ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ
ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ ಚತುರ್ವೇದಿಗಳು ಒಂದು ನೂರುವರ್ಷಗಳಿಂದ ನಾಲ್ಕೂ ವೇದಗಳನ್ನು ಅಭ್ಯಾಸಮಾಡುತ್ತಿದ್ದಾರೆಂಬುದು ಅತ್ಯಂತ ಸಂತಸದ ಮತ್ತು ಆಶ್ಚರ್ಯದ ಸಂಗತಿಯೂ ಹೌದು
Rating
Comments
ರಾಜ್ಯ ಸರ್ಕಾರವು ಶತಾಯುಷಿ ಪಂಡಿತ
ರಾಜ್ಯ ಸರ್ಕಾರವು ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿಯಂತಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅತುತ್ತಮ ಕೆಲಸ ಮಾಡಿದೆ. ಇಂತಹ ದೇಶಪ್ರೇಮಿಗಳನ್ನು ಪುರಸ್ಕಾರಕ್ಕೆ ನಿಧಾನವಾಗಿಯಾದರೂ ಗೌರವಿಸುತ್ತಿರುವುದು ಸಂತಸದ ವಿಷಯ. ಉತ್ತಮವಾದ ಭಾವಚಿತ್ರ ಹಂಚಿಕೊಂಡ ಶ್ರೀಧರರೆ ನಿಮಗೆ ಧನ್ಯವಾದಗಳು
In reply to ರಾಜ್ಯ ಸರ್ಕಾರವು ಶತಾಯುಷಿ ಪಂಡಿತ by Prakash Narasimhaiya
ಪತ್ರಿಕೆಗಳಲ್ಲಿ ಪಂಡಿತರ ವಿಚಾರ
ಪತ್ರಿಕೆಗಳಲ್ಲಿ ಪಂಡಿತರ ವಿಚಾರ ಬರೆಯುವಾಗ ವೇದದ ಬಗೆಗಿನ ಪಂಡಿತರ ಅಧ್ಯಯನ,ತಪಸ್ಸು, ಈ ವಿಚಾರ ಪ್ರಸ್ತಾಪವಾಗಿರುವುದನ್ನು ನಾನು ಗಮನಿಸಿಲ್ಲ. ಇವರೊಬ್ಬ ಗಾಂಧಿವಾದಿ ಎಂದಿಷ್ಟೇ ಬರೆದಿರುವಂತಿದೆ. ನಮ್ಮ ಸರ್ಕಾರದ ಕಾರ್ಯವೈಖರಿ ಹೇಗಿದೆ ನೋಡಿ. ಇಂತಹ ಮಹನೀಯರ ಬಗೆಗೆ ಒಂದಿಷ್ಟು ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ ಇಂತಹ ಸಂದರ್ಭದಲ್ಲಿ ಸುದ್ಧಿಮಾಡಬಾರದೇ? ಅಂತೂ ಪ್ರಶಸ್ತಿ ಕೊಟ್ತರಲ್ಲಾ! ಎಂದು ಸಮಾಧಾನಪದಬೇಕಿದೆ. ಕೆಲವು ಪತ್ರಿಕೆಗಳಲ್ಲಿ ಪಂಡಿತರ ಭಾವಚಿತ್ರವೂ ಕಾನಲಿಲ್ಲ!!