'' ಚುಟುಕುಗಳು 19 ''

'' ಚುಟುಕುಗಳು 19 ''

ಬದುಕಿನ ಅನೇಕ ಪ್ರಶ್ನೆಗಳಿಗೆ


ಉತ್ತರಗಳೇ ಇರುವುದಿಲ್ಲ


ಹಾಗೆಯೆ ಅನೇಕ ಸಮಸ್ಯೆಗಳಿಗೆ 


ಪರಿಹಾರಗಳೂ ಇರುವುದಿಲ್ಲ


ಪರಿಹಾರವಿಲ್ಲದ ಪ್ರಶ್ನೆ  ಸಮಸ್ಯೆಗಳಿಗೆ 


ತಲೆ ಕೆಡಿಸಿಕೊಂಡು ಕೂಡ್ರಬಾರದು


ಜೀವನವೊಂದು ನಿರಂತರ ಜಂಗಮ


 


     *** 


 


ದುಃಖದ ಎದೆತುಂಬಿ


ಉಕ್ಕಿ ಹರಿದಾಗ ಸಂದ 


ಕ್ಷಣ ಕ್ಷಣವೂ ಅನನ್ಯ


ಕಣ್ಣೀರಿಗೆ ದುಃಖ ಮರೆಸುವ


ಅದೆಂತಹ ಶಕ್ತಿಯಿದೆ ?


 


     ***


 


ಹುಟ್ಟಿದ ಮನೆ ಕೊಟ್ಟ  ಮನೆ 


ಎಂಬ ಬೇಧವಿಲ್ಲ ಹೆಣ್ಣಿಗೆ


ಸ್ವದೇಶ ಪರದೇಶವೆಂಬ 


ಬೇಧವಿಲ್ಲ ಭೂಮಿಗೆ


ಹೆಣ್ಣು ಭೂಮಿ ಎಲ್ಲ ಒಂದೆ


ಆಕೆ ವಸುಂಧರೆ

Rating
Average: 1.5 (2 votes)

Comments

Submitted by lpitnal@gmail.com Sun, 11/11/2012 - 09:59

ಹೌದು ಸರ್, ಬದುಕಿನ ಹಲವಾರು ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ ನಮ್ಮ ಸಾಮರ್ಥ್ಯದ ಮಟ್ಟಿಗಾದರೂ.
ದು:ಖ ಪರಿಹಾರದ ಕಣ್ಣೀರು, ದು:ಖವಾದಾಗ ತಾನೇ ತಾನೇ ಬಂದು ದು:ಖ ಶಮನವಾಗಿಸುವ ಕಣ್ಣೀರು..........ಹೆಣ್ಣು ಎಲ್ಲಿಯೂ ಸಲ್ಲುವ ಧರಿತ್ರಿ ತುಂಬ ಚನ್ನಾದ ಸಾಹಿತ್ಯ. ಧನ್ಯವಾದಗಳು.

Submitted by Prakash Narasimhaiya Tue, 11/13/2012 - 20:39

In reply to by H A Patil

ಆತ್ಮೀಯ ಪಾಟೀಲರೆ,
ಪರಿಹಾರವಿಲ್ಲದ ಪ್ರಶ್ನೆಗಳು ಈ ಜಗತ್ತಿನಲ್ಲಿ ಹುಟ್ಟೇ ಇಲ್ಲ. ಆದರೆ, ಪರಿಹಾರ ನಮಗೆ ಗೊತ್ತಿಲ್ಲದೇ ಇರಬಹುದು. ಭಗವಂತನ ನಿಯಮದಲ್ಲಿ ಪರಿಹಾರ ಮೊದಲು, ನಂತರ ಸಮಸ್ಯೆ! ಸ್ವಲ್ಪ ಆಲೋಚಿಸಿ ನೋಡಿ.
ಧನ್ಯವಾದಗಳು.

