ಪೀತಪತ್ರಿಕೆಯಾಗುತ್ತಿದೆಯೇ ವಿಜಯ ಕರ್ನಾಟಕ?

ಪೀತಪತ್ರಿಕೆಯಾಗುತ್ತಿದೆಯೇ ವಿಜಯ ಕರ್ನಾಟಕ?

Comments

ಬರಹ

ಜೂನ್-3ರ ವಿಜಯ ಕರ್ನಾಟಕದ ಲವಲvk ಯ ಮುಖಪುಟದಲ್ಲಿ ಒಂದು ಸುದ್ದಿ ಬಂದಿದೆ. "ಬಂಗಾರದ ಮನುಷ್ಯ" ಎಂಬ ತಲೆಬಯವನ್ನು ಅದಕ್ಕೆ ನೀಡಲಾಗಿದೆ. ಇದು ಭಾಗ-2 ಅಂತೆ. ಮೊದಲನೇಯದು ಯಾವಾಗ ಬಂತೋ ಗೊತ್ತಿಲ್ಲ.

 

ಇದರಲ್ಲಿ ಬರೆದಿರುವದಾದರೂ ಏನು? ಯಾರೋ ಒಬ್ಬ ಯರ್ರಿಸ್ವಾಮಿ ಅನ್ನುವವರ ಬಗ್ಗೆ.. ಸಿನೆಮಾದಲ್ಲಿ ಹಣಹೂಡಿ ದುಡ್ಡು ಕಳೆದುಕೊಂಡಿದ್ದಾರಂತೆ... ಜಿಮ್ನಾಶಿಯಂಗೆ ಹೋಗಿ ತುಂಬಾ ವರ್ಕ್ಔಟ್ ಮಾಡ್ತಾರಂತೆ... ಈ ವ್ಯಕ್ತಿ ಇನ್ಯಾರಿಗೋ ಐವತ್ತು ಸಾವಿರ ರುಪಾಯಿ ದುಡ್ಡು ಕೊಟ್ಟರಂತೆ... ಆ ದುಡ್ಡು ಇವರ ಅಣ್ಣನ ಸಂಪಾದನೆಯಂತೆ....

 

 

ಇದನ್ನೆಲ್ಲಾ ರಾಜ್ಯದ ನಂ1 ಪತ್ರಿಕೆಯ ಹೆಚ್ಚುವರಿ ಪುಟಗಳ ಮುಖಪುಟದಲ್ಲಿ ಛಾಪಿಸುವ ಅಗತ್ಯವಿತ್ತೇ?

ಜನಸಾಮಾನ್ಯರ ಬದುಕಿನ ವಿವರಗಳನ್ನೆಲ್ಲಾ ಪತ್ರಿಕೆಯಲ್ಲಿ ಪ್ರಕಟಿಸುವುದರಲ್ಲಿ ಏನು ಉದ್ದೇಶವಿದೆ, ಯಾ ಏನು ಸಾಧಿಸಿದಂತಾಗಿದೆ?

ಸ್ಯಾಡಿಸ್ಟ್ ಸಂಪಾದಕನ ಹೊಸ ವಿಕೃತಿಯೇ ಇದು?

 

 

ಇನ್ನು ಲವಲvk ಎಂಬ ಕಲಬೆರಕೆ ಪುಟಗಳಲ್ಲಿ ಇತ್ತೀಚೆಗೆ ಬರುತ್ತಿರುವ ಲೇಖನಗಳನ್ನು ಛಾಯಾಚಿತ್ರಗಳನ್ನು ನೋಡಿದರೆ ಮನೆಮಂದಿಯೆಲ್ಲಾ ಓದುವ ಪತ್ರಿಕೆಯಾಗಿ ಇದು ಉಳಿದಿಲ್ಲ ಎಂದು ಅನಿಸುತ್ತಿಲ್ಲ. ಮೊದಲ ರಾತ್ರಿಯ ಸಮಯದಲ್ಲಿ ನೂತನ ವಧೂವರರಿಗೆ ಹೇಗೆ ಉಪಟಳ ಕೊಡಬಹುದು ಎಂಬುದರ ಬಗ್ಗೆಯೂ ಒಂದು ಲೇಖನವಿತ್ತು ನಿನ್ನೆಯೋ ಮೊನ್ನೆಯೋ. ಅದರೊಂದಿಗಿದ್ದ ಚಿತ್ರವನ್ನು ಯಾರಾದರೂ ತಮ್ಮ ಕುಟುಂಬದವರೊಂದಿಗೆ ಸೇರಿ ನೋಡುವಂತಹದ್ದಾಗಿತ್ತೇ? ಏಕೆ ಈ ಕೆಳಮಟ್ಟದ ಜನಪ್ರಿಯತೆ ಪಡೆಯುವ ಗೋಜಲು?

 

 

ಈ ಪತ್ರಿಕೆಯ ಆನ್-ಲೈನ್ ಆವೃತ್ತಿಯನ್ನು ದಿನವೂ ನೋಡುತ್ತಿದ್ದೆ. ಆದರೆ ಇನ್ನು ಮುಂದೆ ಈ ಬಗ್ಗೆ ಎರಡೆರಡು ಬಾರಿ ಯೋಚಿಸಬೇಕಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet