ಜೊತೆ

ಜೊತೆ

 

ಸುತ್ತ ಮುತ್ತಲು ಮಬ್ಬು ಕಂಡಿರ-
ಲೆತ್ತ ಸಂತಸ ದಣಿದ ಮನಸಿಗೆ?
ಚಿತ್ತವನು ನಲಿಸೀತೆ ಬಣ್ಣದ  ಹಾಯಿರುವ ನಾವೆ?
ಕುತ್ತು ಕಳವಳಗಳನು ತಾ ಮರೆ-
ಸುತ್ತ ತುಂಬಲು ಹುರುಪು ಸಹಚರಿ 
ಮತ್ತೆ ಹಾಯೆನಿಸೀತು ಜೀವಕೆ ಕವಿದ ಮುಸುಕಿನಲು! 
 
-ಹಂಸಾನಂದಿ
 
ಕೊ: ಈ ವಾರದ ಪದ್ಯಪಾನದಲ್ಲಿ ಕೊಟ್ಟಿದ್ದ ಚಿತ್ರಕ್ಕೊಂದು ಕವಿತೆ ಪ್ರಶ್ನೆಗೆ ನನ್ನ ಉತ್ತರ ಇದು. ಆ ಪುಟಕ್ಕೆ ಹೋದರೆ ಇದೇ ಚಿತ್ರಕ್ಕೆ ಹಲವು ಉತ್ತಮ ಉತ್ತರಗಳನ್ನು ಓದಬಹುದು!
 
ಕೊ.ಕೊ: ಈ ಚಿತ್ರ ಕೂಡ ಪದ್ಯಪಾನದಿಂದ ಲೇ ತೆಗೆದುಕೊಂಡದ್ದು. ಅಲ್ಲಿ ಕೂಡ ಕೃಪೆ- ಅಂತರ್ಜಾಲ ಅಂತಷ್ಟೇ ಹಾಕಿದ್ದಾರೆ. ಮೂಲ ಪುಟವನ್ನಿಲ್ಲಿ ನೋಡಬಹುದು (http://padyapaana.com/?p=1236)
Rating
No votes yet

Comments