Submitted by H A Patil Thu, 11/15/2012 - 19:26

In reply to by Prakash Narasimhaiya

ಪ್ರಕಾಶ ಮರಸಿಂಹಯ್ಯ ನವರಿಗೆ ವಂದನೆಗಳು
ಈ ಚುಟುಕುಗಳ ಕುರಿತು ನಿಮ್ಮ ಅಭಿಪ್ರಾಯ ಓದಿದೆ. ಒಂದು ರೀತಿಯಿಂದ ನಿಮ್ಮ ಅಭಿಪ್ರಾಯ ಸರಿ, ಆದರೆ ನಾವು ನಮ್ಮ ಸುತ್ತ ಮುತ್ತಲಿನ ಸಮಾಜ ಜನರು ಮತ್ತು ಪರಿಸರವನ್ನು ಕಂಡು ನಾನು ಆ ರೀತಿ ದಾಖಲಿಸಿದೆ. ಧೃಢ ನಿಶ್ಚಯದವರಿಗೆ ಆತ್ನ ವಿಶ್ವಾಸವಿರುವವರಿಗೆ ಧೈರ್ಯಶಾಲಿ ಗಳ ಕುರಿತು ಹೇಳಬಹುದಾದರೆ ತಮ್ಮ ಅಭಿಪ್ರಾಯ ಸರಿ, ಆದರೆ ಅವಕಾಶವಂಚಿತರಿಗೆ ದುರ್ಬಲ ಮನಸ್ಥಿತಿಯವರಿಗೆ ಬರುವ ಪ್ರಶ್ನೆಗಳು ಪರಿಹಾರ ವಿಲ್ಲದವಾಗುತ್ತವೆ. ಆ ಯೋಚನಾ ಧಾಟಿಯ ಕಾರಣವಾಗಿ ನಾನು ಹಾಗೆ ದಾಖಲಿಸಿದೆ, ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by Prakash Narasimhaiya Thu, 11/15/2012 - 21:50

In reply to by H A Patil

ಆತ್ಮೀಯ ಪಾಟೀಲರೆ
ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ. ಆದರೆ, ಸಕಾರಾತ್ಮಕ ಚಿಂತನೆಯಲ್ಲಿ ಆತ್ಮ ಸ್ತೈರ್ಯ ಹೆಚ್ಚುವ ಬಗೆಗೆ ನನ್ನ ವಿಚಾರ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Fri, 11/16/2012 - 14:29

In reply to by Prakash Narasimhaiya

ಪ್ರಕಾಶ ನರಸಿಂಹಯ್ಯನವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ, <<< ಸಕಾರಾತ್ಮಕ ಚಿಂತನೆಯಲ್ಲಿ ........ನನ್ನ ವಿಚಾರ >>> ಎನ್ನುವ ತಮ್ಮ ಅನಿಸಿಕೆ ಸರಿ, ಆ ವಿಚಾರ ಧಾರೆಯನ್ನು ಎಲ್ಲ ಜನ ಸಾಮಾನ್ಯರು ಅನುಸರಿಸಿದರೆ ಸಮಸ್ಯೆಗಳು ಅವರ ಹತ್ತಿರ ಸುಳಿಯವು, ಹಾಗೆಯೆ ನಾನು ತಮಗೆ ಈ ಮೊದಲು ಬರೆದ ಪ್ರತಿಕ್ರಿಯೆಯಲ್ಲಿ ತಮ್ಮ ಹೆಸರನ್ನು ಅಪ್ಪಾಗಿ ಬೆರಳಚ್ಚು ಮಾಡಿದ್ದೇನೆ ಕ್ಷಮೆಯಿರಲಿ, ಧನ್ಯವ಻ದಗಳು.

Submitted by H A Patil Thu, 11/15/2012 - 19:27

In reply to by Prakash Narasimhaiya

ಪ್ರಕಾಶ ಮರಸಿಂಹಯ್ಯ ನವರಿಗೆ ವಂದನೆಗಳು
ಈ ಚುಟುಕುಗಳ ಕುರಿತು ನಿಮ್ಮ ಅಭಿಪ್ರಾಯ ಓದಿದೆ. ಒಂದು ರೀತಿಯಿಂದ ನಿಮ್ಮ ಅಭಿಪ್ರಾಯ ಸರಿ, ಆದರೆ ನಾವು ನಮ್ಮ ಸುತ್ತ ಮುತ್ತಲಿನ ಸಮಾಜ ಜನರು ಮತ್ತು ಪರಿಸರವನ್ನು ಕಂಡು ನಾನು ಆ ರೀತಿ ದಾಖಲಿಸಿದೆ. ಧೃಢ ನಿಶ್ಚಯದವರಿಗೆ ಆತ್ನ ವಿಶ್ವಾಸವಿರುವವರಿಗೆ ಧೈರ್ಯಶಾಲಿ ಗಳ ಕುರಿತು ಹೇಳಬಹುದಾದರೆ ತಮ್ಮ ಅಭಿಪ್ರಾಯ ಸರಿ, ಆದರೆ ಅವಕಾಶವಂಚಿತರಿಗೆ ದುರ್ಬಲ ಮನಸ್ಥಿತಿಯವರಿಗೆ ಬರುವ ಪ್ರಶ್ನೆಗಳು ಪರಿಹಾರ ವಿಲ್ಲದವಾಗುತ್ತವೆ. ಆ ಯೋಚನಾ ಧಾಟಿಯ ಕಾರಣವಾಗಿ ನಾನು ಹಾಗೆ ದಾಖಲಿಸಿದೆ, ಪ್ರತಿಕ್ರಿಯೆಗೆ ಧನ್ಯವಾದಗಳು.