ನಿನ್ನೊಡನೆ ಪ್ರತಿದಿನ

ನಿನ್ನೊಡನೆ ಪ್ರತಿದಿನ

ಕವನ



ಇಳಿಸಂಜೆ ಹೊತ್ತಲ್ಲಿ
ಸಾಗರದ ಅಂಚಿನಲಿ,
ನೀನೇಕೆ ಕೈಬೀಸಿ ಕರೆದೆ?
 
ಶಶಿ ಬೆಳಗೋ ಸಮಯದಲಿ
ತಂಗಾಳಿ ಅಲೆಯಲ್ಲಿ ,
ಪ್ರೇಮದಾ ಮಳೆಯಾಗಿ ಸುರಿದೆ.

ನಡುರಾತ್ರಿ ಚಳಿಯಲ್ಲಿ
ಕಗ್ಗತ್ತಲೊಡಲಲ್ಲಿ,
ನೀನೇಕೆ ದೂರಾಗಿ ಉಳಿದೆ?.

ಮುಂಜಾನೆ ಮಂಜಿನಲಿ
ರವಿ ಮೂಡೊ ವೇಳೆಯಲಿ,
ಮತ್ತೇಕೆ ಮೌನವನು ಮುರಿದೆ?.

ಉದಯದಾ ಸ್ಪರ್ಶದಲಿ
ಹೊಂಬಣ್ಣ ಕಿರಣದಲಿ,
ಮತ್ತದೇ ಕನಸಾಗಿ ಉಳಿದೆ!!

 

Comments

Submitted by harishsaniha Wed, 09/26/2012 - 10:43

ನಿಮಗೆ ಮದುವೆಯಾಗಿದಿಯೇ ರವಿಕಿರಣ್ ರವರೇ? ಅಥವಾ ಯಾರನ್ನಾದರೂ ಆಳವಾಗಿ ಪ್ರೀತಿಸುತ್ತಿದ್ದೀರ‌? ವೈಯಕ್ತಿಕ‌ ಪ್ರಶ್ಹ್ನೆ ಕ್ಕೇಳಿದಕ್ಕೆ ಕ್ಷಮಿಸಿ