ಭವಿಷ್ಯ:- (ನಿರಾಶವಾದ)

ಭವಿಷ್ಯ:- (ನಿರಾಶವಾದ)

ಕವನ

 

<p> ದರಿಸಿದವರೆಲ್ಲ ಜಾರು ಹಾದಿ ಹಿಡಿಯುತಿಹರು
<p>ಖಾದಿ ದರಿಸಿದವರು   ಅವರಿಗಿಂತ ಮುಂದೆ ಇಹರು
<p>ಖಾಕಿ ಕಪ್ಪು ವಸ್ತ್ರದವರೆಲ್ಲ ಇವರಿಬ್ಬರ ಜೊತೆ ಸಾಗಿಹರು
<p>ಉಳಿದವರು ಮಣ್ಣು ಮಹಿಳೆ ಮದಿರೆಯ ಹಿಂದೆ ಬಿದ್ದಿಹರು
<p>ಕಣ್ಣು ಮುಚ್ಚಿ ಕುಳಿತರು ಶುದ್ದಾತ್ಮವೊಂದೂ ಕಾಣದಿಹದು
<p>ಎಲ್ಲವು ಕಾಲಪ್ರವಾಹದಿ ಕೊಚ್ಚಿಹೋಗುವ ಭವಿಷ್ಯ ಕಾಣುತಿಹುದು
 
 
<p> ಚಿತ್ರಮೂಲ :  http://www.loadtr.com/85709-pesimist.htm
ಚಿತ್ರ್

Comments

Submitted by partha1059 Mon, 10/15/2012 - 19:43

ಭವಿಷ್ಯ : ನಿರಾಶವಾದ

ಕಾವಿ ದರಿಸಿದವರೆಲ್ಲ ಜಾರು ಹಾದಿ ಹಿಡಿಯುತಿಹರು

ಖಾದಿ ದರಿಸಿದವರು ಅವರಿಗಿಂತ ಮುಂದೆ ಇಹರು

ಖಾಕಿ ಕಪ್ಪು ವಸ್ತ್ರದವರೆಲ್ಲ ಇವರಿಬ್ಬರ ಜೊತೆ ಸಾಗಿಹರು

ಉಳಿದವರು ಮಣ್ಣು ಮಹಿಳೆ ಮದಿರೆಯ ಹಿಂದೆ ಬಿದ್ದಿಹರು

ಕಣ್ಣು ಮುಚ್ಚಿ ಕುಳಿತರು ಶುದ್ದಾತ್ಮವೊಂದೂ ಕಾಣದಿಹದು

ಎಲ್ಲವು ಕಾಲಪ್ರವಾಹದಿ ಕೊಚ್ಚಿಹೋಗುವ ಭವಿಷ್ಯ ಕಾಣುತಿಹುದು

-----------------------
ಮೇಲೆ ತಿದ್ದುವ ಅವಕಾಶವಿಲ್ಲ , ಕ್ಷಮಿಸಿ , ಕಾವಿ ಅಲ್ಲಿ ಬಿಟ್ಟು ಹೋಗಿದೆ

Submitted by H A Patil Mon, 10/15/2012 - 19:49

In reply to by partha1059

ಪಾರ್ಥಸಾರಥಿಯವರಿಗೆ ವಂದನೆಗಳು
' ಭವಿಷ್ಯ ; ನಿರಾಶಾವಾದ ' ವಾಸ್ತವ ಜಗತ್ತಿಗೆ ಹಿಡಿದ ಕೈಗನ್ನಡಿ, ಚಿತ್ರ ಪೂರಕವಾಗಿದೆ, ಕಡಿಮೆ ಸಾಲುಗಳಲ್ಲಿ ಬೃಹತ್ತಾದ ಅರ್ಥ. ಧನ್ಯವಾದಗಳು.

Submitted by venkatb83 Tue, 10/16/2012 - 17:42

In reply to by H A Patil

@ ಗುರುಗಳೇ- ನಿಮ್ಮ ಬರಹ(ಚಿತ್ತ) ತಮ್ಮತ್ ಸುಳಿದದ್ದು ನೋಡಿ
ಆ ಕಾವಿಯವರು ಏನೋ ಮಸಲತ್ತು ಮಾಡಿ -ಕಾವಿ ಬಿಟ್ಟು ಹೋಗೋ ಹಾಗೆ ಮಾಡಿದರೆ???
ಸಕಾಲಿಕ ಬರಹ.ನಮ್ ಮನದಾಳದ ಭಾವನೆಯೂ ಹೌದು...

