ... ನಿನಗೆ ಲವರ್ ಸಿಕ್ಕಿದ್ನಾ.. ಇನ್ನ ದಾಸಿಯಾಗಿ ಇದ್ದಿಯಾ...?"
"ಇಲ್ಲ , ಲವರ್ ಗಿವರ್ ಯಾರು ಬೇಡ, ಮನಸಲ್ಲಿ ಇದ್ದವ ಬೇರೆಯಾರನ್ನೋ ಇಷ್ಟ ಪಡ್ತಾನೆ .. ಅದಕ್ಕೆ ಬೇರೆಯವರನ್ನು ಹುಡುಕಲು ಮನಸಿಲ್ಲ"
"ಯಾರಮ್ಮ ಅವನು ...? ನನಗೆ ಹೇಳೇ ಇಲ್ಲ !!"
"ಈಗ ಬೇಡ ಸಮಯ ಬಂದಾಗ ಹೇಳ್ತೇನೆ, ನಿನ್ನ ಭುಜದ ಮೇಲೆ ಮಲಗ್ಲಾ...?" ಎಂದು ತಲೆ ಜಾರಿಸಿದಳು ವರ್ಷ.
"ಪರವಾಗಿಲ್ಲ "ಎನ್ನುತ್ತಾ ಅವಳ ತಲೆಯನ್ನು ಸವರಿದೆ. ಇಬ್ಬರಿಗೂ ನಿದ್ದೆ ಹತ್ತಿತು.
ರಾತ್ರಿಯ ೧೧ ೩೦ ಕ್ಕೆ ಬೆಳಗಾವಿ ತಲುಪಿದಾಗ ನಿದ್ದೆಯಲ್ಲಿ ಅವಳು ನನ್ನನು ತಬ್ಬಿ ಮಲಗಿದ್ದಳು, ನನ್ನ ಹೆಸರನ್ನು ಕನವರಿಸುತಿದ್ದಳು. ಅವಳ ಮನಸ್ಸಿನ ಮಾತು ಅವಳ ಅರಿವಿಗೆ ಬಾರದೆ ನಂಗೆ ತಿಳಿದಿತ್ತು.
ಅವಳು ಇಳಿದು ಹೋದ ಮೇಲೆ ದೊಡ್ಡ ದೊಂದು ಪ್ರಶ್ನೆ ನನ್ನ ತಲೆಯಲ್ಲಿ ನೆತಾಡುತಿತ್ತು.
ಮೌನದಲ್ಲಿ ನಿವೇದಿಸಿದ ಆಕೃತೀನಾ ಇಲ್ಲ, ಕನಸಲ್ಲಿ ಕನವರಿಸಿದ ವರ್ಷಾನಾ ...?
ಸುನಿಲನಿಗಾಗಿ ತ್ಯಾಗ ಮಾಡಲಾ..?? ಮನೆಯವರಿಗಾಗಿ ಹೊಸ ಪ್ರೀತಿ ಶುರು ಮಾಡಲಾ ...??
Comments
ಉ: ಅ ಕಪ್ ಓಫ್ ಕಾಫಿ ... ಸಿಪ್ - ೪೧
ಉ: ಅ ಕಪ್ ಓಫ್ ಕಾಫಿ ... ಸಿಪ್ - ೪೧
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೪೧ by krishnarajb
ಉ: ಅ ಕಪ್ ಓಫ್ ಕಾಫಿ ... ಸಿಪ್ - ೪೧
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೪೧ by kamath_kumble
ಉ: ಅ ಕಪ್ ಓಫ್ ಕಾಫಿ ... ಸಿಪ್ - ೪೧