ಮೂಳೆ ಮಂದಿರ!

ಮೂಳೆ ಮಂದಿರ!

 ಮಾನವ ದೇಹವೂ ಮೂಳೆ ಮಾಂಸದ ತಡಿಕೆ ಅಂತ ಹುಣಸೂರರು ಬರೆದಿದ್ದಾರೆ. ಅದನ್ನಷ್ಟೇ ತನ್ಮಯತೆಯಿಂದ ಹಾಡಿದವರು ಪಿ.ಬಿ.ಶ್ರೀನಿವಾಸ್, ಆ ದನಿಗೆ ಜೀವ ತುಂಬಿದವರು ಡಾ. ರಾಜ್ಕುಮಾರ್. ಇಲ್ಲೊಂದು ಯೇಸು ದೇಗುಲ ಮೂಳೆ ಮಾಂಸಗಳ ತಡಿಕೆಯಿಂದ ಸಿಂಗಾರಗೊಂಡಿದೆ. ಇದು ಯೇಸು ದೇಗುಲವೂ ಹೌದು, ರುದ್ರ ಭೂಮಿಯೂ ಹೌದು.

 
ಆಸ್ಟ್ರೀಯಾದ ಚೆಕ್ ಗಣರಾಜ್ಯದ ಕುಟ್ನಾ ಹೋರಾ ಉಪನಗರದ ಚಚ್್ರ ಆಫ್ ಆಲ್ ಸೈಂಟ್್ಸ ಚಚ್್ರ ಪಕ್ಕದಲ್ಲೇ ಒಂದು ಮಂದಿರವಿದೆ. ಸೆಡ್ಲಕ್ ಆಸ್ಹೋರಿ ಅನ್ನೋ ರೋಮನ್ ಕ್ಯಾಥೋಲಿಕ್ ಮಂದಿರ. ಇದನ್ನ ಕೋಸ್್ಟನೀಸ್ ಸೆಡ್ಲಕ್ ಅಂತ್ಲೂ ಕರೆಯುತ್ತಾರೆ. ಒಮ್ಮೆ ಈ ಮಂದಿರದ ಒಳ ಹೊಕ್ಕರೆ ಅವಾಕ್ಕಾಗಿ ಬಿಡ್ತೀರಿ. ಯಾಕಂದ್ರೆ ಮಂದಿರದ ಯಾವ ಮೂಲೆಯನ್ನು ನೋಡಿದ್ರೂ ಬೆಚ್ಚಿ ಬೀಳಿಸೋ ದೃಶ್ಯಗಳೇ ಕಾಣುತ್ತವೆ. ಇಡೀ ಮಂದಿರ ಸಿಂಗಾರ ಗೊಂಡಿರೋದು ಮಾನವನ ಅಸ್ಥಿ ಪಂಜರಗಳಿಂದ. ಈ ಚಚ್್ರನ್ನು ನೋಡಲು ಪ್ರತಿ ವಷ್ರ 2 ಲಕ್ಷ ಜನ ಬರ್ತಾರೆ.
 
 
ಸೆಡ್ಮಕ್ನ ಸಿಸ್ಟಸ್ರಿಯನ್ ಚಚ್್ರನ ಗುರು ಹೆನ್ರಿಯನ್ನು ಬೊಹೇಮಿಯಾದ ದೊರೆ 2ನೇ ಒಟಾಕಾರ್ ಪವಿತ್ರ ಭೂಮಿ ಪ್ಯಾಲೆಸ್ಟೈನ್ಗೆ ಕಳುಹಿಸಿಕೊಟ್ಟಿದ್ದ. ಹಿಂದಿರುಗುವಾಗ ಯೇಸು ದೇವನನ್ನು ಶಿಲುಬೆಗೇರಿಸಿದ ಗೋಲ್ಗಥಾ ಸ್ಥಳದ ಪವಿತ್ರವಾದ ಒಂದಿಷ್ಟು ಮಣ್ಣನ್ನು ತಂದಿದ್ದ. ಆ ಮಣ್ಣನ್ನು ಸೆಡ್ಲಕ್ನ ಒಂದು ಸಮಾಧಿಯ ಮೇಲೆ ಪ್ರೋಕ್ಷಣೆ ಮಾಡಲಾಗಿತ್ತು. ಈ ಧಮ್ರ ಶ್ರದ್ಧೆಯ ಕಾಯ್ರ ಹಲವೆಡೆ ಹರಡಿ, ಸೆಡ್ಲಕ್ ಚಚ್್ರ ಯುರೋಪ್ನ ಬಹು ಮುಖ್ಯ ರುದ್ರಭೂಮಿಯಾಯ್ತು.
 
14ನೇ ಶತಮಾನದ ಮಧ್ಯ ಭಾಗದಲ್ಲಿ ಉಂಟಾದ ಮಾರಕ ಖಾಯಿಲೆಗಳಿಂದ ಸತ್ತ ಅದೆಷ್ಟೋ ಜನರನ್ನು ಇಲ್ಲೇ ಸಂಸ್ಕಾರ ಮಾಡಿದ್ದಾರೆ. 15ನೇ ಶತಮಾನದ ಪ್ರಾರಂಭದಲ್ಲಿ ಜರುಗಿದ ಬೊಹೇಮಿಯಾ ಯುದ್ಧದಲ್ಲಿ ಮಡಿದ ಸಹಸ್ರಾರು ಸೈನಿಕರನ್ನು ಇಲ್ಲೇ ಸಂಸ್ಕಾರ ಡಿದ್ದರು. ಈ  ವೇಳೆ ಈ ಸಂಸ್ಕಾರ ಸ್ಥಳವನ್ನು ವಿಸ್ತರಿಸಲಾಗಿದೆ. ಇನ್ನೂ ವಿಶೇಷ ಅಂದ್ರೆ ಈ ಚಚ್್ರ ನಿಮ್ರಾಣಕ್ಕೆ 40-70 ಸಾವಿರ ಜನ್ರ ಅಸ್ಥಪಂಜರಗಳನ್ನು ಬಳಸಿದ್ದಾರಂತೆ. ದೇಹವೇ ದೇಗುಲವೆಂದು ಬಸವೇಶ್ವರರು ಹೇಳಿದ್ದಾರೆ, ಇಲ್ಲಿ ಅಸ್ಥಿ ಪಂಜರಗಳೂ ದೇಗುಲದ ಸಿಂಗಾರದಲ್ಲಿ ಸೇರಿ ಹೋಗಿವೆ. 

Comments