ಇನೇನು ಕೆಲ ತಿಂಗಳಲ್ಲಿ ನಮ್ ಮುಂದೆ ಕೈ ಕಟ್ಟಿ ಮತ ಕೇಳಲು ಬರ್ವರಲ್ಲ..
ಆಗ ಯೋಚಿಸಿ ಮತ ನೀಡುವ..
ಯೋಗ್ಯರನ್ನೇ ಆರಿಸುವ..
ಜವಾಬ್ಧಾರಿ ನಿಭಾಯಿಸುವ...

ಶುಭವಾಗಲಿ..

\|/

Submitted by ಗಣೇಶ Wed, 10/17/2012 - 00:01

In reply to by venkatb83

>>>

ದರಿಸಿದವರೆಲ್ಲ ಜಾರು ಹಾದಿ ಹಿಡಿಯುತಿಹರು :)
>>>ಮೇಲೆ ತಿದ್ದುವ ಅವಕಾಶವಿಲ್ಲ , ಕ್ಷಮಿಸಿ , ಕಾವಿ ಅಲ್ಲಿ ಬಿಟ್ಟು ಹೋಗಿದೆ :)
>>>ಆ ಕಾವಿಯವರು ಏನೋ ಮಸಲತ್ತು ಮಾಡಿ -ಕಾವಿ ಬಿಟ್ಟು ಹೋಗೋ ಹಾಗೆ ಮಾಡಿದರೆ??? :) :)
ಕಾವಿಯ ಶಕ್ತಿ!
ಗಣೇಶ.
ಬ್ರೇಕಿಂಗ್ ನ್ಯೂಸ್: ಸ್ಟಿಂಗ್ ಕಾರ್ಯಾಚರಣೆ-ಅಂಡಾಂಡಭಂಡರ ಆಶ್ರಮದಲ್ಲಿ!?-ನಿರೀಕ್ಷಿಸಿ..

Submitted by partha1059 Wed, 10/17/2012 - 21:38

In reply to by ಗಣೇಶ

ಭವಿಷ್ಯ ‍ . ನಿರಾಶವಾದ‌

ಪಾಟೀಲರೆ, ಸಪ್ತಗಿರಿಯವರೆ ಹಾಗು ಗಣೇಶರೆ
ನಿಮ್ಮೆಲರ‌ ಪ್ರತಿಕ್ರಿಯೆಗೆ ಧನ್ಯವಾದಗಳು.
ಗಣೇಶರ‌ ಮು0ದಿನ‌ ಕಾರ್ಯಕ್ರಮದ‌ ನಿರೀಕ್ಷೆಯಲ್ಲಿ ‍ ಪಾರ್ಥಸಾರಥಿ
ಪ್ರತಿಕ್ರಿಯೆ ಬರೆಯುವುದು ಕಷ್ಟ ವೆನಿಸುತಿದೆ. ಪ್ರತಿಕ್ರಿಯೆಯಲ್ಲಿ ಬರಹದ‌ ಶೀರ್ಷಿಕೆಯ‌ ಬದಲು ಪ್ರತಿಕ್ರಿಯೆಯ‌ ಶೀರ್ಷಿಕೆ ಕಾಣುವುದು ಹೀಗಾಗ‌ ಯಾವ‌ ಪ್ರತಿಕ್ರಿಯೆ ಯಾರಿಗೆ, ಯಾವ‌ ಬರಹಕ್ಕೆ ಅನ್ನುವುದೆ ತಿಳಿಯುತ್ತಿಲ್ಲ. ಅಲ್ಲದೆ ಪೋನಟಿಕ್ ಕನ್ನಡದಲ್ಲಿ 0 ಉಪಯೋಗಿಸಲು ಆಗುತ್ತಿಲ್ಲ . ಲೇಖನಗಳ‌ / ಪ್ರತಿಕ್ರಿಯೆಗಳ‌ ಎಡಿಟಿಮ್ಗ್ ಸಾದ್ಯವಾಗುತ್ತಿಲ್ಲ. ಗಣೇಶರ‌ ಹೆಸರು ಬರೆಯುವುಗಾಗಲೆ ಷ‌ ಶ‌ ಕಾರ‌ ಟೈಪ್ ಮಾಡುವಲ್ಲಿ ಗೊಮ್ದಲ‌ ! ಎಲ್ಲವು ನಿಧಾನಕ್ಕೆ ಸರಿಹೋಗುವದೆಮ್ಬ ನಿರೀಕ್ಶ್ಹೆಯಲ್ಲಿ ..ಕಾಯುವ‌