ಪಾಂಡವರ ಗುಹೆ..

ಪಾಂಡವರ ಗುಹೆ..

 ಇದು ಪಾಂಡವರ ಗುಹೆಯ ಚಿತ್ರ. ಒಂದೇ ತರಹದ ಎರಡು ಗುಹೆಗಳು ಇದೆ.  "ಬಹುಷಃ ನಕುಲ, ಸಹದೇವರದಿರಬೇಕು. :) ಭೀಮಾರ್ಜುನರು ಇದರೊಳಗೆ ಇರಲು ಸಾಧ್ಯಾನಾ?" ಅಂತ ಯೋಚಿಸಿ ಸುತ್ತಲೂ ಬೇರೆ ಗುಹೆಗಳಿಗಾಗಿ ಹುಡುಕಿದೆ. ದೈವಸ್ಥಾನಗಳು ಮತ್ತು ಕೆಲ ವಿಗ್ರಹಗಳು ಇದ್ದವು ಆಷ್ಟೇ. ಗುಹೆಯ ಸಮೀಪವೇ ಇದ್ದ ಶಾಸನವನ್ನು ಓದಲು ಪ್ರಯತ್ನಿಸಿದೆ.. ಅರ್ಥ ಆಗಲಿಲ್ಲ :(


ಗುಹೆಯೊಳಗೆ ಸಾಧ್ಯವಾದಷ್ಟು ಹೋಗಲು ಪ್ರಯತ್ನಿಸೋಣ ಎಂದು ಮೊಬೈಲ್ ಬೆಳಕಲ್ಲಿ ಒಳಹೋಗಲು ಪ್ರಯತ್ನಿಸಿದೆ.  ಹೊರಗಿನಿಂದ ಯಾರೋ "ಹಾವು ಚೇಳು ಇದ್ದೀತು.." ಅಂದರು.. ಮಧ್ಯಮ ಪಾಂಡವನ ಬಾಣದಷ್ಟೇ ವೇಗವಾಗಿ ಹಿಂದೆ ಬಂದೆ- ಅಂದ ಮೇಲೆ ಇದು ಪಾಂಡವರ ಗುಹೆಯೇ ಇರಬೇಕು. :)


ಮಳೆ ಬರುವ ಅಂದಾಜಿದ್ದುದರಿಂದ ಬೇಗನೆ ಗುಡ್ಡವಿಳಿದು ಬಂದೆ.(ಗುಡ್ಡ ಅಂದಾಗ ಚಾರಣ ಅಂತ ಹೊರಡಬೇಡಿ. ಒಂದೈವತ್ತು ಮೆಟ್ಟಲಿರಬಹುದಷ್ಟೇ. ಆದರೆ ಆ ಊರಿನಲ್ಲಿ ಅದು ಅತ್ಯಂತ ಎತ್ತರದ ಪ್ರದೇಶ.) ಕೆಳಗೆ ಬರುವಾಗ ಎಡ ಪಕ್ಕದಲ್ಲಿ "ಆಂಜನೇಯ"ನ ದೊಡ್ಡ ವಿಗ್ರಹವಿದೆ.


ಈ ಸ್ಥಳಕ್ಕೆ ನಾನು ಹಿಂದೆ ಐದಾರು ಬಾರಿ ಬಂದಿದ್ದರೂ ಮೇಲಿನ ಪಾಂಡವರ ಗುಹೆ ನೋಡಿರಲಿಲ್ಲ. ಕಾರಣ- ಈ ಕೆರೆಗಳು.  ಆಳ ಜಾಸ್ತಿ ಇಲ್ಲ. ಮಕ್ಕಳನ್ನು ಕರಕೊಂಡು ಬಂದು ಆರಾಮ ನೀರಲ್ಲಿ ಈಜಿಸಬಹುದು.


