ಆತ್ಮ ಸಾಹಸ !

ಆತ್ಮ ಸಾಹಸ !

ಕವನ

 


 ಆತ್ಮ  ನನ್ನ  ಆತ್ಮ !


ಮಾಡಬೇಕು ಅದೆಷ್ಟು   ಹರ ಸಾಹಸ 


ನಿನ್ನೊಳಗೆ ಲೀನವಾಗಲು ಪರಮಾತ್ಮ !      


 


ನೀನು ಅನಂತ ನಿತ್ಯ-ನೂತನ ಆನಂದ ಸವಿ


ನಾನು ರಾಗ-ದ್ವೇಷಗಳ  ಬೇವು ಕಹಿ


ನೀನು ಅಮರ ಸಾಗರದ ಅಖಂಡ ಖನಿ


ನಾನು ಮದ-ಮೋಹ, ಮಾತ್ಸರ್ಯದ ಗಣಿ


ನೀನು ಆದಿ ಅಂತ್ಯವಿಲ್ಲದ  ಚಿರ ಚೇತನ !


          ನಾನು  ವಿಕಲ್ಪ 


         ನೀನು  ನಿರ್ವಿಕಲ್ಪ 


ನೀನು ಜನನ-ಮರಣ ಕಾಲಚಕ್ರದಲಿ ನಿಲುಕದ ಸಿಂಧು


ನಾನು ಬದುಕು-ಸಾವಿನ ಸುಳಿವಿನಲಿ ಕೇಂದ್ರ ಬಿಂದು.


 


ಈ ಚಕ್ರವ್ಯೂಹ ಭೇಧಿಸಲು ಕೊಡು ಶಕ್ತಿ


ಸಾವೇ ಸಾವನಪ್ಪಿದ  ಮೇಲೆ ಇನ್ನೆಲ್ಲಿಯ  ಸಾವು


ಪಡೆಯುವುದು   ಆತ್ಮ  ಜೀವನ್ಮುಕ್ತಿ    !


 


ಶ್ರೀನಾಗರಾಜ್.


 


      

Comments