ಶ್ರೀ ಗುರು ರಾಘವೇಂದ್ರ ಅಭಯ

ಶ್ರೀ ಗುರು ರಾಘವೇಂದ್ರ ಅಭಯ

ಕವನ

 


ನಿಮ್ಮ ಮುನ್ನೂರನಲವೊತ್ತಂದರ ಅಬ್ಬರದ ಉತ್ಸವ


ನಮ್ಮ  ಬಾಳಿನಲಿ ವಸಂತೋತ್ಸವ


ಚೈತ್ರದ ಹರುಷ , ಶ್ರಾವಣದ ವರುಷ


ಎಲ್ಲಾ ಒಂದಾಗಿ ಬಂದಿದೆ ಒಲವಲಿ


ನಿಮ್ಮ ಬೃಂದಾವನದ  ಆರಾಧನೆಗೆ.


 


ತುಂಬು ನಿಸರ್ಗವೇ ಹೂವು-ಹಣ್ಣಾಗಿ


ತಾರೆಗಳ ಮಾಲೆ ಧೂಪ- ದೀಪವಾಗಿ


ಬಿದಿಗೆಯ ಚಂದ್ರಮ ನಂದಾದೀಪವಾಗಿ


ಉದಯ ರವಿ ಮಂಗಳ ಆರತಿಯಾಗಿ


ನಿಮ್ಮ ಸೇವಗೈ  ತಂದ  ಭಾಗ್ಯ.


 


ಹರಸಿ  ಎಮ್ಮನು ಮನಃ ಶಾಂತಿಗೆ


ನಿಮ್ಮ ಒಲವೇ ನಮ್ಮ ಬಾಳ ಗೆಲವು


ನಿಮ್ಮ ಅಭಯವೇ ನಮ್ಮ ಜೀವಕೆ ಛಲವು.


 


ಶ್ರೀ ನಾಗರಾಜ್. 


 

Comments