ದಾಧಲೆಯಿಂದ ಕೆಟ್ಟ ಹೆಸರು ಹೊತ್ತವರು ಸಾಧಿಸಿದ್ದೇನು?

ದಾಧಲೆಯಿಂದ ಕೆಟ್ಟ ಹೆಸರು ಹೊತ್ತವರು ಸಾಧಿಸಿದ್ದೇನು?

17ನೇ ತಾರೀಖಿನ ಪ್ರತಿಭಟನಾತ್ಮಕ ದಾಧಲೆ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ಗೂಂಡಾಗಳಿಗೆ ತದುಕಿ ಜನಜೀವನ ಸುಗಮಗೊಳಿಸುವಲ್ಲಿ ವಿಫಲರಾದರೆಂದು ಕೆಲವು ಪತ್ರಿಕಾ ಓದುಗರೂ ಹಂಗಿಸಿದ್ದರೆ. ಅಂದು ಮಹಾಜನತೆಗೆ ಭೀಕರ ಮಾನಸಿಕ ಯಾತನೆಯಾದದ್ದೇನೋ ನಿಜ. ಆದರೆ ಆ ಅನಾಗರಿಕ ಒರಟರ ಭಯೋತ್ಪಾದನೆ ತಡೆಯುವುದು ಆ ಸಂದರ್ಭದಲ್ಲಿ ಪೊಲಿಸ್‌ ಕಾರ್ಯಾಚರಣೆಯಿಂದ ಸಾಧ್ಯವಾಗುತ್ತಿದ್ದಿಲ್ಲ. ’ಹಿಂಸೆಗೆ ದುಪ್ಪಟ್ಟು ಹಿಂಸೆ’ ನೀತಿ ಯುದ್ಧದಲ್ಲಿ ಸರಿಹೋಗಬಹುದು. ಆದರೆ ಇಲ್ಲಾದರೋ ನಾಗಿರಿಕರಿಗೆ ಅಭೌತಿಕ ಹಿಂಸೆ ಕೊಡುತ್ತಿದ್ದವರು ’ನಾಗಿರಕ ಪಶು’ಗಳು ಮತ್ತು ಪೊಲೀಸರು ಕೊಲೆಪಾತಕ ಸೈನಿಕರಲ್ಲ. ಆ ಸಂದರ್ಭದಲ್ಲಿ ಪೊಲೀಸರು ದೊಣ್ಣೆ ಬೀಸಿದ್ದಿದ್ದರೆ ಅಥವಾ ಗುಂಡು ಹಾರಿಸಿದ್ದರೆ ಅಮಾಯಕ ಜನತೆಗೆ ಸಾವು, ಕಾಲ್ತುಳಿತ, ನೋವುಗಳುಂಟಾಗುತ್ತಿದ್ದುದೇ ಅಲ್ಲದೆ, ಪೊಲೀಸರು ಸಹ ಅನಗತ್ಯ ಕಾನೂನು ತೊಡಕಿನಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗುತ್ತಿತ್ತು. ಅದಾಗದಂತೆ ನೋಡಿಕೊಂಡಿದ್ದು ನಗರ ಪೊಲೀಸರ ವಿವೇಕಶಾಲಿತ್ವವೇ ಹೌದು!
 ದಾಧಲೆಯಿಂದೇನಾತು? ಅತಿಬುದ್ದಿಶಾಲಿಗಳ ’ಅವಾಂತರಿಗಳು’, ’ಅನಾಚಾರಿಗಳು’ ಎಂಬ ವಾಕರಿಕೆಗೊಳಗಾದರು; ಆದರೆ ಈಗಲೂ ಅಲ್ಲಲ್ಲಿ ನಡೆಯುತ್ತಿರಬಹುದಾದ ಪೊಲೀಸ್ ಹಿಂಸಾಚಾರ-ದಬ್ಬಾಳಿಕೆಗಳಿಗೆ ಇದರಿಂದ ಪರೋಕ್ಷವಾಗಿ ಕುಮ್ಮಕ್ಕೇ ಸಿಕ್ಕಿದಂತಾಯಿತು!

Rating
No votes yet

Comments