ಕೆರೆಯ ಪಕ್ಕದಲ್ಲಿ ಸ್ವಲ್ಪ ಮೆಟ್ಟಲು ಹತ್ತಿದರೆ (ಕಾಶಿಯಿಂದಲೇ)  ಸದಾ ಹರಿಯುತ್ತಿರುವ ನೀರು ಗಣಪತಿ ವಿಗ್ರಹದ ಸಮೀಪದಲ್ಲಿದೆ. ಆ ನೀರನ್ನು ಪ್ಲಾಸ್ಟಿಕ್ ಮಗ್‌ನಲ್ಲಿ ತುಂಬಿಸಿ ಕೊಡುವರು. ಅದನ್ನು ತೆಗೆದುಕೊಂಡು, ಅದಕ್ಕೂ ಸ್ವಲ್ಪ ಮೇಲಿರುವ "ಶಿವಲಿಂಗಕ್ಕೆ ನೀವೇ ಅಭಿಷೇಕ ಮಾಡಿ, ಲಿಂಗವನ್ನು ಮುಟ್ಟಿ ತೊಳೆಯಬಹುದು"  ಶಿವಭಕ್ತಿಯಲ್ಲಿ ತನ್ಮಯರಾಗಬೇಡಿ. ನಾವಿನ್ನೂ ಮುಖ್ಯ ದೇವಸ್ಥಾನಕ್ಕೆ ಹೋಗೇ ಇಲ್ಲಾ.. ಈ ಚಿತ್ರ ಅಭಿಷೇಕ ಮಾಡಿದ ಶಿವಲಿಂಗದ ಸಮೀಪದಿಂದ ಮುಖ್ಯ ದೇವಸ್ಥಾನದ ಫೋಟೋ-


ಅಂದಹಾಗೇ ನಾನು ಈ ದೇವಸ್ಥಾನದ ಹೆಸರೇ ಹೇಳಿಲ್ಲ ಅಲ್ಲವಾ?


"ಧರ್ಮಸ್ಥಳದ ಮಂಜುನಾಥ"..


ದೇವಸ್ಥಾನ ಎಲ್ಲರಿಗೂ ಗೊತ್ತಿದದ್ದೇ. ಅಲ್ಲಿಗೆ ಮಂಜುನಾಥ ಹೇಗೆ ಬಂದ? ಆ ಕತೆಯನ್ನು ಇಲ್ಲಿ ಓದಿ- http://kn.wikipedia.org/wiki/%E0%B2%A7%E0%B2%B0%E0%B3%8D%E0%B2%AE%E0%B2%B8%E0%B3%8D%E0%B2%A5%E0%B2%B3


ಅದೇ ಕದ್ರಿ ದೇವಸ್ಥಾನವೇ ಇದು. ಮಂಗಳೂರಿನ ಕೇಂದ್ರಸ್ಥಳದಲ್ಲಿದೆ. ಈ ದೇವಸ್ಥಾನದ ಒಳ ಹೋಗೋಣವಾ?  ಅದರ ಮೊದಲು ಇದರ ಬಗ್ಗೆ ತಿಳಕೊಳ್ಳಬೇಕಾದದ್ದು ಬಹಳ ಬಹಳ ಬಹಳವಿದೆ.. ನಾನು ಹೇಳುವುದಕ್ಕಿಂತ ತಿಳಿದವರೇ ಹೇಳಿದರೆ ಚಂದ ಅಲ್ಲವಾ? ಓದಿ.. http://www.megamedianews.in/16.02.09KadriTemple.htm 


http://www.kamat.com/jyotsna/blog/blog.php?BlogID=1450 


http://www.harekrsna.com/sun/features/09-09/features1490.htm


ಮುಂದಿನ ಬಾರಿ ಧರ್ಮಸ್ಥಳ, ಮಂಗಳೂರು,ಉಡುಪಿ..ಹೀಗೆ ದಕ್ಷಿಣ ಕನ್ನಡದ ಟೂರ್ ಹೊರಟಾಗ, ಕದ್ರಿಯನ್ನು ನೋಡಲು ಮರೆಯದಿರಿ.


-ಗಣೇಶ.


 

Rating
No votes yet

Comments